ಬೈಟುಕಾಫಿ

ನಿಷ್ಕಾಮ ಕರ್ಮಯೋಗ

ಪ್ರಪಂಚ ಲಂಚಮಯ. ಇಲ್ಲಿ ಗಳಿಕೆಯೇ ಜೀವನ. ಪ್ರತಿಫಲಾಪೇಕ್ಷೆಯಿಲ್ಲದೆ ಯಾರೂ ಕೆಲಸ ಮಾಡರು. ಇನ್ನು ಕೆಲಸಗಳ ವಿಚಾರಕ್ಕೆ ಬಂದರೆ ಅವರ ಅಪೇಕ್ಷೆಯೇ ದೊಡ್ಡದಿರುತ್ತದೆ. ಕೆಲಸ, ವೃತ್ತಿ, ಉದ್ಯೋಗ ಇವುಗಳು ಮನುಷ್ಯನನ್ನು ಸ್ವಾರ್ಥಮಯಗೊಳಿಸಿದರೆ, ಕಾಯಕವು ನಿಷ್ಕಾಮ ಕರ್ಮಯೋಗಿಯನ್ನಾಗಿಸುತ್ತದೆ. ಇಂದು ಜೀವನಕಾರ್ಯವನ್ನು ಕಾಯಕವೆಂದು ಭಾವಿಸಿ ದುಡಿಮೆಯನ್ನು ಸರ್ವರ ಏಳ್ಗೆಗಾಗಿ ವಿನಿಯೋಗಿಸುವ ಕರ್ಮಯೋಗಿಗಳು ತುಂಬಾ ವಿರಳ. ಹಾಗೆಯೇ ನಿಷ್ಕಾಮ ಜೀವನ ಸಾಗಿಸುವ ಆದರ್ಶ ಗುರುಗಳೂ ಅಪರೂಪವಾಗಿದ್ದಾರೆ. ಆದ್ದರಿಂದ ನಾವು ಲೌಕಿಕ ಪ್ರಪಂಚದೊಳಗಿದ್ದೇ ಜೀವನವನ್ನು ನಿಷ್ಕಾಮ ಕರ್ಮಯೋಗವನ್ನಾಗಿ ಮಾಡಿಕೊಳ್ಳಬೇಕು.
ತಪಸ್ಸಿನಿಂದ ಶಕ್ತಿ ಬರುತ್ತದೆ. ಇತರರಿಗಾಗಿ ಕೆಲಸ ಮಾಡುವುದೂ ಕೂಡ ತಪಸ್ಸೇ. ತಪಸ್ಸು ಎನ್ನುವುದು ಭಕ್ತನ ಮನಸ್ಸಿನಲ್ಲಿ ಲೋಕಹಿತಾರ್ಥವಾದ ಪರೋಪಕಾರ ಬುದ್ಧಿ ಹುಟ್ಟಿಸಿ ಅವನನ್ನು ನಿಷ್ಕಾಮಕರ್ಮಕ್ಕೆ ಪ್ರಚೋದಿಸುತ್ತದೆ. ಇನ್ನೊಂದು ವಿಧದಿಂದ ಕರ್ಮಯೋಗಿಯ ಕರ್ಮವು ತಪಸ್ಸಾಗಿ ಪರಿಣಮಿಸಿ, ಅದರಿಂದ ಮನಶ್ಶುದ್ಧಿ, ಹೃದಯಶುದ್ಧಿ ಪ್ರಾಪ್ತವಾಗುತ್ತದೆ. ಈ ಶುದ್ಧ ಮನಸ್ಸೇ ಅವನನ್ನು ಆತ್ಮಸಾಕ್ಷಾತ್ಕಾರದೆಡೆಗೆ ಕರೆದೊಯ್ಯುತ್ತದೆ.
ಪರರಿಗಾಗಿ ಕರ್ಮ ಮಾಡುತ್ತ ಹೋಗುವಾಗ, ಮನಸ್ಸಿನ ಒರಟುತನವೆಲ್ಲ ಸವೆದುಹೋಗಿ ಮೃದುವಾಗುತ್ತದೆ, ನಯವಾಗುತ್ತದೆ. ಕ್ರಮೇಣ ಪ್ರಾಮಾಣಿಕವಾದ ಆತ್ಮ ಸಮರ್ಪಣಭಾವದಿಂದ ಪರಹಿತಕ್ಕಾಗಿ ಕರ್ಮ ಮಾಡುವ ಸಾಮರ್ಥ್ಯ ಬರುತ್ತದೆ.
-ಆನಂದ ಎಸ್.ಎನ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Kerala: ಕಾಂಗ್ರೆಸ್ ಸಂಸದ Shashi Tharoor ಬೆಂಗಾವಲು ಪಡೆ ತಡೆದು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ

ಅಮೆರಿಕದೊಂದಿಗೆ ಮಾತುಕತೆಗೆ ಇರಾನ್ ನಕಾರ; 'ಯುದ್ಧ ನಿಲ್ಲಿಸುವ ಪ್ರಯತ್ನಗಳಿಗೆ ಹಿನ್ನಡೆಯಾಗಿಲ್ಲ': ಮಾಧ್ಯಮ ವರದಿಗಳನ್ನು ತಿರಸ್ಕರಿಸಿದ ಪಾಕಿಸ್ತಾನ!

ಅಮೆರಿಕಾ ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್: ನಾವು ಯುದ್ಧದಲ್ಲಿದ್ದೇವೆ; ಟ್ರಂಪ್ ಮಾರ್ಮಿಕ ನುಡಿ, ಸಂಘರ್ಷ ಮತ್ತಷ್ಟು ಉದ್ನಿಗ್ನ ಸಾಧ್ಯತೆ

ಪೆಟ್ರೋಲ್ ದರ ಏರಿಕೆ, ದೇಶಾದ್ಯಂತ ವ್ಯಾಪಕ ಪ್ರತಿಭಟನೆ; ಬೆಚ್ಚಿಬಿದ್ದ Pak ಸರ್ಕಾರ, ಲೀಟರ್ ಗೆ 80 ರೂ ಗಳಷ್ಟು ಬೆಲೆ ಕಡಿತ!

Hubli Love jihad case: ವಿಡಿಯೋ ಇರೋದು ನಿಜ, ಆದ್ರೆ… ಪ್ರಜ್ಞೆ ತಪ್ಪಿದ್ದರೆ ವಿಡಿಯೋದಲ್ಲಿ ಹೇಗೆ ಆ್ಯಕ್ಟಿವ್ ಆಗಿರುತ್ತಾಳೆ?: Sameer Mulla ಸ್ಫೋಟಕ ಹೇಳಿಕೆ!

SCROLL FOR NEXT