ರೋಹನ್ ಭೋಪಣ್ಣ 
ಕ್ರೀಡೆ

ಕೆಎಸ್ ಎಲ್ ಟಿ ಎ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ರೋಹನ್ ಬೋಪಣ್ಣ ನೇಮಕ

ಕೆಎಸ್ ಎಲ್ ಟಿ ಎ ಉಪಾಧ್ಯಕ್ಷ ರೋಹನ್ ಬೋಪಣ್ಣ ಅವರನ್ನು ಕೆಎಸ್ ಎಲ್ ಟಿ ಎ ಅಭಿವೃದ್ಧಿ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿ ಕಾರ್ಯಕಾರಿ ಸಮಿತಿ ಆದೇಶ ಹೊರಡಿಸಿದೆ.

ಬೆಂಗಳೂರು: ಕೆಎಸ್ ಎಲ್ ಟಿ ಎ ಉಪಾಧ್ಯಕ್ಷ ರೋಹನ್ ಬೋಪಣ್ಣ ಅವರನ್ನು ಕೆಎಸ್ ಎಲ್ ಟಿ ಎ ಅಭಿವೃದ್ಧಿ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿ ಕಾರ್ಯಕಾರಿ ಸಮಿತಿ ಆದೇಶ ಹೊರಡಿಸಿದೆ.

ರೋಹನ್ ಸಾಕಷ್ಟು ಪರಿಣತಿ ಮತ್ತು ಮೌಲ್ಯ ಹೊಂದಿದ್ದಾರೆ, ಇದರಿಂದ ಕೆಎಸ್ಎಲ್ಟಿಎಗೆ ಒಳ್ಳೆಯದಾಗುತ್ತದೆ, ಅವರು ಯುವ ಆಟಗಾರರನ್ನು ತಂದು ಅವರಿಂದ  ಕೆಲಸ ಮಾಡಿಸುತ್ತಾರೆ. ರಾಜ್ಯದಿಂದ ಆಟಗಾರರು ಹೇಗೆ ಹೊರಹೊಮ್ಮಬಹುದು ಎಂಬುದನ್ನು ಅಭಿವೃದ್ಧಿ ಸಮಿತಿ ಪರಿಶೀಲಿಸಲಿದೆ. ಸಮಿತಿಯು ಇದಕ್ಕಾಗಿ ನೀಲನಕ್ಷೆಯನ್ನು ತಯಾರಿಸಲಿದೆ ಎಂದು ಕೆಎಸ್ ಎಲ್ ಟಿ ಜಂಟಿ ಕಾರ್ಯದರ್ಶಿ ಸುನಿಲ್ ಯಜಮಾನ್ ತಿಳಿಸಿದ್ದಾರೆ.

ಸಮಿತಿಯು 'ವಿಷನ್ 2030' ನ ದೀರ್ಘಾವಧಿಯ ಗುರಿಯನ್ನು ಘೋಷಿಸಿದ್ದು, ಅಧಿಕಾರಿಗಳು ತಮ್ಮ ನಾಲ್ಕು ವರ್ಷಗಳ ಅವಧಿಯಲ್ಲಿ ಕ್ರೀಡೆ ಮತ್ತು ಆಟಗಾರರ ಅಭಿವೃದ್ಧಿಯತ್ತ ಗಮನ ಹರಿಸುತ್ತಾರೆ.  ಶಾಲಾ ಮಟ್ಟದಲ್ಲಿ ಹೆಚ್ಚಿನ ಮಕ್ಕಳಿಗೆ ಕ್ರೀಡೆಗಳಲ್ಲಿ ಆಸಕ್ತಿ ಮೂಡಿಸಲು  ಪ್ರೋತ್ಸಾಹ ಒದಗಿಸುತ್ತಾರೆ ಎಂದು ಹೇಳಿದ್ದಾರೆ.

ಕೆಎಸ್‌ಎಲ್‌ಟಿಎ ರಾಜ್ಯ ಮತ್ತು ಪ್ರಾದೇಶಿಕ ಶಿಬಿರಗಳನ್ನು ಸ್ಥಾಪಿಸಲು ಬಯಸಿದೆ ಮತ್ತು ಭರವಸೆಯ ಆಟಗಾರರಿಗೆ ಹಣಕಾಸಿನ ನೆರವು ನೀಡಲು ಮುಂದಾಗಿದೆ. ಮೂಲಸೌಕರ್ಯದ ದೃಷ್ಟಿಯಿಂದ  ಬೆಂಗಳೂರಿನಲ್ಲಿ ಟೆನಿಸ್ ಸಂಕೀರ್ಣವನ್ನು ರಚಿಸಲು ಬಯಸಲಾಗಿದೆ.

ನಾವು ಶಿಕ್ಷಣ ಮತ್ತು ಕ್ರೀಡಾ ಇಲಾಖೆಗಳೊಂದಿಗೆ ಚರ್ಚಿಸಿ, ಗ್ರಾಮೀಣ ಸ್ಥಳಗಳಲ್ಲಿ ಟೆನಿಸ್ ಕೋರ್ಟ್‌ಗಳಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ,  ಗ್ರಾಮೀಣ ಪ್ರದೇಶಗಳಲ್ಲಿ ಟೆನಿಸ್ ಗ ಉತ್ತೇಜನ ನೀಡಲು ಅವಶ್ಯಕತೆಯಿರುವ ಸೌಲಭ್ಯ ನೀಡುವುದಾಗಿ ತಿಳಿಸಿದ್ದಾರೆ.

ನಮಗೆ ಹೆಚ್ಚಿನ ಸಾರ್ವಜನಿಕ ಟೆನಿಸ್ ಕೋರ್ಟ್ ಬಯಸುತ್ತೇವೆ. ಈ ಪ್ರದೇಶಳಲ್ಲಿ ಟೆನಿಸ್ ಕ್ರೀಡೆ ಹೆಚ್ಚು ಪ್ರಚಾರವಾಗಲು ನಾವು ಬಯಸುತ್ತೇವೆ, ನಾವು ಎಲ್ಲೆಡೆ ಪ್ರತಿಭೆಗಳಿಗಾಗಿ ಅನ್ವೇಷಣೆ ನಡೆಸುತ್ತೇವೆ ಎಂದು ಸುನೀಲ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT