ಕ್ರೀಡೆ

ಯೂತ್ ವರ್ಲ್ಡ್ ಚಾಂಪಿಯನ್‌ಶಿಪ್‌: ಎಂಟು ಭಾರತೀಯ ಬಾಕ್ಸರ್ ಗಳು ಫೈನಲ್ ಪ್ರವೇಶ

ಎಐಬಿಎ ಯೂತ್ ಮೆನ್ಸ್ ಮತ್ತು ವುಮೆನ್ಸ್ ವರ್ಲ್ಡ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯರು ಐತಿಹಾಸಿಕ ಪ್ರದರ್ಶನ ನಿಡುವುದರೊಡನೆ ಏಳು ಮಹಿಳೆಯರು ಮತ್ತು ಓರ್ವ ಪುರುಷ ಬಾಕ್ಸರ್ ಸೇರಿದಂತೆ 8 ಬಾಕ್ಸರ್‌ಗಳು ಪೋಲೆಂಡ್‌ನ ಕೀಲ್ಸ್‌ನಲ್ಲಿ ನಡೆದ ಸ್ಪರ್ಧೆಯ ಎಂಟನೇ ದಿನದಂದು ಫೈನಲ್ ಪ್ರವೇಶಿಸಿದ್ದಾರೆ.

ನವದೆಹಲಿ: ಎಐಬಿಎ ಯೂತ್ ಮೆನ್ಸ್ ಮತ್ತು ವುಮೆನ್ಸ್ ವರ್ಲ್ಡ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯರು ಐತಿಹಾಸಿಕ ಪ್ರದರ್ಶನ ನೀಡುವುದರೊಡನೆ ಏಳು ಮಹಿಳೆಯರು ಮತ್ತು ಓರ್ವ ಪುರುಷ ಬಾಕ್ಸರ್ ಸೇರಿದಂತೆ 8 ಬಾಕ್ಸರ್‌ಗಳು ಪೋಲೆಂಡ್‌ನ ಕೀಲ್ಸ್‌ನಲ್ಲಿ ನಡೆದ ಸ್ಪರ್ಧೆಯ ಎಂಟನೇ ದಿನದಂದು ಫೈನಲ್ ಪ್ರವೇಶಿಸಿದ್ದಾರೆ.

ಎಂಟು ಫೈನಲಿಸ್ಟ್‌ಗಳಲ್ಲದೆ, ಇತರ ಮೂವರು ಕಂಚಿನ ಪದಕಕ್ಕಾಗಿ ಸೆಣೆಸಲಿದ್ದಾರೆ. ಇದರ ಮೂಲಕ ಭಾರತ ಒಟ್ಟಾರೆ 11 ಪದಕಗಳನ್ನು ಪಡೆಯುವುದು ಖಾತ್ರಿಯಾಗಿದೆ. ಇದಕ್ಕೆ ಮುನ್ನ ಹಂಗೇರಿಯಲ್ಲಿ 2018 ರಲ್ಲಿ ನಡೆದ ವಿಶ್ವ ಯುವ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ತಂಡವು 10 ಪದಕಗಳನ್ನು ಗಳಿಸಿತ್ತು.

ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ, ಗೀತಿಕಾ (48 ಕೆಜಿ) ಇಟಲಿಯ ಎರಿಕಾ ಪ್ರಿಸ್ಕಿಯಾಂಡಾರೊ ವಿರುದ್ಧ 5-0 ಅಂತರದಿಂದ ಜಯಗಳಿಸುವ ಮೂಲಕ ಫೈನಲ್ಸ್ ಪ್ರವೇಶಿಸಿದ್ದಾರೆ. ಅವರು ಫೈನಲ್‌ನಲ್ಲಿ ಪೋಲೆಂಡ್‌ನ ನಟಾಲಿಯಾ ಡೊಮಿನಿಕಾ ಅವರನ್ನು ಎದುರಿಸಲಿದ್ದಾರೆ. ಮತ್ತೊಂದು ಪಂದ್ಯದಲ್ಲಿ, ವೇಗ ಮತ್ತು ಕೌಶಲ್ಯದ ಉತ್ತಮ ಪ್ರದರ್ಶನದೊಂದಿಗೆ, 2019 ರ ಏಷ್ಯನ್ ಯೂತ್ ಚಾಂಪಿಯನ್ ಬೇಬಿರೋಜಿಸನಾ ಚಾನು (51 ಕೆಜಿ) ಇಟಲಿಯ ಎಲೆನ್ ಅಯಾರಿ ಅವರೆದುರು ಸುಲಭ ಜಯ ಸಾಧಿಸಿದ್ದರು. ಇವರು ಫೈನಲ್‌ನಲ್ಲಿ ರಷ್ಯಾದ ವಲೇರಿಯಾ ಲಿಂಕೋವಾ ವಿರುದ್ಧ ಸೆಣಸಲಿದ್ದಾರೆ.

ಪೂನಮ್ (57 ಕೆಜಿ), ವಿಂಕಾ (60 ಕೆಜಿ), ರಾಜಸ್ಥಾನದ ಅರುಂಧತಿ ಚೌಧರಿ (69 ಕೆಜಿ), 75 ಕೆಜಿ ಮಿಡಲ್ ವೇಟ್ , ಸನಮ್ ಫಾ ಚಾನು, ಸ್ಟಾರ್ ಬಾಕ್ಸರ್, ಅಲ್ಫಿಯಾ ಪಠಾಣ್ (81 ಕೆಜಿ) ಹಾಗೂ ಪುರುಷರ ವಿಭಾಗದಲ್ಲಿ ಸಚಿನ್ (56 ಕೆಜಿ) ಫೈನಲ್‌ಗೆ ಮುನ್ನಡೆಯುವ ಮೂಲಕ ಭಾರತಕ್ಕೆ ಪದಕದ ಭರವಸೆ ಗಟ್ಟಿಗೊಳಿಸಿದ್ದಾರೆ.

ಇನ್ನು - ಬಿಶ್ವಾಮಿತ್ರ ಚೊಂಗ್ಥೋಮ್ (49 ಕೆಜಿ), ಅಂಕಿತ್ ನರ್ವಾಲ್ (64 ಕೆಜಿ) ಮತ್ತು ವಿಶಾಲ್ ಗುಪ್ತಾ (91 ಕೆಜಿ) ಕಂಚಿನ ಪದಕ ಸೆಣೆಸಿನಲ್ಲಿದ್ದಾರೆ. ಎಲ್ಲಾ ಮಹಿಳಾ ಬಾಕ್ಸರ್ ಗಳು ಗುರುವಾರ ತಮ್ಮ ಅಂತಿಮ ಪಂದ್ಯಗಳನ್ನು ಆಡಿದರೆ, ಸಚಿನ್ ಶುಕ್ರವಾರ ಫೈನಲ್ ಪಂದ್ಯವನ್ನು ಆಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!