ಕ್ರೀಡೆ

ಸರ್ಫರಾಜ್ ಸಾಹಸದಲ್ಲಿ ಗೆದ್ದ ಭಾರತ ಕಿರಿಯರು

Sumana Upadhyaya

ಮೀರ್ ಪುರ: ನಿರ್ಣಾಯಕ ಘಟ್ಟದಲ್ಲಿ ಭರವಸೆಯ ಬ್ಯಾಟ್ಸ್ ಮನ್ ಸರ್ಫರಾಜ್ ಖಾನ್ ತೋರಿದ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮಾರ್ಗದರ್ಶನದ ಕಿರಿಯ ಭಾರತ ಕ್ರಿಕೆಟ್ ತಂಡ ಹತ್ತೊಂಭತ್ತು ವರ್ಷದೊಳಗಿನವರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದೆ.

ಮೊದಲಿಗೆ ಬ್ಯಾಟ್ ಮಾಡಿದ ಭಾರತ ಆರಂಭದಲ್ಲಿ ನಿಯಮಿತವಾಗಿ ವಿಕೆಟ್ ಕಳೆದುಕೊಂಡು ತತ್ತರಿಸಿತು. ಒಂದು ಹಂತದಲ್ಲಿ 55 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡ ತಂಡಕ್ಕೆ ಸರ್ಫರಾಜ್ ಖಾನ್ ಹಾಗೂ ವಿಕೆಟ್ ಕೀಪರ್ ವಾಷಿಂಗ್ಟನ್ ಸುಂದರ್ ಸಕಾಲದಲ್ಲಿ ತೋರಿದ ಜವಾಬ್ದಾರಿಯುತ ಬ್ಯಾಟಿಂಗ್ ತಂಡದ ನೆರವಿಗೆ ಬಂದಿತು. ಇವರುಗಳ ಜತೆಗೆ ಜೀಶನ್ ಅನ್ಸಾರಿ ಕೂಡ 36 ರನ್ ಗಳಿಸಿ ತಂಡದ ಸ್ಪರ್ಧಾತ್ಮಕ ಮೊತ್ತಕ್ಕೆ ನೆರವಾದರು. ಐರ್ಲೆಂಡ್ ಪರ ಜೋಶುವಾ ಲಿಟ್ಲ್ ಮತ್ತು ರೋರಿ ಆಂಡ್ರೆಸ್ ತಲಾ 3 ವಿಕೆಟ್ ಗಳಿಸಿದರು.

SCROLL FOR NEXT