ಮಕರಂದ/ದೋಣಿ

ಹೃದಯದ ಹಾಯ್ಕಗಳು

ನನ್ನ ನೋವುಗಳ
ಗೋಪುರದ ಮೇಲೆ ಮನೆಕಟ್ಟಿ
ಅವಳು
ನಗುತ್ತಿದ್ದಾಳೆ....

ತನ್ನ ನೋವುಗಳನ್ನೇ
ಮತ್ತೆ ಮತ್ತೆ ಹೇಳುತ್ತ;
ಅವಳು ನನ್ನೆದೆಗೆ
ಹೊಸ ನೋವು ಹೇರುತ್ತಿದ್ದಳು....

ಅವಳ
ನೋವಿಗೆ ಮುಲಾಮು ಹಚ್ಚಿದೆ;
ನನ್ನ ನೋವಿನ
ಗಾಯದ ಮೇಲೆ
ನೊಣಗಳು ಕುಣಿದಾಡುತ್ತಿದ್ದವು....

ಅವಳ
ನೋವನ್ನು ಕೊಂದೆ..
ವಾಸಿಯಾಯಿತೆಂದು ನಕ್ಕಳು;
ಅದು ನನ್ನೆದೆಯೊಳಗೆ
ಪುನರ್ಜನ್ಮ ಪಡೆಯಿತು...

ಅವಳು ನಗುತ್ತಿದ್ದಳು
ನಾನೂ ನಗುತ್ತಿದ್ದೆ
ನೋವು ಎದೆಯೊಳಗೆ
ಉರಿಯುತ್ತಿತ್ತು...

ಕುಂಟುತ್ತ ಅಲೆಯುತ್ತಿದೆ
ಮನಸ್ಸು ಅವಳ ಆಸರೆಯಿಲ್ಲದೇ;

ಅಲ್ಲಲ್ಲಿ ಬಿದ್ದ ಕನಸುಗಳನ್ನು
ಹುಡುಕುತ್ತಿದ್ದೇನೆ;
ಒಂದೂ ಸಿಗುತ್ತಿಲ್ಲ.....

ಅವಳಿಗೊಂದು ಸುಂದರ
ಕನಸು ಕೊಟ್ಟೆ;
ನಿರ್ದಾಕ್ಷಿಣ್ಯವಾಗಿ ಕೊಂದು ಬಿಟ್ಟಳು...
= ನಾಗರಾಜ್. ವೈ. ಕಾಂಬಳೆ,

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

SCROLL FOR NEXT