2020 ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಲಿದೆ:ವಿಜಯ್ ಕುಮಾರ್ 
ಕ್ರೀಡೆ

2020 ರ ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಲಿದೆ:ವಿಜಯ್ ಕುಮಾರ್

2016 ರ ರಿಯೊ ಒಲಿಂಪಿಕ್ಸ್ನಲ್ಲಿ ಭಾರತದ ಶೂಟರ್ ಗಳು ನೀಡಿದ್ದ ಕೆಟ್ತ ಪ್ರದರ್ಶನಕ್ಕೆ ಬದಲು ಬರುವ 2020 ಕ್ರೀಡಾಕೂಟದಲ್ಲಿ ಸುಧಾರಿತ ಪ್ರದರ್ಶನವನ್ನು ನೀಡಲಿದ್ದಾರೆ ವಿಜಯ್ ಕುಮಾರ್

ಇಂಡೋರ್: 2016 ರ ರಿಯೊ ಒಲಿಂಪಿಕ್ಸ್ನಲ್ಲಿ ಭಾರತದ ಶೂಟರ್ ಗಳು ನೀಡಿದ್ದ ಕೆಟ್ತ ಪ್ರದರ್ಶನಕ್ಕೆ ಬದಲು ಬರುವ 2020 ಕ್ರೀಡಾಕೂಟದಲ್ಲಿ ಸುಧಾರಿತ ಪ್ರದರ್ಶನವನ್ನು ನೀಡಲಿದ್ದಾರೆ ಎಂದು ಏಸ್ ಮಾರ್ಕ್ಸ್ ಮ್ಯಾನ್ ವಿಜಯ್ ಕುಮಾರ್ ಇಂದು ತಿಳಿಸಿದ್ದಾರೆ.
ಪದಕ ಭರವಸೆಯಲ್ಲಿದ್ದ ಭಾರತೀಯ ಶೂಟರ್ ಗಳು ರಿಯೊದಲ್ಲಿ ನಡೆದ 2016 ರ ಒಲಂಪಿಕ್ ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಲ್ಲದೆ 12 ಸದಸ್ಯರ ತಂಡವು ಒಂದೇ ಒಂದು ಪದಕವನ್ನು ಗೆದ್ದುಕೊಳ್ಳಲು ಸಹ ವಿಫಲವಾಗಿತ್ತು.
ಶೂಟರ್ ಗಳು ಈ ಅಧ್ಯಾಯವನ್ನು ಹಿಂದೆ ಬಿಟ್ಟು 2020 ರ ಒಲಂಪಿಕ್ ಕ್ರೀಡಾಕೂಟದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಲಿದ್ದಾರೆ ಎಂದು ಭರವಸೆ ನೀಡಿದ್ದಾರೆ.
"2020 ರ ಟೋಕಿಯೋ ಒಲಿಂಪಿಕ್ಸ್ನಲ್ಲಿ ದೇಶದ ಶೂಟರ್ ಗಳು ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದು 2004 ರ ಲಂಡನ್ ಒಲಿಂಪಿಕ್ಸ್ನಲ್ಲಿ 25 ಮೀಟರ್ ರಾಪಿಡ್ ಫೈರ್ ಪಿಸ್ತೋಲ್ನಲ್ಲಿ ನಡೆದ ಬೆಳ್ಳಿ ಪದಕ ಗೆದ್ದ ಕುಮಾರ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
"2004 ರಿಂದ, ದೇಶದ ಶೂಟರ್ ಗಳ ಕಾರ್ಯಕ್ಷಮತೆ ಸುಧಾರಿಸಿದೆ, 2016 ರ ಒಲಂಪಿಕ್ಸ್ನಲ್ಲಿ ನಾವು ಯಾವುದೇ ಪದಕವನ್ನು ಗೆಲ್ಲಲಿಲ್ಲವಾದರೂ, ಕೆಲವೊಂದು ಶೂಟರ್ ಗಳು ತಮ್ಮ ಸಮಾರಂಭದ ಕೊನೆಯ ಸುತ್ತಿನವರೆಗೂ ಹೋದರು ಮತ್ತು ಉತ್ತಮವಾಗಿ ಆಡಿದರು" ಎಂದು ಅವರು ಹೇಳಿದರು.
31 ವರ್ಷ ವಯಸ್ಸಿನ ಕುಮಾರ್ 2020 ಕ್ರೀಡಾಕೂಟದಲ್ಲಿ ನನ್ನ ಕಾರ್ಯಕ್ಷಮತೆಯನ್ನು ಸುಧಾರಿಸಿಕೊಳ್ಳಲು ತರಬೇತುದಾರರ ಸಹಾಯದಿಂದ ತಾನು ಸಹ ತರಬೇತಿ ಪಡೆಯುತ್ತಿದ್ದೇನೆ ಎಂದು ಹೇಳಿದರು.
ಇದಕ್ಕೆ ಮೊದಲು ಕುಮಾರ್ ಮುಂದಿನ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ (2018 ಆಸ್ಟ್ರೇಲಿಯಾದಲ್ಲಿ) ಮತ್ತು ಏಷ್ಯನ್ ಗೇಮ್ಸ್ನಲ್ಲಿ (2018 ಇಂಡೋನೇಷ್ಯಾದಲ್ಲಿ) ಬಾಗವಹಿಸಿ ಉತ್ತಮ ಪ್ರದರ್ಶನ ನೀಡುವ ಗುರಿ ಇಟ್ಟುಕೊಂಡಿದ್ದಾರೆ. 
ಎಮರಾಲ್ಡ್ ಹೈಟ್ಸ್ ಶಾಲೆಯಲ್ಲಿ ರಾಜ್ಯದ ಮಟ್ಟದ ಶೂಟಿಂಗ್ ಸ್ಪರ್ಧೆಯನ್ನು ಉದ್ಘಾಟಿಸಲು ಕುಮಾರ್ ಆಗಮಿಸಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT