ಸಂಗ್ರಹ ಚಿತ್ರ 
ಕ್ರೀಡೆ

ಏಷ್ಯನ್ ಗೇಮ್ಸ್: ಬೆಳ್ಳಿ ಗೆದ್ದ ದ್ಯುತಿ ಚಾಂದ್ ಗೆ 1.5 ಕೋಟಿ ರೂ. ನಗದು ಬಹುಮಾನ, ಒಡಿಶಾ ಸರ್ಕಾರ ಘೋಷಣೆ

ಏಷ್ಯನ್ ಗೇಮ್ಸ್ 2018ರ ಕ್ರೀಡಾಕೂಟದಲ್ಲಿ 100 ಓಟದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದು ತಂದ ದ್ಯುತಿ ಚಾಂದ್ ಗೆ ಒಡಿಶಾ ಸರ್ಕಾರ 1.5 ಕೋಟಿ ನಗದು ಬಹುಮಾನ ಘೋಷಿಸಿದೆ.

ಭುವನೇಶ್ವರ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018ರ ಕ್ರೀಡಾಕೂಟದಲ್ಲಿ 100 ಓಟದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದು ತಂದ ದ್ಯುತಿ ಚಾಂದ್ ಗೆ ಒಡಿಶಾ ಸರ್ಕಾರ 1.5 ಕೋಟಿ ನಗದು ಬಹುಮಾನ ಘೋಷಿಸಿದೆ.
ನಿನ್ನೆ ನಡೆದ ಮಹಿಳೆಯರ 100 ಮೀ ಓಟದ ಸ್ಪರ್ಧೆಯ ಫೈನಲ್ ನಲ್ಲಿ ದ್ಯುತಿ ಚಾಂದ್ ಅವರು ಕೂದಲೆಳೆ ಅಂತದರಲ್ಲಿ ಅಗ್ರ ಸ್ಥಾನ ತಪ್ಪಿಸಿಕೊಂಡು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಆ ಮೂಲಕ ದ್ಯುತಿ ಬೆಳ್ಳಿ ಪದಕ ಗೆದ್ದರು. ಬಹ್ರೇನ್ ಮೂಲದ ಓಟಗಾರ್ತಿ ಎಡಿಡಿಯೋಂಗ್ ಓಡಿಯೊಂಗ್ ಅವರು ಒಟ್ಟು 11.30 ಸೆಕೆಂಡ್ ನಲ್ಲಿ ಓಟ ಪೂರ್ತಿ ಮಾಡಿದರೆ, ದ್ಯುತಿ 11.32 ಸೆಕೆಂಡ್ ನಲ್ಲಿ ಓಟ ಪೂರ್ತಿ ಮಾಡಿದ್ದರು. ಆ ಮೂಲಕ ಕೇವಲ .2 ಸೆಕೆಂಡ್ಸ್ ನಲ್ಲಿ ಚಿನ್ನದ ಪದಕ ವಂಚಿತರಾದರು.
ಆದರೂ 2ನೇ ಸ್ಥಾನ ಗಳಿಸುವ ಬೆಳ್ಳಿ ಗೆದ್ದು ರಾಷ್ಟ್ರಕ್ಕೆ ಗೌರವ ತಂದಿತ್ತರು. ದ್ಯುತ್ ಓಟ ಗೆದ್ದ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರು ದ್ಯುತಿ ಅವರ ಸಾಧನೆಯನ್ನು ಕೊಂಡಾಡಿದ್ದರು. ಇದೀಗ ಒಡಿಶಾ ಸರ್ಕಾರ ಅವರಿಗೆ ಬರೊಬ್ಬರಿ 1.5 ಕೋಟಿ ನಗದು ಬಹುಮಾನ ಘೋಷಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕ್ಯಾಬಿನೆಟ್ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT