ಗುರ್‌ಪ್ರೀತ್ ಸಿಂಗ್ ನರಸಿಂಗ್ ಯಾದವ್ 
ಕ್ರೀಡೆ

ಕುಸ್ತಿಪಟುಗಳಾದ ನರಸಿಂಗ್, ಗುರ್‌ಪ್ರೀತ್ ಗೆ ಕೊರೋನಾ ಸೋಂಕು ದೃಢ

ಕುಸ್ತಿಪಟುಗಳಾದ ನರಸಿಂಗ್ ಯಾದವ್ (74 ಕೆಜಿ ಫ್ರೀಸ್ಟೈಲ್), ಗುರ್‌ಪ್ರೀತ್ ಸಿಂಗ್ (77 ಕೆಜಿ ಗ್ರೀಕೋ-ರೋಮನ್) ಮತ್ತು ಫಿಸಿಯೋಥೆರಪಿಸ್ಟ್ ವಿಶಾಲ್ ರೈ ಅವರುಗಳಿಗೆ ಕೊರೋನಾವೈರಸ್ ಸೋಂಕು ಖಚಿತವಾಗಿದೆ. 

ಸೋನೇಪತ್(ಹರಿಯಾಣ): ಕುಸ್ತಿಪಟುಗಳಾದ ನರಸಿಂಗ್ ಯಾದವ್ (74 ಕೆಜಿ ಫ್ರೀಸ್ಟೈಲ್), ಗುರ್‌ಪ್ರೀತ್ ಸಿಂಗ್ (77 ಕೆಜಿ ಗ್ರೀಕೋ-ರೋಮನ್) ಮತ್ತು ಫಿಸಿಯೋಥೆರಪಿಸ್ಟ್ ವಿಶಾಲ್ ರೈ ಅವರುಗಳಿಗೆ ಕೊರೋನಾವೈರಸ್ ಸೋಂಕು ಖಚಿತವಾಗಿದೆ. 

ಮೂವರಿಗೂ ಯಾವ ರೋಗಲಕ್ಷಣಗಳಿಲ್ಲ ಮುನ್ನೆಚ್ಚರಿಕೆ ಕ್ರಮವಾಗಿ ಸೋನೇಪತ್ ನ ಭಗವಾನ್ ಮಹಾವೀರ್ ದಾಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ದೀಪಾವಳಿ ವಿರಾಮದ ನಂತರ ಕುಸ್ತಿಪಟುಗಳು ಸೋನೇಪತ್ ನ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್‌ಎಐ) ಪ್ರಾದೇಶಿಕ ಕೇಂದ್ರದಲ್ಲಿನ ರಾಷ್ಟ್ರೀಯ ಶಿಬಿರಕ್ಕೆ ಮತ್ತೆ ಹಾಜರಾಗಿದ್ದರು. ಅಲ್ಲದೆ ಎಸ್‌ಎಐ ವರದಿಯಂತೆ ಸಂಪರ್ಕತಡೆಯನ್ನು ಹೊಂದಿದ್ದರು. ಎಸ್‌ಎಐ ಸ್ಥಾಪಿಸಿದ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳ ಮೇಲೆ ನಿಗಾ ಇರಿಸಿ, ಅವುಗಳನ್ನು 6 ನೇ ದಿನದಂದು (ಶುಕ್ರವಾರ ನವೆಂಬರ್ 27) ಪರೀಕ್ಷಿಸಲಾಗಿ ಶನಿವಾರ ವರದಿ ಬಂದಿದೆ. 

ಈ ಹಿಂದಿನ ದಿನ ಯುಎಸ್ ನಲ್ಲಿ ಕುಸ್ತಿಪಟು ಭಜರಂಗ್ ಪುನಿಯಾ ಅವರಿಗೆ ಒಂದು ತಿಂಗಳ ತರಬೇತಿ ಶಿಬಿರದಲ್ಲಿ ಬಾಗವಹಿಸಲು ಒಪ್ಪಿಗೆ ಸೂಚಿಸಲಾಗಿತ್ತು. ನವೆಂಬರ್ 26 ರಂದು ನಡೆದ 50 ನೇ ಮಿಷನ್ ಒಲಿಂಪಿಕ್ ಸೆಲ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಶಿಬಿರವು ಡಿಸೆಂಬರ್ 4 ರಿಂದ ಜನವರಿ 3 ರವರೆಗೆ ಅಮೆರಿಕದ ಮಿಚಿಗನ್‌ನ ಕ್ಲಿಫ್ ಕೀನ್ ವ್ರೆಸ್ಲಿಂಗ್ ಕ್ಲಬ್‌ನಲ್ಲಿ ನಡೆಯಲಿದೆ.

ಕೊರೋನಾ ಲಾಕ್‌ಡೌನ್ ನಂತರ ತರಬೇತಿ ಶಿಬಿರಗಳನ್ನು ಪುನರಾರಂಭಿಸಿದ ನಂತರ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್‌ಎಐ) ಸೋನೇಪತ್ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಭಜರಂಗ್, ತನ್ನ ತರಬೇತುದಾರ ಎಂಜಾರಿಯೊಸ್ ಬೆಂಟಿನಿಡಿಸ್ ಮತ್ತು ಫಿಸಿಯೋ ಧನಂಜಯ್ ಅವರೊಂದಿಗೆ ಯುಎಸ್‌ಎಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಎಸ್‌ಎಐ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗಲ್ಫ್ ದೇಶಗಳ ಯಾವುದೇ ಬಂದರು ಸುರಕ್ಷಿತವಲ್ಲ; ಅಮೆರಿಕದ ಕ್ರಮ "ಕಡಲ್ಗಳ್ಳತನ"ಕ್ಕೆ ಸಮ: ಇರಾನ್ ಖಡಕ್ ವಾರ್ನಿಂಗ್

LPG Crisis: ಹೃದಯ ಶ್ರೀಮಂತಿಕೆ ಮೆರೆದ ಧ್ರುವ ಸರ್ಜಾ; ಆಟೋ ಚಾಲಕರಿಗೆ 25 ಲಕ್ಷ ರೂ. ನೆರವು - ಸರ್ಕಾರಕ್ಕೆ ಆಕ್ಷನ್‌ ಪ್ರಿನ್ಸ್‌ ಹೇಳಿದ್ದೇನು?

ಗರ್ಭಕೋಶವನ್ನೇ ಕೈಯಿಂದ ಕಿತ್ತು ಬಿಸಾಕೋಣ ಅನಿಸಿತ್ತು; ವಿಪರೀತ ಮೂಡ್ ಸ್ವಿಂಗ್ಸ್: 'ಆ' ದಿನಗಳ ಭೀಕರತೆ ಬಿಚ್ಚಿಟ್ಟ ನಟಿ ಐಶ್ವರ್ಯಾ!

Video: ಅಭಿಮಾನಿ ಎಸೆದ ಹೂವಿನ ಚೆಂಡನ್ನು ಬಾಂಬ್ ಎಂದು ಭಾವಿಸಿ ಹೆದರಿ ಓಡಿದ Thalapathy Vijay?

ಮಹಿಳಾ ಮೀಸಲಾತಿ ಕುರಿತ ಚರ್ಚೆ: ಏ.15 ಕ್ಕೆ ಎಲ್ಲಾ ವಿರೋಧ ಪಕ್ಷಗಳ ಸಭೆ- ಮಲ್ಲಿಕಾರ್ಜುನ ಖರ್ಗೆ

SCROLL FOR NEXT