ಯುವಜನ/ಮಕ್ಕಳು

ತಲೆ ಖಾಲಿ ಇರುವುದರಿಂದ ಅದು ನೋಯುತ್ತಿದೆ...

ಪುಟ್ಟಿ ಹೊಟ್ಟೆನೋವೆಂದು ಅಳುತ್ತಿದ್ದಳು. ಆಕೆಯ ಅಮ್ಮ ಹೇಳಿದಳು, 'ನಿನ್ನ ಹೊಟ್ಟೆ ಖಾಲಿ ಇರುವುದರಿಂದ ಅದು ನೋಯುತ್ತಿದೆ. ನೀ ಅದಕ್ಕೇನಾದರೂ ತುಂಬಬೇಕು.' ಮರುದಿನ ಪುಟ್ಟಿಯ ಅಪ್ಪ ತಲೆನೋವೆಂದು ಸೋಫಾಗೆ ಒರಗಿದರು. ಆಗ ಪುಟ್ಟಿ, 'ನಿಮ್ಮ ತಲೆ ಖಾಲಿ ಇರುವುದರಿಂದ ಅದು ನೋಯುತ್ತಿದೆ. ನೀವು ಅದಕ್ಕೇನಾದರೂ ತುಂಬಬೇಕು!'
=
ಚಿಂಟು ಮಿಂಟು ಅಣ್ಣತಮ್ಮಂದಿರು. ಅವರ ತರಲೆಗಳಿಂದಾಗಿ ಪೋಷಕರಿಗೆ ಪ್ರತಿದಿನ ದೂರುಗಳು ಬರುತ್ತಲೇ ಇದ್ದವು. ಇದರಿಂದ ಬೇಸತ್ತ ಅವರ ಅಮ್ಮ ಮಕ್ಕಳನ್ನು ಮಾನಸಿಕ ತಜ್ಞರ ಹತ್ತಿರ ಕರೆದುಕೊಂಡು ಹೋದರು. ಮೊದಲು ಚಿಂಟುವನ್ನು ಕರೆದ ಡಾಕ್ಟರ್, 'ದೇವರೆಲ್ಲಿದ್ದಾನೆ ಹೇಳಿಬಿಡು ಪುಟ್ಟಾ?' ಎಂದು ಪ್ರೀತಿಯಿಂದ ಮಾತನಾಡಿಸಿದರು. ಉತ್ತರ ನೀಡದ ಚಿಂಟುವನ್ನು ನೋಡಿ ಅವರಿಗೆ ಕೋಪ ಬಂತು. ಜೊರಾಗಿ 'ದೇವರೆಲ್ಲಿದ್ದಾನೆ ಹೇಳು' ಎಂದು ಗದರಿದರು. ಹೊರಗೆ ಓಡಿ ಹೋದ ಚಿಂಟು, ಮಿಂಟುವನ್ನು ಕರೆದು ಎಂದ, 'ಮೊದಲು ಇಲ್ಲಿಂದ ತಪ್ಪಿಸಿಕೊಳ್ಳಬೇಕು. ದೇವರು ಕಾಣೆಯಾಗಿದ್ದಾನಂತೆ. ಮತ್ತು ಅವರೆಲ್ಲ ನಾವೇ ಬಚ್ಚಿಟ್ಟಿದ್ದೇವೆ ಎಂದು ಭಾವಿಸಿದ್ದಾರೆ!'

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ರಷ್ಯಾದಿಂದ ಇಂಧನ ಖರೀದಿ ನಿಲ್ಲಿಸಿ.. ಇಲ್ಲ..' ಚೀನಾಗೆ ಶೇ.50ರಿಂದ ಶೇ.100ರಷ್ಟು ಸುಂಕ ಹಾಕ್ತೀನಿ': NATO ರಾಷ್ಟ್ರಗಳಿಗೆ Trump ಎಚ್ಚರಿಕೆ!

ರಜನಿಕಾಂತ್ 'Coolie' ಚಿತ್ರದಲ್ಲಿ ನಟಿಸಿದ್ದು ನನ್ನ ದೊಡ್ಡ ತಪ್ಪು ನಿರ್ಧಾರ: Aamir Khan ಹೇಳಿಕೆ ಕುರಿತು ಸ್ಪಷ್ಟನೆ!

ಹಾಸನ ಗಣೇಶ ಮೆರವಣಿಗೆ ದುರಂತ: ಸಾವಿನ ಸಂಖ್ಯೆ 10ಕ್ಕೆ ಏರಿಕೆ; ಸ್ಥಳಕ್ಕೆ ಕೃಷ್ಣ ಬೈರೇಗೌಡ ಭೇಟಿ

ಕೊನೆಗೂ ಸಂಘರ್ಷ ಪೀಡಿತ ಮಣಿಪುರಕ್ಕೆ ಮೋದಿ ಭೇಟಿ; 'ಶಾಂತಿ ಮಾರ್ಗ' ಆರಿಸಿಕೊಳ್ಳುವಂತೆ ಮನವಿ

Hassan Tragedy: ನನ್ನಮ್ಮ ಹುಟ್ಟಿದೂರು, ನೋವಾಯ್ತು ಅದಕ್ಕೆ ಬಂದೆ; ಗಾಯಾಳುಗಳ ವಿಚಾರಿಸಿದ ದೇವೇಗೌಡ, ತಲಾ 1 ಲಕ್ಷ ರೂ. ಪರಿಹಾರ!

SCROLL FOR NEXT