ಮಕರಂದ/ದೋಣಿ

ಹೃದಯದ ಹಾಯ್ಕಗಳು

ನನ್ನ ನೋವುಗಳ
ಗೋಪುರದ ಮೇಲೆ ಮನೆಕಟ್ಟಿ
ಅವಳು
ನಗುತ್ತಿದ್ದಾಳೆ....

ತನ್ನ ನೋವುಗಳನ್ನೇ
ಮತ್ತೆ ಮತ್ತೆ ಹೇಳುತ್ತ;
ಅವಳು ನನ್ನೆದೆಗೆ
ಹೊಸ ನೋವು ಹೇರುತ್ತಿದ್ದಳು....

ಅವಳ
ನೋವಿಗೆ ಮುಲಾಮು ಹಚ್ಚಿದೆ;
ನನ್ನ ನೋವಿನ
ಗಾಯದ ಮೇಲೆ
ನೊಣಗಳು ಕುಣಿದಾಡುತ್ತಿದ್ದವು....

ಅವಳ
ನೋವನ್ನು ಕೊಂದೆ..
ವಾಸಿಯಾಯಿತೆಂದು ನಕ್ಕಳು;
ಅದು ನನ್ನೆದೆಯೊಳಗೆ
ಪುನರ್ಜನ್ಮ ಪಡೆಯಿತು...

ಅವಳು ನಗುತ್ತಿದ್ದಳು
ನಾನೂ ನಗುತ್ತಿದ್ದೆ
ನೋವು ಎದೆಯೊಳಗೆ
ಉರಿಯುತ್ತಿತ್ತು...

ಕುಂಟುತ್ತ ಅಲೆಯುತ್ತಿದೆ
ಮನಸ್ಸು ಅವಳ ಆಸರೆಯಿಲ್ಲದೇ;

ಅಲ್ಲಲ್ಲಿ ಬಿದ್ದ ಕನಸುಗಳನ್ನು
ಹುಡುಕುತ್ತಿದ್ದೇನೆ;
ಒಂದೂ ಸಿಗುತ್ತಿಲ್ಲ.....

ಅವಳಿಗೊಂದು ಸುಂದರ
ಕನಸು ಕೊಟ್ಟೆ;
ನಿರ್ದಾಕ್ಷಿಣ್ಯವಾಗಿ ಕೊಂದು ಬಿಟ್ಟಳು...
= ನಾಗರಾಜ್. ವೈ. ಕಾಂಬಳೆ,

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT