ಮೀರಾಬಾಯಿ ಚಾನು 
ಕ್ರೀಡೆ

'ಮನೆ ಊಟ ಸವಿಯುವ ಖುಷಿಯೇ ಬೇರೆ': 2 ವರ್ಷ ಬಳಿಕ ಮನೆಯ ಊಟ ಉಂಡ ಖುಷಿ ಹಂಚಿಕೊಂಡ ಮೀರಾಬಾಯಿ ಚಾನು!

ತಿಂಗಳುಗಟ್ಟಲೆ ಹೊರಗೆ ಹೊಟೇಲ್, ಮೆಸ್, ಹಾಸ್ಟೆಲ್ ಊಟ ತಿಂದವರಿಗೆ ಮನೆಯಲ್ಲಿ ಅಮ್ಮ ಅಥವಾ ಕುಟುಂಬ ಸದಸ್ಯರು ಮಾಡಿದ ಅಡುಗೆಯ ರುಚಿ ಗೊತ್ತಾಗುತ್ತದೆ. ಮನೆ ಊಟ ಎಷ್ಟೆಂದರೂ ಮನೆ ಊಟವೇ, ಯಾವ ಸ್ಟಾರ್ ಹೊಟೇಲ್ ನ ಊಟವೂ ಅದರ ಹತ್ತಿರಕ್ಕೆ ಸುಳಿಯಲು ಸಾಧ್ಯವಿಲ್ಲ ಎಂಬ ಅನುಭವದ ಮಾತುಗಳನ್ನು ಅನೇಕರು ಹೇಳುವುದನ್ನು ಕೇಳುತ್ತೇವೆ.

ಮಣಿಪುರ: ತಿಂಗಳುಗಟ್ಟಲೆ ಹೊರಗೆ ಹೊಟೇಲ್, ಮೆಸ್, ಹಾಸ್ಟೆಲ್ ಊಟ ತಿಂದವರಿಗೆ ಮನೆಯಲ್ಲಿ ಅಮ್ಮ ಅಥವಾ ಕುಟುಂಬ ಸದಸ್ಯರು ಮಾಡಿದ ಅಡುಗೆಯ ರುಚಿ ಗೊತ್ತಾಗುತ್ತದೆ. ಮನೆ ಊಟ ಎಷ್ಟೆಂದರೂ ಮನೆ ಊಟವೇ, ಯಾವ ಸ್ಟಾರ್ ಹೊಟೇಲ್ ನ ಊಟವೂ ಅದರ ಹತ್ತಿರಕ್ಕೆ ಸುಳಿಯಲು ಸಾಧ್ಯವಿಲ್ಲ ಎಂಬ ಅನುಭವದ ಮಾತುಗಳನ್ನು ಅನೇಕರು ಹೇಳುವುದನ್ನು ಕೇಳುತ್ತೇವೆ.

ಕಳೆದ ವಾರವಷ್ಟೇ ಟೋಕಿಯೊ ಒಲಿಂಪಿಕ್ಸ್ 2020ರಲ್ಲಿ ಮಹಿಳೆಯರ ವೇಟ್ ಲಿಫ್ಟಿಂಗ್ ನಲ್ಲಿ 49 ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದುಕೊಂಡು ಬಂದಿರುವ ಭಾರತದ ಸೈಕೋಮ್ ಮೀರಾಬಾಯಿ ಚಾನು ಈಗ ತಮ್ಮ ಮನೆ ಮಣಿಪುರದಲ್ಲಿ ತಂದೆ-ತಾಯಿ ಕುಟುಂಬಸ್ಥರ ಜೊತೆ ಸಂತೋಷದ ದಿನಗಳನ್ನು ಕಳೆಯುತ್ತಿದ್ದಾರೆ.

ಈ ಬೆಳ್ಳಿಪದಕ ಗೆಲ್ಲುವ ಹಿಂದೆ ಸಾಕಷ್ಟು ವರ್ಷಗಳ ನಿರಂತರ ಪರಿಶ್ರಮ, ಮನೆಯಿಂದ ತಿಂಗಳುಗಟ್ಟಲೆ, ವರ್ಷಗಟ್ಟಲೆ ಹೊರಗಿದ್ದು ಹಸಿವಾದಾಗ ಸಿಕ್ಕಿದ ಆಹಾರ ತಿನ್ನಬೇಕಾದ ಪರಿಸ್ಥಿತಿ ಎದುರಾಗಿತ್ತು ಚಾನುಗೆ. ಅಭ್ಯಾಸ, ತರಬೇತಿ, ಪಂದ್ಯ ಎಂದು ಕಳೆದ ಎರಡು ವರ್ಷಗಳಿಂದ ಮನೆಯಿಂದ ದೂರವಿದ್ದು ಚಾನು ಈಗ ಮನೆಗೆ ಮರಳಿ ತಮ್ಮಿಷ್ಟದ ಊಟ ತಿಂಡಿ ಸೇವಿಸುತ್ತಿದ್ದಾರೆ. ನೆಲದ ಮೇಲೆ ಕುಳಿತು ಮುಂದೆ ತಟ್ಟೆ ಇಟ್ಟು ಸವಿದ ಊಟವನ್ನು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಎರಡು ವರ್ಷ ಬಳಿಕ ಮನೆಯಲ್ಲಿ ತಿನ್ನುವ ಊಟದ ಸವಿಯೇ ಬೇರೆ ಎಂದು ಬರೆದುಕೊಂಡಿದ್ದಾರೆ. ಮೀರಾ ಚಾನು ಇತ್ತೀಚೆಗೆ ತಮ್ಮಿಷ್ಟದ ಪಿಜ್ಜಾವನ್ನು ಸವಿದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

SCROLL FOR NEXT