ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಸ್ವಪ್ನ ಬರ್ಮನ್ 
ಕ್ರೀಡೆ

ಏಷ್ಯನ್ ಚಿನ್ನದ ಪದಕ ವಿಜೇತೆ ಸ್ವಪ್ನ ಬರ್ಮನ್ ಗೆ ಕ್ರೀಡಾ ಇಲಾಖೆಯಿಂದ ಅಡಿಡಾಸ್ ಶೂ

ಏಷ್ಯನ್ ಗೇಮ್ ಚಿನ್ನದ ಪದಕ ವಿಜೇತೆ ಸ್ವಪ್ನ ಬರ್ಮನ್ ಅವರಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ...

ನವದೆಹಲಿ: ಏಷ್ಯನ್ ಗೇಮ್ ಚಿನ್ನದ ಪದಕ ವಿಜೇತೆ ಸ್ವಪ್ನ ಬರ್ಮನ್ ಅವರಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಅಡಿಡಾಸ್ ಕಂಪೆನಿಯ ಶೂವನ್ನು ಭಾರತೀಯ ಕ್ರೀಡಾ ಇಲಾಖೆ ಒದಗಿಸಲಿದೆ. ಭಾರತೀಯ ಕ್ರೀಡಾ ಪ್ರಾಧಿಕಾರ ಅಡಿಡಾಸ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ವಿಶೇಷವಾದ ಶೂವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದೆ.

ಸ್ವಪ್ನ ಅವರ ಸಮಸ್ಯೆಯನ್ನು ತಿಳಿದುಕೊಂಡ ಕ್ರೀಡಾ ಸಚಿವರು ಕೂಡಲೇ ಅವರಿಗೆ ವಿಶೇಷ ಶೂ ಒದಗಿಸುವಂತೆ ನಮಗೆ ಆದೇಶ ನೀಡಿದರು. ನಾವು ಅಡಿಡಾಸ್ ಕಂಪೆನಿಯನ್ನು ಕೇಳಿಕೊಂಡಿದ್ದು ಅವರು ನಮಗೆ ಶೂ ಒದಗಿಸಲು ಮುಂದೆ ಬಂದಿದ್ದಾರೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರಧಾನ ನಿರ್ದೇಶಕ ನೀಲಮ್ ಕಪೂರ್ ತಿಳಿಸಿದ್ದಾರೆ.

ಎರಡೂ ಕಾಲುಗಳಲ್ಲಿ ಆರು ಕಾಲು ಬೆರಳುಗಳನ್ನು ಹೊಂದಿರುವ ಸ್ವಪ್ನ ಬರ್ಮನ್ ಅವರಿಗೆ ಇತರ ಕ್ರೀಡಾಪಟುಗಳು ಬಳಸುವ ಶೂಗಳನ್ನೇ ಆರಂಭದಲ್ಲಿ ನೀಡಲಾಗಿತ್ತು. ಆದರೆ ಅವರಿಗೆ ಅದನ್ನು ಧರಿಸಿ ಕ್ರೀಡೆಯಲ್ಲಿ ಪಾಲ್ಗೊಳ್ಳುವಾಗ ಕಷ್ಟವಾಗಿತ್ತು. ಈ ಸಮಸ್ಯೆ ಕ್ರೀಡಾ ಪ್ರಾಧಿಕಾರದ ಗಮನಕ್ಕೆ ಬಂದಿದ್ದು ಕಳೆದ ತಿಂಗಳು ಜಕಾರ್ತದಲ್ಲಿ ಏಷ್ಯನ್ ಗೇಮ್ಸ್ ನ 18ನೇ ಆವೃತ್ತಿಯಲ್ಲಿ ಹೆಪ್ಟಾಥ್ಲೀಟ್ ವಿಭಾಗದಲ್ಲಿ ಸ್ವಪ್ನ ಚಿನ್ನದ ಪದಕ ಗಳಿಸಿದ್ದಾಗಲೇ. ಅವರು ಹೆಪ್ಟಾಥ್ಲೀಟ್ ನಲ್ಲಿ ಚಿನ್ನದ ಪದಕ ಗಳಿಸಿದ ಮೊದಲ ಭಾರತೀಯೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ತನ್ನ ಗೆಲುವಿನ ನಂತರ ಮಾಧ್ಯಮಗಳೊಂದಿಗೆ ಭಾವಪರವಶರಾಗಿ ಮಾತನಾಡಿದ್ದ ಸ್ವಪ್ನ ತನಗೆ ವಿಶೇಷ ಶೂ ಒದಗಿಸುವಂತೆ ಮನವಿ ಮಾಡಿದ್ದರು. ವಿಷಯ ಗಮನಕ್ಕೆ ಬಂದ ಕೂಡಲೇ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿ ಸಮಸ್ಯೆಯನ್ನು ಶೀಘ್ರವೇ ಇತ್ಯರ್ಥಪಡಿಸುವಂತೆ ಸೂಚಿಸಿದ್ದರು.

ಕ್ರೀಡಾ ಪ್ರಾಧಿಕಾರ ಕೋಲ್ಕತ್ತಾದಲ್ಲಿರುವ  ಸ್ವಪ್ನ ಅವರ ಕೋಚ್ ಗೆ, ಅವರ ಪಾದದ ಅಳತೆ, ಪ್ರೆಶರ್ ಪಾಯಿಂಟ್ ಮತ್ತು ಸಾಂಪ್ರದಾಯಿಕ ಸ್ಪೈಕ್ ನ್ನು ತಿಳಿಸುವಂತೆ ಸೂಚಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT