ಗುರ್‌ಪ್ರೀತ್ ಸಿಂಗ್ ನರಸಿಂಗ್ ಯಾದವ್ 
ಕ್ರೀಡೆ

ಕುಸ್ತಿಪಟುಗಳಾದ ನರಸಿಂಗ್, ಗುರ್‌ಪ್ರೀತ್ ಗೆ ಕೊರೋನಾ ಸೋಂಕು ದೃಢ

ಕುಸ್ತಿಪಟುಗಳಾದ ನರಸಿಂಗ್ ಯಾದವ್ (74 ಕೆಜಿ ಫ್ರೀಸ್ಟೈಲ್), ಗುರ್‌ಪ್ರೀತ್ ಸಿಂಗ್ (77 ಕೆಜಿ ಗ್ರೀಕೋ-ರೋಮನ್) ಮತ್ತು ಫಿಸಿಯೋಥೆರಪಿಸ್ಟ್ ವಿಶಾಲ್ ರೈ ಅವರುಗಳಿಗೆ ಕೊರೋನಾವೈರಸ್ ಸೋಂಕು ಖಚಿತವಾಗಿದೆ. 

ಸೋನೇಪತ್(ಹರಿಯಾಣ): ಕುಸ್ತಿಪಟುಗಳಾದ ನರಸಿಂಗ್ ಯಾದವ್ (74 ಕೆಜಿ ಫ್ರೀಸ್ಟೈಲ್), ಗುರ್‌ಪ್ರೀತ್ ಸಿಂಗ್ (77 ಕೆಜಿ ಗ್ರೀಕೋ-ರೋಮನ್) ಮತ್ತು ಫಿಸಿಯೋಥೆರಪಿಸ್ಟ್ ವಿಶಾಲ್ ರೈ ಅವರುಗಳಿಗೆ ಕೊರೋನಾವೈರಸ್ ಸೋಂಕು ಖಚಿತವಾಗಿದೆ. 

ಮೂವರಿಗೂ ಯಾವ ರೋಗಲಕ್ಷಣಗಳಿಲ್ಲ ಮುನ್ನೆಚ್ಚರಿಕೆ ಕ್ರಮವಾಗಿ ಸೋನೇಪತ್ ನ ಭಗವಾನ್ ಮಹಾವೀರ್ ದಾಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ದೀಪಾವಳಿ ವಿರಾಮದ ನಂತರ ಕುಸ್ತಿಪಟುಗಳು ಸೋನೇಪತ್ ನ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್‌ಎಐ) ಪ್ರಾದೇಶಿಕ ಕೇಂದ್ರದಲ್ಲಿನ ರಾಷ್ಟ್ರೀಯ ಶಿಬಿರಕ್ಕೆ ಮತ್ತೆ ಹಾಜರಾಗಿದ್ದರು. ಅಲ್ಲದೆ ಎಸ್‌ಎಐ ವರದಿಯಂತೆ ಸಂಪರ್ಕತಡೆಯನ್ನು ಹೊಂದಿದ್ದರು. ಎಸ್‌ಎಐ ಸ್ಥಾಪಿಸಿದ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳ ಮೇಲೆ ನಿಗಾ ಇರಿಸಿ, ಅವುಗಳನ್ನು 6 ನೇ ದಿನದಂದು (ಶುಕ್ರವಾರ ನವೆಂಬರ್ 27) ಪರೀಕ್ಷಿಸಲಾಗಿ ಶನಿವಾರ ವರದಿ ಬಂದಿದೆ. 

ಈ ಹಿಂದಿನ ದಿನ ಯುಎಸ್ ನಲ್ಲಿ ಕುಸ್ತಿಪಟು ಭಜರಂಗ್ ಪುನಿಯಾ ಅವರಿಗೆ ಒಂದು ತಿಂಗಳ ತರಬೇತಿ ಶಿಬಿರದಲ್ಲಿ ಬಾಗವಹಿಸಲು ಒಪ್ಪಿಗೆ ಸೂಚಿಸಲಾಗಿತ್ತು. ನವೆಂಬರ್ 26 ರಂದು ನಡೆದ 50 ನೇ ಮಿಷನ್ ಒಲಿಂಪಿಕ್ ಸೆಲ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಶಿಬಿರವು ಡಿಸೆಂಬರ್ 4 ರಿಂದ ಜನವರಿ 3 ರವರೆಗೆ ಅಮೆರಿಕದ ಮಿಚಿಗನ್‌ನ ಕ್ಲಿಫ್ ಕೀನ್ ವ್ರೆಸ್ಲಿಂಗ್ ಕ್ಲಬ್‌ನಲ್ಲಿ ನಡೆಯಲಿದೆ.

ಕೊರೋನಾ ಲಾಕ್‌ಡೌನ್ ನಂತರ ತರಬೇತಿ ಶಿಬಿರಗಳನ್ನು ಪುನರಾರಂಭಿಸಿದ ನಂತರ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಸ್‌ಎಐ) ಸೋನೇಪತ್ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಭಜರಂಗ್, ತನ್ನ ತರಬೇತುದಾರ ಎಂಜಾರಿಯೊಸ್ ಬೆಂಟಿನಿಡಿಸ್ ಮತ್ತು ಫಿಸಿಯೋ ಧನಂಜಯ್ ಅವರೊಂದಿಗೆ ಯುಎಸ್‌ಎಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಎಸ್‌ಎಐ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತ್ರಿಶಾ ವಿರುದ್ಧ ಡಬಲ್ ಮೀನಿಂಗ್ ಹೇಳಿಕೆ: ವಿಚಾರಣೆ ಬಳಿಕ ಠಾಣೆಯಿಂದ ಉದಯನಿಧಿ ಬಿಡುಗಡೆ, ಅಭಿಮಾನಿಗಳಿಂದ ಸಂಭ್ರಮ!

ಅಶ್ಲೀಲ ಜೋಕ್‌ಗಳು ಸ್ವೀಕಾರಾರ್ಹವಲ್ಲ; ಉದಯನಿಧಿ ವಿರುದ್ಧದ ಪೊಲೀಸರ ಕ್ರಮ ಸರಿಯಾಗಿದೆ: ನಟಿ ಕಂಗನಾ ರಣಾವತ್

PoK ಚುನಾವಣೆ ಒಂದು ನೆಪ; ಪ್ರತಿಭಟನೆಯನ್ನು ಹತ್ತಿಕ್ಕಲು ಗುಂಡುಗಳ ಬಳಕೆ: ಭಾರತ ಖಂಡನೆ

ಸಂಪುಟ ವಿಸ್ತರಣೆ ಸರ್ಕಸ್ ನಂತರ ಖಾತೆ ಹಂಚಿಕೆ ಕಸರತ್ತು; ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಪೂರ್ಣ ಪಟ್ಟಿ

'ನನ್ನ ಅಮ್ಮ ಒಂಥರಾ ಗೂಢಚಾರಿ ಇದ್ದಂತೆ; ಅಪ್ಪ CM ಆಗಿದ್ದು ಐತಿಹಾಸಿಕ ಕ್ಷಣ': ಫಸ್ಟ್ ಟೈಮ್ ಮನಬಿಚ್ಚಿ ಮಾತನಾಡಿದ ವಿಜಯ್ ಪುತ್ರ!