ಪ್ರಶಸ್ತಿ ಗೆದ್ದ ಸ್ಪೇನ್ ನ ಮುಗರುಜಾ (ಸಂಗ್ರಹ ಚಿತ್ರ) 
ಕ್ರೀಡೆ

ಕೊನೆಗೂ ಗೆದ್ದ ಅಭಿಮಾನಿ; ಮುಗುರುಜಾಗೆ ಫ್ರೆಂಚ್ ಮುಕುಟ

ವಿಶ್ವದ ನಂಬರ್ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ರನ್ನು ಅವರ ಅಭಿಮಾನಿ ಎಂದು ಕರೆದುಕೊಳ್ಳುವ ಫ್ರೆಂಚ್ ನ ಮುಗುರುಜಾ ಅವರು ಸೋಲಿಸುವ ಮೂಲಕ ತಮ್ಮ ಚೊಚ್ಚಲ ಗ್ರಾಂಡ್ ಸ್ಲಾಂ ಗೆದ್ದಿದ್ದಾರೆ.

ಪ್ಯಾರಿಸ್: ವಿಶ್ವದ ನಂಬರ್ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ರನ್ನು ಅವರ ಅಭಿಮಾನಿ ಎಂದು ಕರೆದುಕೊಳ್ಳುವ ಫ್ರೆಂಚ್ ನ ಮುಗುರುಜಾ ಅವರು ಸೋಲಿಸುವ ಮೂಲಕ ತಮ್ಮ ಚೊಚ್ಚಲ ಗ್ರಾಂಡ್ ಸ್ಲಾಂ ಗೆದ್ದಿದ್ದಾರೆ.

ಸೆರೇನಾ ವಿಲಿಯಮ್ಸ್‌ರನ್ನು ಆದರ್ಶವಾಗಿಟ್ಟುಕೊಂಡು ಟೆನಿಸ್ ಆಡಲು ಆರಂಭಿಸಿದ್ದ ಸ್ಪೇನ್  22 ವರ್ಷದ ಚೆಲುವೆ ಗಾರ್ಬಿನ್ ಮುಗುರುಜಾ, ಶನಿವಾರ ತನ್ನ ಫೇವರಿಟ್ ಆಟಗಾರ್ತಿಯನ್ನೇ  ಮಣಿಸಿ ಚೊಚ್ಚಲ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದಿದ್ದಾರೆ. ಶನಿವಾರ ನಡೆದ ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ವಿಶ್ವ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ರನ್ನು 7 -5, 6-4ರಿಂದ ಸೋಲಿಸಿದರು. ಆ ಮೂಲಕ ತಮ್ಮ ಚೊಚ್ಚಲ ಪ್ರಶಸ್ತಿಗೆ ಮುಗರುಜಾ ಮುತ್ತಿಟ್ಟಿರು.

ರೋಲ್ಯಾಂಡ್ ಗ್ಯಾರಸ್‌ನ ಫಿಲಿಪ್ ಚಾರ್ಟ್ ರೀರ್ ಕೋರ್ಟ್‌ನಲ್ಲಿ ನಡೆದ ಪ್ರಶಸ್ತಿ ಫೈನಲ್ ನಲ್ಲಿ ಮುಗುರುಜಾ  21 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡತಿ ಅಮೆರಿಕದ ಸೆರೇನಾ ವಿಲಿಯಮ್ಸ್ ರನ್ನು  ಸೋಲಿಸಿದರು. ಈ ಸೋಲಿನ ಮೂಲಕ 22ನೇ ಗ್ರಾಂಡ್ ಸ್ಲಾಂ ಗೆದ್ದು ಜರ್ಮನಿಯ ಮಾಜಿ ಆಟಗಾರ್ತಿ ಸ್ಟೆಫಿಗ್ರಾಫ್ ಸಾಧನೆಯನ್ನು ಸರಿಗಟ್ಟುವ ಹಾದಿಯಲ್ಲಿ ಸೆರೇನಾ ಮತ್ತೊಮ್ಮೆ ವಿಫಲರಾದರು.  ಕಳೆದ ವಿಂಬಲ್ಡನ್ ಫೈನಲ್‌ನಲ್ಲಿ ಸೆರೇನಾರನ್ನು ಎದುರಿಸಿದ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದ ಮುಗುರುಜಾ ಬಲಿಷ್ಠ ಸರ್ವ್‌ಗಳಿಂದ ಮೇಲುಗೈ ಕಂಡರು. ಬಹುತೇಕ ಪಂದ್ಯಗಳಲ್ಲಿ 2ನೇ  ಸೆಟ್‌ನಲ್ಲೇ ಪುಟಿದೇಳುತ್ತಿದ್ದ ಸೆರೇನಾ ಇಲ್ಲಿ ಮಾತ್ರ ಅದೇ ನಿರ್ವಹಣೆ ತೋರಲು ವಿಫಲರಾದರು.

ಹೀಗಾಗಿ ಗಾರ್ಬಿನ್ ಮುಗುರುಜಾ ವೃತ್ತಿಜೀವನದ ಚೊಚ್ಚಲ ಗ್ರಾಂಡ್ ಸ್ಲಾಂ ಕಿರೀಟ ಮುಡಿಗೇರಿಸಿಕೊಂಡರು. 2015ರ ವಿಂಬಲ್ಡನ್ ಫೈನ್‌ನಲ್ಲಿ ಇದೇ ಮುಗರುಜಾ ಅವರು ಸೆರೇನಾ ವಿರುದ್ಧ  ಸೋತು ರನ್ನರ್‌ಅಪ್ ಆಗಿದ್ದರು.

ಕೊನೆಗೂ ಗೆದ್ದ ಅಭಿಮಾನಿ
ಸೆರೇನಾ ವಿಲಿಯಮ್ಸ್ ಚೊಚ್ಚಲ ಪ್ರತಿಷ್ಠಿತ ಪ್ರಶಸ್ತಿ ಗೆದ್ದಾಗ ವೆನಿಜುವೆಲಾ ಮೂಲದ ಗಾರ್ಬಿನ್ ಮುಗುರುಜಾ ಕೇವಲ 5 ವರ್ಷದವರಾಗಿದ್ದರು. ಮುಗುರುಜಾ ಬಾಲ್ಯದಿಂದಲೇ ಅಮೆರಿಕ  ಆಟಗಾರ್ತಿಯ ದೊಡ್ಡ ಅಭಿಮಾನಿಯಾಗಿದ್ದರು ಮತ್ತು ಅವರೆದುರು ಪ್ರಶಸ್ತಿಗಾಗಿ ಆಡಬೇಕೆಂಬ ಕನಸು ಕಳೆದ ವಿಂಬಲ್ಡನ್‌ನಲ್ಲಿ ಈಡೇರಿದ್ದರೆ, ಈಗ ಸ್ಟಾರ್ ಆಟಗಾರ್ತಿಯನ್ನೇ ಮಣಿಸುವ ಮೂಲಕ  ಭವಿಷ್ಯದ ಸ್ಟಾರ್ ಎನಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT