ಸಂಗ್ರಹ ಚಿತ್ರ 
ಕ್ರೀಡೆ

ಐಎಸ್ಎಸ್‍ಎಫ್ ಶೂಟಿಂಗ್ ವಿಶ್ವಕಪ್: ಭಾರತಕ್ಕೆ ಸ್ವರ್ಣ, ಏಷ್ಯನ್ ಕುಸ್ತಿಯಲ್ಲಿ ದಿವ್ಯಾ, ಮಂಜುಗೆ ಕಂಚು

ಭಾರತದ ಸ್ಟಾರ್ ಶೂಟರ್ ಗಳಾದ ಅಂಜುಮ್ ಮುದಗಿಲ್ -ದಿವ್ಯಾಂಶ್ ಸಿಂಗ್ ಪವಾರ್ ಮತ್ತು ಮನು ಭಾಕರ -ಸೌರಭ್ ಚೌಧರಿ ಚೀನಾದ ಬೀಜಿಂಗ್ ನಲ್ಲಿ ನಡೆಯುತ್ತಿರುವ...

ಬೀಜಿಂಗ್: ಭಾರತದ ಸ್ಟಾರ್ ಶೂಟರ್ ಗಳಾದ ಅಂಜುಮ್ ಮುದಗಿಲ್ -ದಿವ್ಯಾಂಶ್ ಸಿಂಗ್ ಪವಾರ್ ಮತ್ತು ಮನು ಭಾಕರ, ಸೌರಭ್ ಚೌಧರಿ ಚೀನಾದ ಬೀಜಿಂಗ್ ನಲ್ಲಿ ನಡೆಯುತ್ತಿರುವ ಐಎಸ್ಎಸ್‍ಎಫ್ ಶೂಟಿಂಗ್ ವಿಶ್ವಕಪ್ ನ 10 ಮೀಟರ್ ಏರ್ ರೈಫಲ್ ಹಾಗೂ ಪ್ಯಾರಾ ಪಿಸ್ತೂಲ್ ವಿಭಾಗದಲ್ಲಿ ಸ್ವರ್ಣ ಸಾಧನೆ ಮಾಡಿದ್ದಾರೆ. 
ಅಂಜುಮ್ ಹಾಗೂ ದಿವ್ಯಾಂಶಾ ಅವರು ಕೊನೆಯ ಪ್ರಯತ್ನದಲ್ಲಿ 20.6 ಅಂಕ ಕಲೆ ಹಾಕಿ ಮೊದಲ ಸ್ಥಾನ ಭದ್ರ ಪಡಿಸಿಕೊಂಡರು. ಮನು ಹಾಗೂ ಸೌರಭ್ ಜೋಡಿ ಗುರುವಾರ ಎರಡನೇ ಬಂಗಾರ ಪಡೆದು ಬೀಗಿದರು. ಮನು ಜೋಡಿ ಚೀನಾ ಜೋಡಿಯನ್ನು ಬಗ್ಗು ಬಡೆದು ಪ್ರಥಮ ಸ್ಥಾನ ಪಡೆಯಿತು. 
ಮನು ಹಾಗೂ ಸೌರಭ್ ಜೋಡಿ ಐಎಸ್ಎಸ್‍ಎಫ್ ಶೂಟಿಂಗ್ ವಿಶ್ವಕಪ್‍ನಲ್ಲಿ ಸತತ ಎರಡನೇ ಬಂಗಾರ ಗೆದ್ದಿದೆ. ಈ ಜೋಡಿ ಫೆಬ್ರವರಿಯಲ್ಲಿ ನವದೆಹಲಿಯಲ್ಲಿ ನಡೆದಿದ್ದ ಶೂಟಿಂಗ್ ವಿಶ್ವಕಪ್‍ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿತ್ತು. 
ಫೈನಲ್ ಗೂ ಮೊದಲು ನಡೆದ ಕ್ವಾಲಿಫೈಯರ್ ಸುತ್ತಿನಲ್ಲಿ ಮನು ಜೋಡಿ 482 ಅಂಕ  ಪಡೆದು ಐದನೇ ಸ್ಥಾನದಲ್ಲಿತ್ತು. ಆದರೆ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಈ ಜೋಡಿ ಭರ್ಜರಿ ಪ್ರದರ್ಶನ ನೀಡಿತು. ಅರ್ಹತಾ ಸುತ್ತಿನಲ್ಲಿ ದಾಖಲೆಯ ಅಂಕಗಳನ್ನು ಸೇರಿಸಿದ ಜೋಡಿ ಲಯಕ್ಕೆ ಮರಳಿತು.  ಸೌರಭ್ ಚೌಧರಿ ಅವರು ಈಗಾಗಲೇ 2020ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ತಮ್ಮ ಸ್ಥಾನ ಖಚಿತ ಪಡಿಸಿಕೊಂಡಿದ್ದಾರೆ.
ಏಷ್ಯನ್ ಕುಸ್ತಿಯಲ್ಲಿ ದಿವ್ಯಾ, ಮಂಜುಗೆ ಕಂಚು
ಭಾರತದ ದಿವ್ಯಾ ಕಕ್ರನ್ ಹಾಗೂ ಮಂಜು ಕುಮಾರಿ ಅವರು ಏಷ್ಯನ್ ಕುಸ್ತಿ ಚಾಂಪಿಯನ್‍ಶಿಪ್ ನಲ್ಲಿ ಕಂಚಿನ ಪದಕ ಗೆದ್ದು ಕೊಂಡಿದ್ದಾರೆ. 
ಕಕ್ರನ್ 68 ಕೆ.ಜಿ ವಿಭಾಗದಲ್ಲಿ ಮಂಗೋಲಿಯಾದ ಕುಸ್ತಿ ಪಟುವನ್ನು ಮಣಿಸಿದರು. ಮಂಜು ಅವರು ವಿಯೆಟ್ನಾಮ್ ಕುಸ್ತಿ ಪಟು ಥೈ ಹುಂಗ್ ದಾ ಅವರನ್ನು 59 ಕೆ.ಜಿ ವಿಭಾಗದಲ್ಲಿ 11-2 ರಿಂದ ಮಣಿಸಿ ಕಂಚು ಪಡೆದರು. ಇದಕ್ಕೂ ಮೊದಲು ಭಾರತೀಯ ಕುಸ್ತಿ ಪಟುಗಳು 50, 55, 76 ಕೆ.ಜಿ ವಿಭಾಗದ ಕ್ವಾರ್ಟರ್ ಫೈನಲ್ಸ್ ನಲ್ಲಿ ನಿರಾಸೆ ಅನುಭವಿಸಿದ್ದರು. 
ಏಷ್ಯನ್ ಗೇಮ್ಸ್ ನಲ್ಲಿ ಬಂಗಾರ ಬಾಚಿಕೊಂಡ ವಿನೀಶ ಪೋಗಟ್ (53), ಪೂಜಾ ಧಂಡಾ (57), ಒಲಿಂಪಿಕ್ಸ್ ನಲ್ಲಿ ಕಂಚಿನ ಸಾಧನೆ ಮಾಡಿದ ಸಾಕ್ಷಿ ಮಲಿಕ್ (62), ನವಜೋತ್ ಕೌರ್ (65), ಕಿರಣ್ ಬಿ (72) ಶುಕ್ರವಾರ ಕಣಕ್ಕೆ ಇಳಿಯಲಿದ್ದು, ಪದಕ ಆಸೆ ಚಿಗುರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೈಸೂರಿನಲ್ಲಿ ರಾಹುಲ್ ಗಾಂಧಿ ಜತೆ ಸಿದ್ದರಾಮಯ್ಯ, ಡಿಕೆಸಿ ಮಹತ್ವದ ಚರ್ಚೆ; ಬಳಿಕ ಸಿಎಂ ಹೇಳಿದ್ದೇನು? Video

'Ground Ops ಗಾಗಿ ಭಾರತೀಯ ಸೇನೆ ಸಂಪೂರ್ಣ ಸಜ್ಜು: ಪಾಕ್ ಗೆ ವಾರ್ನಿಂಗ್ ನೀಡಿದ ಸೇನಾ ಮುಖ್ಯಸ್ಥ ದ್ವಿವೇದಿ!

ಬ್ಲಿಂಕಿಟ್, ಸ್ವಿಗ್ಗಿ, ಜೆಪ್ಟೊಗೆ 10 ನಿಮಿಷಗಳ ಡೆಲಿವರಿ ಸೇವೆ ನಿಲ್ಲಿಸುವಂತೆ ಸರ್ಕಾರ ಸೂಚನೆ; ಯಾಕೆ ಗೊತ್ತಾ?

'ಹಾವು ಕಚ್ಚಿದೆ ಬೇಗ ಚಿಕಿತ್ಸೆ ಕೊಡಿ'; ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂದ ಆಟೋ ಚಾಲಕ, Video

ಜಮ್ಮು-ಕಾಶ್ಮೀರ: ಇದೇ ಮೊದಲು, ಮಸೀದಿಯ ಇಮಾಮ್ ಸೇರಿದಂತೆ ಎಲ್ಲರ ವೈಯಕ್ತಿಕ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು! ಕಾರಣವೇನು ಗೊತ್ತಾ?

SCROLL FOR NEXT