ಮಕರಂದ/ದೋಣಿ

ನ್ಯಾನೋ ಕಥೆಗಳು

ಆವರಿಸಿಕೊಂಡಿದ್ದ ಕಪ್ಪು ಮೋಡ ಕರಗಿದೆ ಅಥವಾ ಬಣ್ಣ ಬದಲಿಸಿದೆ. ಭೂಮಿಯ ನಿಯೋಗ ಬಾನಿಗೆ ತೆರಳಿದೆ.
ಪೂರ್ವಗ್ರಹ
ಅಪ್ಪಿಕೊಂಡದ್ದು ಒಂದು ಮುಖ. ಒಪ್ಪಿಕೊಂಡದ್ದು ಮತ್ತೊಂದು ಮುಖ. ಅವೆರಡೂ ಅವನ ಹೊಸ ಮುಖದ ರಕ್ಷಣೆಗೆ ನಿಂತಿವೆ.
ತೃಪ್ತಿ
ನದಿಯಾಗುವ ಹಂಬಲವಿಲ್ಲ. ತೀರವಾಗಿ ತೆಪ್ಪಗಿದ್ದು ಬಿಡುತ್ತೇನೆ. ಹರಿವ ನೀರಿಗೆ ಸ್ವರವಾಗಿ ಕರಗುತ್ತೇನೆ.
ತ್ಯಾಗ
ಹಣ್ಣು ಬಿಡುವ ಮರವಾಗುವ ಹಂಬಲ ಹೊತ್ತ ಸಸಿ ಗರಿಕೆಯ ಗೆಳೆತನ ಬಯಸಿ ತುದಿ ಚಿವುಟಿಕೊಂಡಿದೆ.
ಸಂಭ್ರಮ
ಅವಳ ಕಣ್ಣ ಮಂಪರಿನೊಳಗೆ ಈಗಷ್ಟೇ ಕಣ್ತೆರೆಯುತ್ತಿರುವ ಮುಂಜಾನೆ... ಬದುಕು ಇಂಥವೇ ಸಂಭ್ರಮಗಳ ಖಜಾನೆ.
ಪರಿಸ್ಥಿತಿ
ನಮ್ಮದು ನದಿ ನಡುವಲ್ಲಿ ತಟಸ್ಥವಾಗಿ ನಿಂತಿರುವ ತೆಪ್ಪದ ಮೇಲಿನ ಬದುಕು. ಗುರಿ ಇಲ್ಲ. ಬಹುಕಾಲ ಬಾಳಬೇಕೆಂಬ ಹಠವೂ ಇಲ್ಲ. ಒಡಲ ತುಂಬಿರುವುದು ವಿಷಾದವೊಂದೇ.
ಆಸೆ
ಸಾಯಲು ಬಂದವರು ಸಾಲಾಗಿ ನಿಂತಿದ್ದರು. ಸಾಲಿನಲ್ಲಿ ಕಡೆಯ ಸ್ಥಾನಕ್ಕೆ ಪೈಪೋಟಿ ಜಾರಿಯಲ್ಲಿತ್ತು.
= ಎಚ್.ಕೆ. ಶರತ್, ವಿದ್ಯಾನಗರ, ಹಾಸನ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಚಿವ ಜಮೀರ್ ಅಹ್ಮದ್ ಧ್ವಜಾರೋಹಣ ಮಾಡದಷ್ಟು ದೊಡ್ಡವರೇ? ಇದು ದೇಶಕ್ಕೆ ಮಾಡಿದ ಅವಮಾನ, ವಿಧಾನಸಭೆಯಲ್ಲಿ ಬಿಜೆಪಿ ಪ್ರತಿಭಟನೆ! ಸಚಿವ ಸ್ಥಾನದಿಂದ ವಜಾಕ್ಕೆ ಒತ್ತಾಯ

'ಅಪ್ಪಿಕೋ' ವಿದೇಶಾಂಗ ನೀತಿ: ಮೋದಿ ಕೆಣಕಿದ ರಾಹುಲ್ ಗಾಂಧಿ; ಇಂದಿರಾ ಗಾಂಧಿ ವಿಡಿಯೋ ಮೂಲಕ ಬಿಜೆಪಿ ತಿರುಗೇಟು!

ಆತ್ಮನಿರ್ಭರ ಭಾರತಕ್ಕೆ ಮತ್ತೊಂದು ಗರಿ: ದೇಶೀಯವಾಗಿ ಫೈಟರ್ ಜೆಟ್ ಎಂಜಿನ್ ನಿರ್ಮಿಸಲಿವೆ ರಿಲಯನ್ಸ್-ರೋಲ್ಸ್ ರಾಯ್ಸ್!

Toxic: ಯಶ್ ಅಭಿನಯದ 'ಟಾಕ್ಸಿಕ್'ಗೆ ಸಿಕ್ತು ʻA’ ಸರ್ಟಿಫಿಕೇಟ್; ರನ್‌ಟೈಮ್‌ ಕೇಳಿದ್ರೆ ಥ್ರಿಲ್‌ ಆಗ್ತೀರಾ!

ತವಾದಿಂದ ಹೊಡೆದು ಮಾಜಿ ಪತಿಯನ್ನು ಕೊಂದ ಮಹಿಳೆ!