ಲವ್ಲಿನಾ 
ಕ್ರೀಡೆ

ಕಾಂಕ್ರೀಟ್ ರಸ್ತೆ ಆಯ್ತು, ಕಂಚಿನ ಪದಕ ವಿಜೇತೆ ಲವ್ಲಿನಾ ಗ್ರಾಮಕ್ಕೆ ಬರಲಿದೆ ಕೊಳವೆ ನೀರು, ಕ್ರೀಡಾ ಅಕಾಡೆಮಿ

ಟೋಕಿಯೊ ಒಲಂಪಿಕ್ಸ್‌ನಲ್ಲಿ ಲವ್ಲಿನಾ ಬೊರ್ಗೊಹೈನ್ ಬಾಕ್ಸಿಂಗ್ ಕಂಚಿನ ಪದಕ ಸಾಧನೆ ಅಲ್ಪಕಾಲಿಕವಾಗಿರುವುದಿಲ್ಲ. ಆಕೆಯ ಹಳ್ಳಿಗರು ಕುಡಿಯುವ ಪ್ರತಿ ಹನಿ ನೀರು ಈ ಸಾಧನೆಯನ್ನು ನೆನಪಿಸುತ್ತದೆ.

ಗುವಾಹಟಿ: ಟೋಕಿಯೊ ಒಲಂಪಿಕ್ಸ್‌ನಲ್ಲಿ ಲವ್ಲಿನಾ ಬೊರ್ಗೊಹೈನ್ ಬಾಕ್ಸಿಂಗ್ ಕಂಚಿನ ಪದಕ ಸಾಧನೆ ಅಲ್ಪಕಾಲಿಕವಾಗಿರುವುದಿಲ್ಲ. ಆಕೆಯ ಹಳ್ಳಿಗರು ಕುಡಿಯುವ ಪ್ರತಿ ಹನಿ ನೀರು ಈ ಸಾಧನೆಯನ್ನು ನೆನಪಿಸುತ್ತದೆ.

ಓಡಾಡಲು ರಸ್ತೆ ನಿರ್ಮಿಸಿದ ನಂತರ ರಾಜ್ಯ ಸರ್ಕಾರವು ಈಗ ಗೋಲಘಾಟ್ ಜಿಲ್ಲೆಯ ಸರುಪಥರ್ ವಿಧಾನಸಭಾ ಕ್ಷೇತ್ರದ ಪುಗಿಲಿಸ್ಟ್‌ನ ಬಾರೋ ಮುಖಿಯಾ ಹಳ್ಳಿಯ ಪ್ರತಿ ಮನೆಗೂ ಕೊಳವೆ ನೀರನ್ನು ಒದಗಿಸುತ್ತಿದೆ.

ಅಷ್ಟೇ ಅಲ್ಲ, ಬಿಜೆಪಿಯ ಸ್ಥಳೀಯ ಶಾಸಕ ಬಿಸ್ವಜಿತ್ ಫುಕಾನ್ ಈಗಾಗಲೇ ತನ್ನ ಮನೆಯಿಂದ 2 ಕಿಮೀ ದೂರದ ನಹರ್ಬರಿಯಲ್ಲಿ ಕ್ರೀಡಾ ಅಕಾಡೆಮಿ ಸ್ಥಾಪಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆ ಮಾತನಾಡಿದ ಫುಕಾನ್, ಎರಡು ಯೋಜನೆಗಳನ್ನು ಈ ವರ್ಷದೊಳಗೆ ಪ್ರಾರಂಭಿಸಲಾಗುವುದು ಎಂದರು. 

ಅಕಾಡೆಮಿಯನ್ನು 5.35 ಹೆಕ್ಟೇರ್ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾಗುವುದು. ಯೋಜನೆಗಳ ಪ್ರಕಾರ, ಇದು ಆಟದ ಮೈದಾನ, ಆಡಿಟೋರಿಯಂ, ಬಾಕ್ಸಿಂಗ್ ರಿಂಗ್, ಬಿಲ್ಲುಗಾರಿಕೆಗೆ ಅರೆನಾ ಮತ್ತು ಇತರ ಸೌಲಭ್ಯಗಳನ್ನು ಹೊಂದಿದೆ ಎಂದು ಶಾಸಕರು ಹೇಳಿದರು.

ನಾನು ಈಗಾಗಲೇ ಕ್ರೀಡಾ ಅಕಾಡೆಮಿಯ ಕುರಿತಂತೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಬಳಿ ಕೇಳಿಕೊಂಡಿದ್ದೇನೆ. ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಫುಕಾನ್ ಹೇಳಿದರು. ಇನ್ನು ಅಕಾಡೆಮಿಯನ್ನು ಅಂದಾಜು 15 ಕೋಟಿ ರೂಪಾಯಿ ಸರ್ಕಾರಿ ಹಣ ಅಥವಾ ಸಿಎಸ್‌ಆರ್ ನಿಧಿಯಿಂದ ನಿರ್ಮಿಸಲಾಗುವುದು ಎಂದರು. 

ಲವ್ಲಿನಾ ಹಳ್ಳಿಯಲ್ಲಿ ಜಲ ಜೀವನ ಮಿಷನ್ ಅಡಿಯಲ್ಲಿ ನೀರು ಸರಬರಾಜು ಯೋಜನೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಹಳ್ಳಿಯ ಪ್ರತಿಯೊಂದು ಮನೆಗೂ ಕೊಳವೆ ನೀರು ಸಿಗಲಿದೆ ಎಂದು ಶಾಸಕರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT