ಯುವಜನ/ಮಕ್ಕಳು

ದ್ರವ ಆವಿಯಾಗುವುದು ಹೇಗೆ?

ಮಳೆಗಾಲದಲ್ಲಿ ರಸ್ತೆಗಳಲ್ಲಿ ನಿಂತ ನೀರು ಕೆಲವೇ ಗಂಟೆಗಳಲ್ಲಿ ಕಣ್ಮರೆಯಾಗುವುದನ್ನು ನೋಡಿರಬಹುದು. ಬೇಸಿಗೆಯಲ್ಲಿ ಬಟ್ಟೆಗಳು ಬಲು ಬೇಗನೆ ಒಣಗುತ್ತವೆ. ಈ ನೀರು ಎಲ್ಲಿಗೆ ಹೋಗುತ್ತದೆ? ಈ ನೀರು ಇಬ್ಬನಿಯಾಗಿ ಪರಿವರ್ತನೆಗೊಳ್ಳುತ್ತದೆ. ಇದೇ ಬಾಷ್ಪೀಕರಣ.
ನೀರು ಹೇಗೆ ಆವಿಯಾಗುತ್ತದೆಂದರೆ, ಪ್ರತಿ ಪದಾರ್ಥ ಮಾಲಿಕ್ಯೂಲ್ಸ್ ಎಂದು ಕರೆಯಲಾಗುವ ಅತಿ ಸೂಕ್ಷ್ಮ ಕಣಗಳಿಂದ ರಚಿತವಾಗಿದೆ. ಈ ಸೂಕ್ಷ್ಮಕಣಗಳನ್ನು ಒಟ್ಟಿಗೆ ಬಂಧಿಸಿಡುವ ಒಂದು ಪ್ರಬಲ ಆಕರ್ಷಣಶಕ್ತಿ ಇರುತ್ತದೆ. ಸೂಕ್ಷ್ಮಕಣಗಳ ಚಲನೆಯಿಂದಾಗಿ ಉದ್ಭವಿಸುವ ವಿಕರ್ಷಣಾ ಶಕ್ತಿ, ಆಕರ್ಷಣಾ ಶಕ್ತಿಯನ್ನು ಪ್ರತಿರೋಧಿಸುತ್ತದೆ. ಸೂಕ್ಷ್ಮ ಕಣಗಳನ್ನು ಹಿಡಿದಿಡುವ ಆಕರ್ಷಣ ಶಕ್ತಿ ವಿಕರ್ಷಣಾ ಶಕ್ತಿಗಿಂತ ಬಹಳ ಹೆಚ್ಚಾಗಿರುವ ತನಕ ಆ ಪದಾರ್ಥ ಘನ ರೂಪದಲ್ಲೇ ಇರುತ್ತದೆ. ಈ ಪದಾರ್ಥವನ್ನು ಕಾಯಿಸಿದಾಗ ಅದು ಶಾಖದ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಇದರಿಂದ ಸೂಕ್ಷ್ಮಕಣಗಳು ಶೀಘ್ರಗತಿಯಲ್ಲಿ ಚಲಿಸಲಾರಂಭಿಸುತ್ತವೆ. ಈ ಶೀಘ್ರಚಲನೆ ಸೂಕ್ಷ್ಮಕಣಗಳನ್ನು ಹಿಡಿದಿಡುವ ಶಕ್ತಿಯ ವಿರುದ್ಧ ಕೆಲಸ ಮಾಡುತ್ತದೆ. ಅಂದರೆ ಅದು ಆ ಕಣಗಳನ್ನು ಪ್ರತ್ಯೇಕಿಸುತ್ತದೆ. ಸೂಕ್ಷ್ಮಕಣಗಳ ಚಲನೆಯಿಂದ ಉಂಟಾಗುವ ವಿಕರ್ಷಣಶಕ್ತಿ ಅವನ್ನು ಹಿಡಿದಿಡುವ ಶಕ್ತಿಗೆ ಸಮವಾದರೆ, ಆಗ ಪದಾರ್ಥ ಘನರೂಪದಿಂದ ದ್ರವರೂಪಕ್ಕೆ ಬರುತ್ತದೆ. ಈ ದ್ರವವನ್ನು ಮತ್ತಷ್ಟು ಕಾಯಿಸಿದರೆ ಸೂಕ್ಷ್ಮಕಣಗಳು ಇನ್ನಷ್ಟು ಶೀಘ್ರಗತಿಯಲ್ಲಿ ಚಲಿಸುತ್ತವೆ. ಈ ಶೀಘ್ರ ಚಲನೆಯಿಂದ ಉಂಟಾದ ಶಕ್ತಿ, ಸೂಕ್ಷ್ಮಕಣಗಳನ್ನು ಹಿಡಿದಿಡುವ ಶಕ್ತಿಯನ್ನು ಮೀರಿಸಿದರೆ, ಆಗ ಸೂಕ್ಷ್ಮಕಣಗಳು ಪ್ರತ್ಯೇಕಗೊಂಡು ಗಾಳಿಯಲ್ಲಿ ಸೇರಿಕೊಳ್ಳುತ್ತವೆ. ಹೀಗೆ ದ್ರವ ಆವಿಯಾಗಿ ಪರಿವರ್ತನೆಗೊಳ್ಳುತ್ತದೆ.
= ಮಾಹಿತಿ: ಹರಳಹಳ್ಳಿಪುಟ್ಟರಾಜು, ಪಾಂಡವಪುರ.
----

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ರಷ್ಯಾದಿಂದ ಇಂಧನ ಖರೀದಿ ನಿಲ್ಲಿಸಿ.. ಇಲ್ಲ..' ಚೀನಾಗೆ ಶೇ.50ರಿಂದ ಶೇ.100ರಷ್ಟು ಸುಂಕ ಹಾಕ್ತೀನಿ': NATO ರಾಷ್ಟ್ರಗಳಿಗೆ Trump ಎಚ್ಚರಿಕೆ!

ರಜನಿಕಾಂತ್ 'Coolie' ಚಿತ್ರದಲ್ಲಿ ನಟಿಸಿದ್ದು ನನ್ನ ದೊಡ್ಡ ತಪ್ಪು ನಿರ್ಧಾರ: Aamir Khan ಹೇಳಿಕೆ ಕುರಿತು ಸ್ಪಷ್ಟನೆ!

ಹಾಸನ ಗಣೇಶ ಮೆರವಣಿಗೆ ದುರಂತ: ಸಾವಿನ ಸಂಖ್ಯೆ 10ಕ್ಕೆ ಏರಿಕೆ; ಸ್ಥಳಕ್ಕೆ ಕೃಷ್ಣ ಬೈರೇಗೌಡ ಭೇಟಿ

ಕೊನೆಗೂ ಸಂಘರ್ಷ ಪೀಡಿತ ಮಣಿಪುರಕ್ಕೆ ಮೋದಿ ಭೇಟಿ; 'ಶಾಂತಿ ಮಾರ್ಗ' ಆರಿಸಿಕೊಳ್ಳುವಂತೆ ಮನವಿ

Hassan Tragedy: ನನ್ನಮ್ಮ ಹುಟ್ಟಿದೂರು, ನೋವಾಯ್ತು ಅದಕ್ಕೆ ಬಂದೆ; ಗಾಯಾಳುಗಳ ವಿಚಾರಿಸಿದ ದೇವೇಗೌಡ, ತಲಾ 1 ಲಕ್ಷ ರೂ. ಪರಿಹಾರ!

SCROLL FOR NEXT