ಪಾಕ್ ಕ್ರಿಕೆಟ್ ತಂಡ 
ಕ್ರೀಡೆ

ಜೂನ್ ನಲ್ಲಿ ಏಕದಿನ, ಟಿ20 ಸರಣಿ ನಡೆಸಲು ಹೊಸ ಪ್ರಸ್ತಾವನೆ-ಬಿಸಿಸಿಐ ಕಡೆ ಮತ್ತೆ ಪಿಸಿಬಿ ಸ್ನೇಹ ಹಸ್ತ?

ಭಾರತದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ನಡೆಸಲು ಶತಾಯ ಗತಾಯ ಪ್ರಯತ್ನಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ತನ್ನ ಈ ಕಾರ್ಯದಲ್ಲಿ ಅದೆಷ್ಟೇ...

ನವದೆಹಲಿ: ಭಾರತದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ನಡೆಸಲು ಶತಾಯ ಗತಾಯ ಪ್ರಯತ್ನಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ತನ್ನ ಈ ಕಾರ್ಯದಲ್ಲಿ ಅದೆಷ್ಟೇ ಹಿನ್ನಡೆ, ಅಪಮಾನ, ಟೀಕೆಗಳನ್ನು ಎದುರಿಸಿದರೂ ತನ್ನ ಯತ್ನವನ್ನು ಮಾತ್ರ ನಿಲ್ಲಿಸಿಲ್ಲ.

ಈಗಾಗಲೇ 2015ರ ಅಂತ್ಯಕ್ಕೆ ನಡೆಸಲುದ್ದೇಶಿಸಿದ್ದ ಭಾರತ ಪಾಕಿಸ್ತಾನ ಕ್ರಿಕೆಟ್ ಸರಣಿಯ ಬಗ್ಗೆ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ)ಯ ಅನಾಸಕ್ತಿ ತೋರಿದ್ದರೂ ಮತ್ತೊಂದು ಸರಣಿ ನಡೆಸುವ ಪ್ರಸ್ತಾವನೆಯನ್ನು ಬಿಸಿಸಿಐ ಮುಂದಿಡಲು ನಿರ್ಧರಿಸಲಾಗಿದೆ ಎಂದು ಪಿಸಿಬಿ ಮೂಲಗಳು ಹೇಳಿವೆ.

ಏನಿದು ಹೊಸ ಪ್ರಸ್ತಾವನೆ? : ಹೊಸ ಪ್ರಸ್ತಾವನೆ ಪ್ರಕಾರ, 2016ರ ಜುಲೈ ನಲ್ಲಿ ಮೂರು ಏಕದಿನ ಪಂದ್ಯಗಳ ಹಾಗೂ ಮೂರು ಟಿ20 ಪಂದ್ಯಗಳ ಸರಣಿಯನ್ನು ಜೂನ್ ನಲ್ಲಿ ನಡೆಸಲು ಪಿಸಿಬಿ ಯೋಜಿಸಿದೆ. 2016ರ ಮೇ 29ರಂದು ಇಂಡಿಯನ್ ಪ್ರೀಮಿಯರ್ ಲೀಗ್
(ಐಪಿಎಲ್)ಗೆ ತೆರೆ ಬೀಳಲಿದೆ. ಅದರ ತರುವಾಯವೇ ಪಾಕಿಸ್ತಾನ ವಿರುದ್ಧದ ಸರಣಿಗಳು ಶುರುವಾಗಲಿ ಎಂಬುದು ಪಿಸಿಬಿ ಆಶಯವೆನ್ನಲಾಗಿದೆ.

ಇಂಗ್ಲೆಂಡ್ ನೆಲದಲ್ಲಿ ಸರಣಿ?
: ಕಳೆದ ವರ್ಷಾಂತ್ಯ (2015)ದಲ್ಲಿ ಭಾರತ ಹಾಗೂ ಪಾಕಿಸ್ತಾನ ಸರಣಿಯನ್ನು ದುಬೈನಲ್ಲಿ ನಡೆಸಲುಪಿಸಿಬಿ ಉದ್ದೇಶಿಸಿತ್ತು. ಆದರೆ, ಬಿಸಿಸಿಐ ಮಾತ್ರ ಸರಣಿಯನ್ನು ಶ್ರೀಲಂಕಾದಲ್ಲಿ ನಡೆಸುವ ಇಂಗಿತ ವ್ಯಕ್ತಪಡಿಸಿತ್ತು. ಆದರೆ, ಆನಂತರದ ಬೆಳವಣಿಗೆಗಳಲ್ಲಿ ಅದು ದುಬೈನಲ್ಲೂ ನಡೆಯದೆ, ಶ್ರೀಲಂಕಾದಲ್ಲೂ ನಡೆಯದೇ ಇಡೀ ಪ್ರಸ್ತಾವನೆಯೇ ರದ್ದಾಯಿತು. ಇದೀಗ, ಹೊಸ ಆಲೋಚನೆ ಮಾಡಿರುವ ಪಿಸಿಬಿ, ತಾನು ಮಂಡಿಸಿರುವ ನೂತನ ಪ್ರಸ್ತಾವನೆಯ ಸರಣಿಗಳನ್ನು ಇಂಗ್ಲೆಂಡ್ ನಲ್ಲಿ ನಡೆಸಲು ಯೋಚಿಸಿದೆ.

ಆ ಆಲೋಚನೆಗೆ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ಇ-ಸಿ-ಬಿ) ಬೆಂಬಲ ವ್ಯಕ್ತಪಡಿಸಿರುವುದಾಗಿ ಅದು ಹೇಳಿದೆ. ಈ ಹಿಂದೆಯೂ ಪಿಸಿಬಿಯು 2010ರಲ್ಲಿ ಪಾಕಿಸ್ತಾನ ಆಸ್ಟ್ರೇಲಿಯಾ ಸರಣಿಯನ್ನು ಇಂಗ್ಲೆಂಡ್ ನಲ್ಲೇ ನಡೆಸಿತ್ತು. ಹಾಗಾಗಿ, ಇಂಗ್ಲೆಂಡ್ ತನಗೆ ಸರಣಿ
ಆಯೋಜಿಸಲು ಹೆಚ್ಚಿನ ಅನುಕೂಲಕರ ಎಂದು ಪಿಸಿಬಿ ಮೂಲಗಳು ಹೇಳಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕದ ಸುಂಕ: ಜವಳಿ ವಲಯದ ಒತ್ತಡ ಕಡಿಮೆ ಮಾಡಲು 40 ಪ್ರಮುಖ ಆಮದು ದೇಶ ಗುರುತು

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

SCROLL FOR NEXT