ಒ ಪಿ ಜೈಶಾ 
ಕ್ರೀಡೆ

ರಿಯೋದಲ್ಲಿ ಜೈಶಾ ನೀರಿನ ವ್ಯವಸ್ಥೆ ಬೇಡ ಎಂದಿದ್ದರು: ಕೋಚ್ ನಿಕೊಲಾಯ್

ರಿಯೋ ಒಲಿಂಪಿಕ್ಸ್​ನಲ್ಲಿ ಕುಡಿಯಲು ನೀರಿಲ್ಲದೆ ನಾನು ಸಾಯುತ್ತಿದ್ದೆ ಎಂದಿದ್ದ ಭಾರತೀಯ ಅಥ್ಲೀಟ್ ಒ.ಪಿ.ಜೈಶಾ ಅವರ ಆರೋಪವನ್ನು ತಳ್ಳಿಹಾಕಿರುವ...

ನವದೆಹಲಿ: ರಿಯೋ ಒಲಿಂಪಿಕ್ಸ್​ನಲ್ಲಿ ಕುಡಿಯಲು ನೀರಿಲ್ಲದೆ ನಾನು ಸಾಯುತ್ತಿದ್ದೆ ಎಂದಿದ್ದ ಭಾರತೀಯ ಅಥ್ಲೀಟ್ ಒ.ಪಿ.ಜೈಶಾ ಅವರ ಆರೋಪವನ್ನು ತಳ್ಳಿಹಾಕಿರುವ ಅವರ ಕೋಚ್ ನಿಕೊಲಾಯ್ ಸ್ನೆಸರ್ವೆ ಅವರು, ಸ್ವತಃ ಜೈಶಾ ಅವರೇ ತಮಗೆ ನೀರಿನ ವ್ಯವಸ್ಥೆ ಬೇಡ ಎಂದಿದ್ದರು ಎಂದು ಹೇಳಿದ್ದಾರೆ. 
ಮ್ಯಾರಥಾನ್ ಓಟದ ಹಿಂದಿನ ದಿನ ದಾರಿ ಮಧ್ಯೆ ನೀರು ಮತ್ತು ಪಾನೀಯದ ವ್ಯವಸ್ಥೆ ಮಾಡುವ ಸಂಬಂಧ ಜೈಶಾ ಅವರೊಂದಿಗೆ ಮಾತುಕತೆ ನಡೆಸಿದ್ದೆವು, ಆದರೆ ಜೈಶಾ ನೀರಿನ ವ್ಯವಸ್ಥೆ ಮಾಡುವುದು ಬೇಡ ಎಂದಿದ್ದರು ಎಂದು ನಿಕೊಲಾಯ್ ಅವರು ಹೇಳಿದ್ದಾರೆ.
ರೇಸ್​ನ ಹಿಂದಿನ ದಿನ ರಾಧಾಕೃಷ್ಣನ್ ನಾಯರ್ ಜೈಶಾಗೆ ಮಾರ್ಗಮಧ್ಯೆ ನೀರು ಮತ್ತು ಪಾನೀಯ ವ್ಯವಸ್ಥೆ ಮಾಡಬೇಕೆ ಎಂದು ಕೇಳಿದ್ದರು. ನಾನು ಜೈಶಾ ಬಳಿ ಮಾತುಕತೆ ನಡೆಸಿದಾಗ ಆಕೆ ನೀರಿನ ವ್ಯವಸ್ಥೆ ಬೇಡ. ಒಲಿಂಪಿಕ್ಸ್ ಆಯೋಜಕರು ಮಾಡಿರುವ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತೇನೆ. ಸಾಮಾನ್ಯ ನೀರನ್ನು ಮಾತ್ರ ಸೇವಿಸುತ್ತೇನೆ ಎಂದು ತಿಳಿಸಿದ್ದರು. ಇದನ್ನು ನಾನು ನಾಯರ್ ಅವರಿಗೆ ತಿಳಿಸಿದ್ದೆ. ಈ ಹಿಂದೆಯೂ ಸಹ ಜೈಶಾ ಆಯೋಜಕರು ನೀಡುವ ಸಾಮಾನ್ಯ ನೀರನ್ನು ಮಾತ್ರ ಉಪಯೋಗಿಸಿ ಹಲವು ರೇಸ್​ಗಳಲ್ಲಿ ಭಾಗವಹಿಸಿದ್ದರು. ಕಳೆದ ವರ್ಷ ಆಗಸ್ಟ್​ನಲ್ಲಿ ಬೀಜಿಂಗ್​ನಲ್ಲಿ ನಡೆದ ವಿಶ್ವ ಚಾಂಪಿಯನ್​ಷಿಪ್​ನಲ್ಲೂ ಸಹ ಆಕೆ ಆಯೋಜಕರು ನೀಡುವ ನೀರನ್ನು ಮಾತ್ರ ಬಳಸಿದ್ದರು ಎಂದು ನಿಕೋಲಾಯ್ ಸ್ಪಷ್ಟನೆ ನೀಡಿದ್ದಾರೆ.
ಅಥ್ಲೀಟ್ ಗಳಿಗೆ ಪ್ರತಿ 2.5 ಕಿ.ಮೀ ಮ್ಯಾರಥಾನ್ ಮುಗಿದ ಬಳಿಕ ರಿಫ್ರೆಶ್ ಮೆಂಟ್ ಪಾಯಿಂಟ್ ಬಳಿ ಇತರೆ ದೇಶಗಳ ಕ್ರೀಡಾಪಟುಗಳ ಜತೆ ಆಯಾ ದೇಶಗಳ ಅಧಿಕಾರಿಗಳು ಇದ್ದು ದುಬಾರಿ ಗ್ಲುಕೋಸ್, ಜೇನುತುಪ್ಪ, ಶಕ್ತಿವರ್ಧಕ ಹಾಗೂ ಪಾನಿಯಾ ನೀಡುತ್ತಾರೆ. ಆದರೆ ನನಗೆ ಕನಿಷ್ಠ ನೀರು ನೀಡುವವರೂ ಇರಲಿಲ್ಲ ಎಂದು ಜೈಶಾ ಆರೋಪಿಸಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಂಕಿತ ದಾಳಿಕೋರ 'ನರಕ ದೇಶ' ಆಫ್ಘಾನಿಸ್ತಾನದಿಂದ ಬಂದವನು, ಇದು ಭಯೋತ್ಪಾದಕ ಕೃತ್ಯ: ನ್ಯಾಷನಲ್ ಗಾರ್ಡ್ ಮೇಲೆ ದಾಳಿಗೆ Donald Trump ತೀವ್ರ ಖಂಡನೆ

ಇದು ಜೈಲಲ್ಲ, ಮದ್ಯದ ಫ್ಯಾಕ್ಟರಿ: ಕೈದಿಗಳಿಂದ ಮದ್ಯ ತಯಾರಿಕೆ? ಏನಾಗುತ್ತಿದೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ?

CM ಕುರ್ಚಿ ಕಸರತ್ತು: ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ, ರಾಹುಲ್-ಸೋನಿಯಾ ಜೊತೆ ಚರ್ಚಿಸಿ ಗೊಂದಲ ಬಗೆಹರಿಸುವೆ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ: ಸಿದ್ದುಗೆ ಪರೋಕ್ಷ ಟಾಂಗ್ ಕೊಟ್ಟರೇ ಡಿಕೆಶಿ..?

ಮೊದಲು ಪರಮೇಶ್ವರ್ ಕೂಲಿ ಚುಕ್ತಾ ಮಾಡಲಿ: ನಂತರ ವಿಧಾನಸಭೆ ವಿಸರ್ಜಿಸಿ ಡಿಕೆಶಿ ನೇತೃತ್ವದಲ್ಲೇ ಚುನಾವಣೆಗೆ ಹೋಗೋಣ!

SCROLL FOR NEXT