ಕಿಡಂಬಿ ಶ್ರೀಕಾಂತ್ 
ಕ್ರೀಡೆ

ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ ಶಿಪ್: ಕಿಡಂಬಿ ಶ್ರೀಕಾಂತ್ ಪ್ರೀ- ಕ್ವಾರ್ಟರ್ ಫೈನಲ್ ಪ್ರವೇಶ

ಬಿಡಬ್ಲ್ಯೂ ಎಫ್ ವಿಶ್ವ ಚಾಂಪಿಯನ್ ಶಿಫ್ ನ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಸ್ಪೇನ್ ನ ಪ್ಯಾಬ್ಲೊ ಅಬಿಯಾನ್ ವಿರುದ್ಧ ಮೂರು ಗೇಮಿನ ಪಂದ್ಯದಲ್ಲಿ ಹೋರಾಟ ನಡೆಸಿದ ಭಾರತದ ಕಿದಂಬಿ ಶ್ರೀಕಾಂತ್ ಪ್ರೀ- ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ನಾಂಜಿಂಗ್ : ಬಿಡಬ್ಲ್ಯೂ ಎಫ್ ವಿಶ್ವ ಚಾಂಪಿಯನ್ ಶಿಫ್ ನ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ  ಸ್ಪೇನ್ ನ ಪ್ಯಾಬ್ಲೊ ಅಬಿಯಾನ್ ವಿರುದ್ಧ ಮೂರು ಗೇಮಿನ ಪಂದ್ಯದಲ್ಲಿ ಹೋರಾಟ ನಡೆಸಿದ  ಭಾರತದ ಕಿಡಂಬಿ ಶ್ರೀಕಾಂತ್  ಪ್ರೀ- ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಪ್ಯಾಬ್ಲೊ ವಿರುದ್ಧ 62 ನಿಮಿಷಗಳ ಕಾಲ ನಡೆದ  ಎರಡನೇ ಸುತ್ತಿನ ಪಂದ್ಯದಲ್ಲಿ  21-15, 12-21-14 ಅಂತರದಿಂದ  ಐದನೇ ಶ್ರೇಯಾಂಕದ ಭಾರತೀಯ ಆಟಗಾರ ಕಿಡಂಬಿ  ಶ್ರೀಕಾಂತ್  ಪ್ರಬಲ  ಹೋರಾಟ ನಡೆಸಿದರು.

ಕಳೆದ ವರ್ಷ ಶ್ರೀಕಾಂತ್ ನಾಲ್ಕು ಬಾರಿ ಪ್ರಶಸ್ತಿ ಪಡೆದಿದ್ದರು. 2012ರಲ್ಲಿ ಫ್ರೆಂಚ್ ಒಪನ್ ಸಿರಿಸ್ ನಲ್ಲಿ ಗೆದ್ದಿದ್ದ ಮಾಜಿ ಹತ್ತನೇ ಶ್ರೇಯಾಂಕ ಆಟಗಾರ ಮಲೇಷಿಯಾದ ಡೆರೆನ್ ಲಿವು ವಿರುದ್ಧ  ಶ್ರೀಕಾಂತ್ ಗೆಲುವು ಸಾಧಿಸಿದ್ದರು.

ಶ್ರೀಕಾಂತ್  ಆರಂಭಿಕ ಪಂದ್ಯಗಳಲ್ಲಿ 16-13 ರಿಂದ ಮುನ್ನಡೆ ಕಾಯ್ದುಕೊಳ್ಳುವ ಮುನ್ನಾ  2-4 ಮತ್ತು 6-8 ಕೊರತೆಗಳನ್ನು ಅನುಭವಿಸಿದ್ದರು. ನಂತರ  ಪ್ರಬಲ ಹೋರಾಟದ ಮೂಲಕ
ನಾಲ್ಕು ಅಂಕಗಳಿಂದ ಪ್ಯಾಬ್ಲೊ ಅವರನ್ನು ಹಿಮ್ಮೆಟ್ಟಿಸಿದರು.  ಪ್ಯಾಬ್ಲೊ  ಚೇತರಿಸಿಕೊಳ್ಳಲು ಯತ್ನಿಸಿದ್ದರಾದರೂ ಅದಕ್ಕೆ ಭಾರತದ ಆಟಗಾರ ಅವಕಾಶ ಮಾಡಿಕೊಡಲಿಲ್ಲ.

ಎರಡನೇ ಪಂದ್ಯದಲ್ಲಿ, ಶ್ರೀಕಾಂತ್ 6-3 ಮುನ್ನಡೆ ಸಾಧಿಸಿದ್ದರು ಆದರೆ ಪಬ್ಲೊ ಆರು ಪಾಯಿಂಟ್ಗಳ ಮೇಲೆ ಮುಂದಕ್ಕೆ ಸಾಗಿದರು. ಶ್ರೀಕಾಂತ್ 10-12 ರಲ್ಲಿದ್ದರೆ, ಸ್ಪೇನ್ ಆಟಗಾರ ಏಳು ಅಂಕಗಳಿಂದ ಮುಂದಿದ್ದರು.

ನಿರ್ಣಾಯಕ ಪಂದ್ಯದಲ್ಲಿ,  ಬ್ಯಾಬ್ಲೊ 11-9 ಅಂಕಗಳನ್ನು ಪಡೆದು ಅನುಕೂಲ ಮಾಡಿಕೊಂಡಿದ್ದರು. ಆದರೆ ವಿರಾಮದಲ್ಲಿ ಶ್ರೀಕಾಂತ್  ಪುಟಿದೆದ್ದು, ಸ್ಪೇನ್ ಆಟಗಾರ ಪುಟಿದೇಳದಂತೆ ಮಾಡುವ ಮೂಲಕ ಫ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು ಮತ್ತು ಬಂಗಾಳ ಸೇರಿದಂತೆ 5 ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟಿಸಿದ ಚುನಾವಣಾ ಆಯೋಗ!

ಎರಡೆರಡು ಅತ್ಯಾಚಾರ ಆರೋಪ: ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ RCB ವೇಗಿ ಯಶ್ ದಯಾಳ್!

ಕರ್ನಾಟಕ ಉಪ ಚುನಾವಣೆ: ಜೋರಾದ ಟಿಕೆಟ್​​ ಫೈಟ್​​, 'ಕೈ-ಕಮಲ' ಕುತೂಹಲ, ಮೇಟಿ, ಶಾಮನೂರು ಕುಟುಂಬಸ್ಥರಿಗೆ ಮಣೆ?

ಕರ್ನಾಟಕ ಉಪ ಚುನಾವಣೆ: ಬಾಗಲಕೋಟೆ, ದಾವಣಗೆರೆ ದಕ್ಷಿಣದಲ್ಲಿ ಏಪ್ರಿಲ್ 9ರಂದು ಮತದಾನ, ಮೇ 4 ಫಲಿತಾಂಶ

Cricket: 'ಕ್ರಿಕೆಟ್​ನ ಮೌಲ್ಯಗಳನ್ನೇ ನಿರ್ನಾಮ ಮಾಡಿದ್ದಾರೆ': ವಿವಾದಿತ ರನೌಟ್ ಕುರಿತು ಅಮಿರ್ ಆಕ್ರೋಶ

SCROLL FOR NEXT