ಪುತ್ರ ಇಜಾನ್ ಜೊತೆಗೆ ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ 
ಕ್ರೀಡೆ

ದಾಂಪತ್ಯದಲ್ಲಿ ಬಿರುಕು; ವದಂತಿಗಳ ಮಧ್ಯೆ ಮತ್ತೊಂದು ಪೋಸ್ಟ್ ಹಂಚಿಕೊಂಡ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ನಡುವೆ ಎಲ್ಲವೂ ಸರಿಯಿಲ್ಲ. ಇಜಾನ್ ಮಿರ್ಜಾ ಮಲಿಕ್ ಎಂಬ ಮಗನನ್ನು ಹೊಂದಿರುವ ಸೆಲೆಬ್ರಿಟಿ ದಂಪತಿಯ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳು ಹರಡಿವೆ.

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ನಡುವೆ ಎಲ್ಲವೂ ಸರಿಯಿಲ್ಲ. ಇಜಾನ್ ಮಿರ್ಜಾ ಮಲಿಕ್ ಎಂಬ ಮಗನನ್ನು ಹೊಂದಿರುವ ಸೆಲೆಬ್ರಿಟಿ ದಂಪತಿಯ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳು ಹರಡಿವೆ. ಈ ಮಧ್ಯೆ, ಸಾನಿಯಾ ಮಿರ್ಜಾ, ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದ ಪೋಸ್ಟ್‌ವೊಂದು ಇದಕ್ಕೆ ಇಂಬು ನೀಡುವಂತಿತ್ತು. ಹೀಗಾಗಿ ಅವರ ಅಭಿಮಾನಿಗಳನ್ನು ಮತ್ತಷ್ಟು ಚಿಂತೆಗೀಡು ಮಾಡಿತ್ತು.

ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, 'ಒಡೆದ ಹೃದಯಗಳು ಎಲ್ಲಿಗೆ ಹೋಗುತ್ತವೆ, ಅಲ್ಲಾನನ್ನು ಹುಡುಕಲು' ಎಂಬ ಪೋಸ್ಟ್ ಅನ್ನು ಹಂಚಿಕೊಂಡಿದ್ದರು.

ಇದೊಂದೆ ಅಲ್ಲದೆ, ಕೆಲವು ದಿನಗಳ ಹಿಂದಷ್ಟೇ, ತನ್ನ ಮಗನೊಂದಿಗಿರುವ ಚಿತ್ರವನ್ನು ಹಂಚಿಕೊಂಡಿದ್ದ ಅವರು, 'ಕಷ್ಟದ ದಿನಗಳಲ್ಲಿ ನನಗೆ ಸಿಕ್ಕ ಕ್ಷಣಗಳು' ಎಂದು ಬರೆದಿದ್ದಾರೆ.

ಸಾನಿಯಾ ಅಥವಾ ಶೋಯೆಬ್ ಅವರ ತಮ್ಮ ದಾಂಪತ್ಯದಲ್ಲಿನ ಬಿರುಕಿನ ಕುರಿತಾದ ಊಹಾಪೋಹಗಳಿಗೆ ಅಥವಾ ಪ್ರತ್ಯೇಕತೆಯ ವದಂತಿಗಳ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ.

ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಏಪ್ರಿಲ್ 2010 ರಲ್ಲಿ ವಿವಾಹವಾದರು. ಅವರಿಗೆ ನಾಲ್ಕು ವರ್ಷದ ಮಗ ಇಜಾನ್ ಇದ್ದಾನೆ. ಆತನ ಹುಟ್ಟುಹಬ್ಬವನ್ನು ಆಚರಿಸಲು ದಂಪತಿ ಇತ್ತೀಚೆಗೆ ದುಬೈಗೆ ಹಾರಿದ್ದರು. ಶೋಯೆಬ್ ಮಲಿಕ್ ಕೂಡ ಹುಟ್ಟುಹಬ್ಬದ ಸಂಭ್ರಮದ ತುಣುಕುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಈಮಧ್ಯೆ, ಸಾನಿಯಾ ತನ್ನ ಪುತ್ರನ ವಿಶೇಷ ದಿನದಂದು ಇಜಾನ್ ಮತ್ತು ತನ್ನ ಥ್ರೋಬ್ಯಾಕ್ ಚಿತ್ರಗಳ ಸೆಟ್ ಅನ್ನು ಪೋಸ್ಟ್ ಮಾಡಿದ್ದಾರೆ.

'ನಾನು ಈ ಜೀವನದಲ್ಲಿ ಅನೇಕ ಪಾತ್ರಗಳನ್ನು ನಿಭಾಯಿಸಿದ್ದೇನೆ. ಆದರೆ, ನನ್ನ ನೆಚ್ಚಿನದು ನಾನು ಅಮ್ಮನಾಗಿರುವುದು. ನೀನು ಹುಟ್ಟಿದ ದಿನವೇ ನನ್ನ ಜೀವನದ ಅತ್ಯುತ್ತಮ ದಿನ ಮತ್ತು ನಿನ್ನ ಮುಗುಳ್ನಗೆ ಕೂಡ. ನೀನು ಅತ್ಯಂತ ಕರುಣಾಮಯಿ ಮತ್ತು ಅತ್ಯಂತ ಅಮೂಲ್ಯವಾದ ಹುಡುಗನಾಗಿ ಬೆಳೆಯುತ್ತಿರುವೆ ಮತ್ತು ನಿನ್ನ ಅಮ್ಮನಾಗಿರುವುದಕ್ಕೆ ನನಗೆ ಹೆಮ್ಮೆಯಿದೆ' ಎಂದು ಬರೆದುಕೊಂಡಿದ್ದಾರೆ.

'ನೀವು ನನ್ನನ್ನು ಉತ್ತಮಗೊಳಿಸಿರುವೆ ಮತ್ತು ನಾನು ಎಂದಿಗೂ ತಿಳಿದಿರದ ನಿಸ್ವಾರ್ಥ ಮತ್ತು ಬೇಷರತ್ತಾದ ಪ್ರೀತಿಯನ್ನು ನನಗೆ ಕಲಿಸಿರುವೆ. ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಪ್ರೀತಿಯ ಮಗನೇ ಮತ್ತು ನಿನಗೆಷ್ಟೇ ವಯಸ್ಸಾದರೂ ನೀನು ಶಾಶ್ವತವಾಗಿ ನನ್ನ ಮಗುವಾಗಿಯೇ ಉಳಿಯುವೆ' ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT