ಸಂಗ್ರಹ ಚಿತ್ರ 
ಕ್ರೀಡೆ

ನೀವು ಭಾರತೀಯರಾಗಿ ಉಳಿದಿಲ್ಲ ಎಂದ ವ್ಯಕ್ತಿಗೆ ಸಾನಿಯಾ ಮಿರ್ಜಾ ತಿರುಗೇಟು!

ನೀವು ಭಾರತೀಯರಾಗಿ ಉಳಿದಿಲ್ಲ ಎಂದ ವ್ಯಕ್ತಿಗೆ ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಆತನ ತಲೆ ತಿರುಗುವಂತೆ ಉತ್ತರ ನೀಡಿದ್ದು, ನಾನು ನನ್ನ ಭಾರತ ದೇಶಕ್ಕಾಗಿ ಆಡುತ್ತಿದ್ದೇನೆ, ನಾನು ಭಾರತೀಯಳು ಮತ್ತು ಭಾರತೀಯಳಾಗಿಯೇ ಇರುತ್ತೇನೆ ಎಂದು ಹೇಳಿದ್ದಾರೆ.

ನವದೆಹಲಿ: ನೀವು ಭಾರತೀಯರಾಗಿ ಉಳಿದಿಲ್ಲ ಎಂದ ವ್ಯಕ್ತಿಗೆ ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಆತನ ತಲೆ ತಿರುಗುವಂತೆ ಉತ್ತರ ನೀಡಿದ್ದು, ನಾನು ನನ್ನ ಭಾರತ ದೇಶಕ್ಕಾಗಿ ಆಡುತ್ತಿದ್ದೇನೆ, ನಾನು ಭಾರತೀಯಳು ಮತ್ತು ಭಾರತೀಯಳಾಗಿಯೇ ಇರುತ್ತೇನೆ ಎಂದು ಹೇಳಿದ್ದಾರೆ.
ಕಥುವಾ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್ ಟೈಮ್ಸ್ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದ ಸಾನಿಯಾ, "ಜಗತ್ತಿನ ಮುಂದೆ ನಾವು ಇಂತಹ ಒಂದು ದೇಶವೆಂದು ಅನಿಸಿಕೊಳ್ಳಬೇಕೆಂದು ಬಯಸುತ್ತಿದ್ದೇವೆಯೇ?, ನಮ್ಮ ಜಾತಿ, ವರ್ಣ, ಧರ್ಮ ಹಾಗೂ ಲಿಂಗವನ್ನು ಮರೆತು ಈ ಎಂಟರ ಬಾಲೆಗಾಗಿ ನಾವಿಂದು ಎದ್ದು ನಿಲ್ಲದೇ ಇದ್ದರೆ ನಾವು ಈ ಜಗತ್ತಿನಲ್ಲಿ ಯಾವುದೇ ವಿಚಾರಕ್ಕೂ ಎದ್ದು ನಿಲ್ಲುವವರಾಗುವುದಿಲ್ಲ. ಕನಿಷ್ಠ ಮಾನವತೆಗೂ ಕೂಡ. ನನಗೆ ಅಸಹನೆ ಮೂಡುತ್ತಿದೆ'' ಎಂದು ಸಾನಿಯಾ ಟ್ವೀಟ್ ಮಾಡಿದ್ದರು.
ಸಾನಿಯಾ ಟ್ವೀಟ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆಯಾದರೂ, ಕಿಚು ಕನ್ನನ್ ನಮೋ ಎಂಬ ಟ್ವಿಟರ್ ಖಾತೆದಾರರು, ನಿಮ್ಮ ಎಲ್ಲ ಗೌರವಗಳೊಂದಿಗೆ, ಮೇಡಂ, ನೀವು ಯಾವ ದೇಶದ ಬಗ್ಗೆ ಮಾತನಾಡುತ್ತಿದ್ದೀರಿ. ನೀವು ಒಬ್ಬ ಪಾಕಿಸ್ತಾನಿಯನ್ನು ವಿವಾಹವಾಗಿದ್ದೀರಿ. ನೀವು ಈಗ ಭಾರತೀಯರಲ್ಲ. ನಿಮಗೆ ಟ್ವೀಟ್ ಮಾಡಬೇಕೆಂದಿದ್ದರೆ, ಪಾಕ್ ಉಗ್ರ ಸಂಘಟನೆಗಳಿಂದ ಹತರಾದ ಮುಗ್ಧರ ಬಗ್ಗೆ ಟ್ವೀಟ್ ಮಾಡಿ'' ಎಂದು ಟ್ವೀಟ್ ಮಾಡಿ ಸಾನಿಯಾ ಕಾಲೆಳೆಯು ಪ್ರಯತ್ನ ಮಾಡಿದ್ದರು.
ಆದರೆ ಅವರ ಟ್ವೀಟ್ ಗೆ ಅವರದೇ ಧಾಟಿಯಲ್ಲಿ ಉತ್ತರ ನೀಡಿರುವ ಸಾನಿಯಾ, ಮೊದಲನೆಯದಾಗಿ ಮದುವೆ ಎಂಬುದು ವೈಯುಕ್ತಿಕ ವಿಚಾರ, ಎರಡನೆಯದಾಗಿ ನಿಮ್ಮಂತಹ ಕೀಳು ಜೀವಗಳು ನಾನು ಯಾವ ದೇಶಕ್ಕೆ ಸೇರಿದವಳು ಎಂದು ಹೇಳುವ ಹಾಗಿಲ್ಲ. ನಾನು ಭಾರತಕ್ಕಾಗಿ ಆಡುತ್ತೇನೆ, ನಾನೊಬ್ಬಳು ಭಾರತೀಯಳು ಹಾಗೂ ಮುಂದೆಯೂ ಭಾರತೀಯಳಾಗಿಯೇ ಇರುತ್ತೇನೆ. ನೀವು ಧರ್ಮ ಹಾಗೂ ದೇಶದ ಪರಿಧಿಯನ್ನು ದಾಟಿ ನೋಡಿದರೆ ನೀವು ಕೂಡ ಮಾನವತೆಗಾಗಿ ಎದ್ದು ನಿಲ್ಲುತ್ತೀರಿ'' ಎಂದು ಸಾನಿಯಾ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT