ಬೆಂಗಳೂರು ಬುಲ್ಸ್ 
ಕ್ರೀಡೆ

ಬೆಂಗಳೂರು ಬುಲ್ಸ್ ತಂಡದ ಅನಾವರಣ; ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸೆಣಸು

ದೇಸೀ ಕ್ರೀಡೆಯ ಸೊಬಗನ್ನು ರಾಷ್ಟ್ರೀಯ ಮಟ್ಟದಲ್ಲಿ ಉತ್ತುಂಗಕ್ಕೆ ಕೊಂಡೊಯ್ದ ಪ್ರೋ ಕಬಡ್ಡಿ ಲೀಗ್‍ನ ಮೂರನೇ ಆವೃತ್ತಿಯು ಇದೇ ತಿಂಗಳು 30ರಿಂದ...

ಬೆಂಗಳೂರು: ದೇಸೀ ಕ್ರೀಡೆಯ ಸೊಬಗನ್ನು ರಾಷ್ಟ್ರೀಯ ಮಟ್ಟದಲ್ಲಿ ಉತ್ತುಂಗಕ್ಕೆ ಕೊಂಡೊಯ್ದ ಪ್ರೋ ಕಬಡ್ಡಿ ಲೀಗ್‍ನ ಮೂರನೇ ಆವೃತ್ತಿಯು ಇದೇ ತಿಂಗಳು 30ರಿಂದ ಶುರುವಾಗುತ್ತಿದ್ದು ಬೆಂಗಳೂರು ಬುಲ್ಸ್ ತಂಡ, ತನ್ನ ಮೊದಲ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಸೆಣಸಲಿದೆ.

ಇನ್ನು ಟೂರ್ನಿಯ ಬೆಂಗಳೂರು ಆವೃ ತ್ತಿಯು ಫೆ. 3ರಿಂದ ಆರಂಭಗೊಳ್ಳಲಿದ್ದು, ಆ ಸುತ್ತಿನಲ್ಲಿ ಬುಲ್ಸ್ ತಂಡದ ಮೊದಲ ಎದುರಾಳಿ ಪಟನಾ (ಪಾಟ್ನಾ) ಆಗಲಿದೆ. ಕಳೆದೆರಡು ಆವೃತ್ತಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಪ್ರಶಸ್ತಿ ಸನಿಹ ಬಂದು ಎಡವಿರುವ ಬೆಂಗಳೂರು ಬುಲ್ಸ್ ತಂಡ ಈ ಬಾರಿ ಈ ಕೊರತೆಯನ್ನು ನೀಗಿಕೊಳ್ಳಲು ಪಣ ತೊಟ್ಟಿದೆ.

ಗುರುವಾರ ಹದಿನೇಳು ಯುವ ಆಟಗಾರರಿದ್ದ ತಂಡವನ್ನು ಅನಾವರಣಗೊಳಿಸಲಾದ ಸಂದರ್ಭದಲ್ಲಿ ತಂಡದ ನಾಯಕ ಸುರ್ಜೀತ್ ನರ್ವಾಲ್ ಹಾಗೂ ಕೋಚ್ ರಣಧೀರ್ ಸಿಂಗ್ ಪ್ರಶಸ್ತಿ ಜಯಿಸುವ ವಿಶ್ವಾಸ ವ್ಯಕ್ತಪಡಿಸಿದರು. 'ಕಳೆದ ಆವೃತ್ತಿಯಲ್ಲಿ ರನ್ನರ್‍ಅಪ್‍ಗೆ ಬುಲ್ಸ್ ತಂಡ ತೃಪ್ತಿಪಡಬೇಕಾಯಿತು. ಆದರೆ, ಈ ಬಾರಿ ಫ್ಲೆಯಿಂಗ್ ಮೆಷಿನ್ ಎಂದೇ ಕರೆಯಲಾಗುತ್ತಿರುವ ಸುರ್ಜಿತ್ ನರ್ವಾಲ್ ತಂಡವನ್ನು ಸಮರ್ಥವಾಗಿ ಮುನ್ನಡೆಸುವ ಭರವಸೆ ಇದೆ.

ಬಹುತೇಕ ಯುವ ಆಟಗಾರರಿರುವ ತಂಡ ಕೌಶಲದ ಕೊರತೆಯಿಂದೇನೂ ಕೂಡಿಲ್ಲ'' ಎಂದು ಕೋಚ್ ರಣಧೀರ್ ಸಿಂಗ್ ತಿಳಿಸಿದರು. ಹಣದ ಮಾಯೆ ಕಾರಣ ಬೆಂಗಳೂರು ಬುಲ್ಸ್ ತಂಡದ ಪ್ರಮುಖ ಆಟಗಾರ ಮಂಜಿತ್ ಚಿಲ್ಲರ್ ಅವರು ತಂಡವನ್ನು ತೊರೆಯಲು ಪ್ರಮುಖ ಕಾರಣ ಹಣವಲ್ಲದೆ ಬೇರೇನಲ್ಲ. ಅವರನ್ನೂ ಸೇರಿದಂತೆ ಯಾರನ್ನೂ ನಾವು ತಡೆಯಲಿಲ್ಲ ಎಂದು ಕಾಸ್ಕ್ರಿಕ್ ಸ್ಪೋಟ್ರ್ಸ್ ಲೀಗ್ ಪ್ರೈ.ಲಿ.ನ ಸಿಇಒ ಉದಯ್ ಸಿಂಹ ವಾಲಾ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT