ಚಿನ್ನದ ಪದಕ ಗೆದ್ದ ಆಜ್ಞ ಅಮಿತ್ 
ಕ್ರೀಡೆ

GAMMA ವಿಶ್ವ ಚಾಂಪಿಯನ್ ಶಿಪ್: ಚಿನ್ನದ ಪದಕ ಗೆದ್ದ ಕರ್ನಾಟಕದ ಬಾಲಕಿ ಆಜ್ಞ ಅಮಿತ್!

ಕುಡು ಮಂಗಳೂರಿನ ನಿವಾಸಿಗಳಾದ ಅಮಿತ್ ಮತ್ತು ದಿವ್ಯ ಅವರ ಪುತ್ರಿಯಾಗಿರುವ ಆಜ್ಞ .ಎ, 9 ವರ್ಷದ ಬಾಲಕಿ, 4ನೇ ತರಗತಿಯಲ್ಲಿ ಓದುತ್ತಿದ್ದು, ಕಳೆದ 4 ವರ್ಷಗಳಿಂದ ಕುಶಾಲನಗರದ GMMA ಯಲ್ಲಿ ತಮ್ಮ ತಂದೆ ಹಾಗೂ ಕೋಚ್‌ ಆಗಿರುವ ಅಮಿತ್ ಅವರಿಂದ ತರಬೇತಿ

ಬೆಂಗಳೂರು: ಇಂಡೋನೇಷ್ಯಾ ದ ಜಕಾರ್ತ ದಲ್ಲಿ ಇತ್ತೀಚಿಗೆ ನಡೆದ GAMMA (Global Mixed Martial Arts Association) ವಿಶ್ವ ಚಾಂಪಿಯನ್‌ ಶಿಪ್‌ನಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದ ಕರ್ನಾಟಕದ ಪೋರಿ ಆಜ್ಞ ಅಮಿತ್ ಚಿನ್ನದ ಪದಕ ಗೆದ್ದು, ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.

10 ವರ್ಷದೊಳಗಿನ 27 ಕೆಜಿ ವಿಭಾಗದಲ್ಲಿ ನಡೆದ ಪಂದ್ಯದಲ್ಲಿ ಇಂಡೋನೇಷ್ಯಾದ ಅತ್ಯಂತ ಪ್ರತಿಭಾಶಾಲಿ ಎದುರಾಳಿಯನ್ನು ತಮ್ಮ ಬಲಿಷ್ಠವಾದ ಪ್ರದರ್ಶನದೊಂದಿಗೆ ಸೋಲಿಸುವ ಮೂಲಕ ಸ್ವರ್ಣ ಪದಕ ಗೆದ್ದು ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ.

ಕುಡು ಮಂಗಳೂರಿನ ನಿವಾಸಿಗಳಾದ ಅಮಿತ್ ಮತ್ತು ದಿವ್ಯ ಅವರ ಪುತ್ರಿಯಾಗಿರುವ ಆಜ್ಞ .ಎ, 9 ವರ್ಷದ ಬಾಲಕಿ, 4ನೇ ತರಗತಿಯಲ್ಲಿ ಓದುತ್ತಿದ್ದು, ಕಳೆದ 4 ವರ್ಷಗಳಿಂದ ಕುಶಾಲನಗರದ C3MMA ಯಲ್ಲಿ ತಮ್ಮ ತಂದೆ ಹಾಗೂ ಕೋಚ್‌ ಆಗಿರುವ ಅಮಿತ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

6 ವರ್ಷದ ವಯಸ್ಸಿನಿಂದಲೇ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದ್ದ ಆಜ್ಞ, 2021 ರಲ್ಲಿ ತಮ್ಮ ಮೊದಲ ಬಾಕ್ಸಿಂಗ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಬೆಳ್ಳಿ ಪದಕವನ್ನು ಗಳಿಸಿದ್ದರು. 2022ರಲ್ಲಿ ರಾಜ್ಯ ಮಟ್ಟದ ಕಿಕ್‌ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಜಯಿಸಿದ್ದರು.

ಸಂಸದ ಯದುವೀರ್ ಅವರೊಂದಿಗೆ ಆಜ್ಞ, ಅವರ ತಂದೆ ಅಮಿತ್

2023 ರಲ್ಲಿ ದೆಹಲಿಯ ತಲ್ಕಟೋರ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಕಿಕ್‌ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದರು. ಅದರಲ್ಲಿಯೂ ಸಹ ಚಿನ್ನದ ಪದಕವನ್ನು ಗೆದ್ದು ರಾಜ್ಯಕ್ಕೆ ಕೀರ್ತಿತಂದಿದ್ದರು.

2024 ರಲ್ಲಿ, ಅವರು ರಾಷ್ಟ್ರೀಯ ಜಿಯೂಜಿಟ್ಸು ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಪದಕ ಗೆದ್ದಿದ್ದು ಅಲ್ಲದೆ ರಾಷ್ಟ್ರೀಯ ಎಂಎಂಎ ಚಾಂಪಿಯನ್‌ಶಿಪ್‌ನಲ್ಲಿ ಕೂಡ ಭಾಗವಹಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು. ಈ ಸಾಧನೆಗಳಿಂದ ಅವರು ಇಂಡೋನೇಷ್ಯಾದಲ್ಲಿ ನಡೆಯುವ GAMMA ವಿಶ್ವಚಾಂಪಿಯನಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಮೀಸಲಾತಿ ಮುಂದುವರೆಯಲಿ: IAS ಅಧಿಕಾರಿ ವಿವಾದಾತ್ಮಕ ಹೇಳಿಕೆ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

SCROLL FOR NEXT