ಭಿಮ್ಲಾ ಮುಂಡಾ 
ಕ್ರೀಡೆ

ರಾಷ್ಟ್ರ ಮಟ್ಟದ ಕರಾಟೆ ಪಟುವಿಗೆ ಕಡು ಬಡತನ: ಜೀವನಕ್ಕಾಗಿ ರೈಸ್ ಬಿಯರ್ ಮಾರಾಟ

ಬಡತನದ ಕಾರಣಕ್ಕೆ ರಾಷ್ಟ್ರೀಯ ಕರಾಟೆ ಪದಕ ವಿಜೇತೆ ರಾಂಚಿಯ ಬಿಮ್ಲಾ ಮುಂಡಾ ಅವರು ಅಕ್ಕಿ ಬಿಯರ್ (ರೈಸ್ ಬಿಯರ್) ಮಾರಾಟ ಮಾಡುತ್ತಿದ್ದಾರೆ. 

ರಾಂಚಿ: ಬಡತನದ ಕಾರಣಕ್ಕೆ ರಾಷ್ಟ್ರೀಯ ಕರಾಟೆ ಪದಕ ವಿಜೇತೆ ರಾಂಚಿಯ ಬಿಮ್ಲಾ ಮುಂಡಾ ಅವರು ಅಕ್ಕಿ ಬಿಯರ್ (ರೈಸ್ ಬಿಯರ್) ಮಾರಾಟ ಮಾಡುತ್ತಿದ್ದಾರೆ. 

26 ವರ್ಷದ ಬಿಮ್ಲಾ ಅವರು ಜಾರ್ಖಂಡ್ ರಾಜ್ಯವನ್ನು ಪ್ರತಿನಿಧಿಸಿ ಹಲವು ಪದಕಗಳು ಹಾಗೂ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 
ಜಾರ್ಖಂಡ್‌ನಲ್ಲಿ 2011ರಲ್ಲಿ ನಡೆದ 34ನೇ ನ್ಯಾಶನಲ್ ಗೇಮ್‌ನಲ್ಲಿ ಬೆಳ್ಳಿಯ ಪದಕ ಗಳಿಸಿದ್ದಾರೆ. ಅಲ್ಲದೆ, ಜಾರ್ಖಂಡ್‌ನಿಂದ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಜೀವನ ಸಾಗಿಸಲು ಅವರು ಈ ವರ್ಷ ಫೆಬ್ರವರಿಯಲ್ಲಿ ಕರಾಟೆ ತರಬೇತಿ ಕೇಂದ್ರ ಆರಂಭಿಸಿದ್ದರು. ಆದರೆ, ಕೊರೋನ ಸಾಂಕ್ರಾಮಿಕ ಹರಡುತ್ತಿರುವ ಹಿನ್ನೆಲೆಯಲ್ಲಿ ಘೋಷಿಸಲಾಗಿದ್ದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅದನ್ನು ಮುಚ್ಚಿದ್ದರು.

ವಾಣಿಜ್ಯ ಪದವೀಧರೆಯಾಗಿರುವ ಬಿಮ್ಲಾ ಪ್ರಸ್ತುತ ತನ್ನ 84 ವರ್ಷದ ಅಜ್ಜಿಯೊಂದಿಗೆ ರಾಂಚಿಯ ಕಂಕೆ ಬ್ಲಾಕ್‌ನಲ್ಲಿ ವಾಸಿಸುತ್ತಿದ್ದಾರೆ. ಅವರ ಪೋಷಕರು ಸಗ್ರಾಮ್‌ಪುರದಲ್ಲಿದ್ದಾರೆ.  ಸಣ್ಣ ಕೃಷಿಕರಾಗಿರುವ ಅವರ ತಂದೆ ಬಿಮ್ಲಾ ಹಾಗೂ ಇತರ ಐದು ಮಕ್ಕಳನ್ನು ಫೋಷಿಸಲು ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. 

ಲಾಕ್‌ಡೌನ್ ಹಿನ್ನೆಲೆಯಲ್ಲಿ ಕರಾಟೆ ತರಬೇತಿ ಕೇಂದ್ರವನ್ನು ಮಚ್ಚಬೇಕಾಯಿತು. ಆದುದರಿಂದ ಈ ಅಕ್ಕಿ ಬಿಯರ್ ಮಾರಾಟ ಮಾಡಲು ಆರಂಭಿಸಿದೆ ಎಂದು ಅವರು ಹೇಳಿದ್ದಾರೆ.

ತಾನು ಪದಕ ಮತ್ತು ಪ್ರಶಸ್ತಿ ಗಳಿಸಿದ ಮೇಲೆ ಸರ್ಕಾರದಿಂದ ಉದ್ಯೋಗ ಸ್ಕಾಲರ್ ಶಿಪ್ ಸಿಗುವ ಭರವಸೆ ಹೊಂದಿದ್ದೆ, ಆದರೆ ಅದು ಯಾವುದು ಸಿಗಲಿಲ್ಲ, ಪದಕ ಸಿಕ್ಕಾಗ ನಾನು ತುಂಬಾ ಹೆಮ್ಮೆ ಪಟ್ಟಿದ್ದೆ, ಆದರೆ ನಂತರದ ದಿನಗಳಲ್ಲಿ ಸತ್ಯದ ಅರಿವಾಯಿತು, ರಾಜ್ಯ ಸರ್ಕಾರದಿಂದ ನನಗೆ ಯಾವುದೇ ಆರ್ಥಿಕ ಸಹಾಯ ದೊರೆಯಲಿಲ್ಲ, ಜೀವನ ಮಾಡಲು ಅಕ್ಕಿ ಬಿಯರ್ ಮಾರಾಟ ಮಾಡಬೇಕಾಯಿತು ಎಂದು ಹೇಳಿದ್ದಾರೆ.

ಪದಕ ಕಳಿಸಿದವರಿಗೆ ಮತ್ತು ಕ್ರೀಡಾಪಟುಗಳಿಗೆ ನೇರ ನೇಮಕಾತಿಯಲ್ಲಿ ಅವಕಾಶ ನೀಡಲಾಗುವುದು ಎಂದು ಹಿಂದಿನ ಸರ್ಕಾರ ಘೋಷಿಸಿತ್ತು, ಆದರೆ ಸರ್ಕಾರ ಈ ದಿಸೆಯಲ್ಲಿ ಯಾವುದೇ ಕಾರ್ಯ ಮಾಡಲಿಲ್ಲ ಎಂದು ತಿಳಿಸಿದ್ದಾರೆ.

ಈ ವಿಷಯ ತಿಳಿದ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಬಿಮ್ಲಾ ಮುಂಡಾ ಅವರಿಗೆ ತಕ್ಷಣವೇ ಪರಿಹಾರ ನೀಡಬೇಕೆಂದು ಕ್ರೀಡಾ ಕಾರ್ಯದರ್ಶಿಗೆ ಸೂಚಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT