ರೋತಕ್‌ ಸಹೋದರಿಯರು ಥಳಿಸುತ್ತಿರುವುದು 
ಪ್ರಧಾನ ಸುದ್ದಿ

ಸೀಟು ಜಗಳವೇ ಕಾರಣ? ; ರೋತಕ್ ಪ್ರಕರಣಕ್ಕೆ ಹೊಸ ತಿರುವು

ಹರ್ಯಾಣದ ರೋತಕ್‌ನಲ್ಲಿ ಆರತಿ ಮತ್ತು ಪೂಜಾ ಎಂಬ ಸಹೋದರಿಯರಿಬ್ಬರಿಗೆ ಕಿರುಕುಳ ನೀಡಿದ ಯುವಕರಿಗೆ ಬೆಲ್ಟ್ ...

ಚಂಡೀಗಢ: ಹರ್ಯಾಣದ ರೋತಕ್‌ನಲ್ಲಿ ಬಸ್ ಪ್ರಯಾಣದ ವೇಳೆ ಆರತಿ ಮತ್ತು ಪೂಜಾ ಎಂಬ ಸಹೋದರಿಯರಿಬ್ಬರಿಗೆ ಕಿರುಕುಳ ನೀಡಿದ ಯುವಕರಿಗೆ ಬೆಲ್ಟ್ ಬಿಚ್ಚಿ ಥಳಿಸಿದ ಪ್ರಕರಣಕ್ಕೆ ಈಗ ಹೊಸತೊಂದು ತಿರುವು ಸಿಕ್ಕಿದೆ.

ಈ ಸಹೋದರಿಯರು ತಮ್ಮನ್ನು ಬಸ್‌ನಲ್ಲಿದ್ದ ಮೂವರು ಯುವಕರು ಚುಡಾಯಿಸಿದರು ಎಂಬ ಕಾರಣಕ್ಕೆ ಬೆಲ್ಟ್ ಬಿಚ್ಚಿ ಥಳಿಸಿದ್ದರು. ಆದರೆ ಆ ಯುವಕರನ್ನು ಹುಡುಗಿಯರನ್ನ ಚುಡಾಯಿಸಿಲ್ಲ, ಬಸ್ಸಿನಲ್ಲಿ ಸೀಟು ವಿಷಯಕ್ಕೆ ಸಂಬಂಧಿಸಿದಂತೆ ಅವರ ನಡುವೆ ವಾಗ್ವಾದ ನಡೆದಿತ್ತು ಎಂದು ಘಟನೆ ನಡೆದ ದಿನ ಅದೇ ಬಸ್ಸಿನಲ್ಲಿ ಸಂಚರಿಸಿದ್ದ ಮಹಿಳೆಯೊಬ್ಬರು ಬುಧವಾರ ಹೇಳಿಕೆ ನೀಡಿದ್ದಾರೆ. ಈ ಮೂಲಕ ಪ್ರಸ್ತುತ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಚುಡಾಯಿಸಿದ ಯುವಕರಿಗೆ  ಥಳಿಸಿರುವ ವೀಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ದೇಶಕ್ಕೆ ದೇಶವೇ ಈ ಸಹೋದರಿಯರನ್ನು ಕೊಂಡಾಡಿತ್ತು.  ಅಷ್ಟೊತ್ತಿಗೆ ಹರ್ಯಾಣ ಸರ್ಕಾರ ಈ ಯುವತಿಯರಿಗೆ ಗಣರಾಜ್ಯದಿನದಂದು ಶೌರ್ಯ ಪ್ರಶಸ್ತಿ ನೀಡುವುದಾಗಿಯೂ ಘೋಷಿಸಿತ್ತು.
 
ಏನಿದು ಪ್ರಕರಣ?: ಪೂಜಾ ಮತ್ತು ಆರತಿ ಬಸ್ಸಿನಲ್ಲಿ ಸಂಚರಿಸುತ್ತಿದ್ದ ವೆಳೆ ಕುಲ್‌ದೀಪ್, ಮೋಹಿತ್ ಮತ್ತು ದೀಪಕ್ ಎಂಬ ಯುವಕರು ಚುಡಾಯಿಸಿದ್ದರು. ಆ ವೇಳೆ ರೊಚ್ಚಿಗೆದ್ದ ಸಹೋದರಿಯರು ಚುಡಾಯಿಸಿದ ಯುವಕರಿಗೆ ಬೆಲ್ಟ್ ಬಿಚ್ಚಿ ಚೆನ್ನಾಗಿ ಥಳಿಸಿದ್ದಾರೆ. ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದರೂ ಅಲ್ಲಿಂದ ಯಾವುದೇ ಉತ್ತರ ಸಿಗಲಿಲ್ಲ. ಆದಾಗ್ಯೂ, ಬಸ್‌ನಲ್ಲಿದ್ದವರು ಮೂಕಪ್ರೇಕ್ಷಕರಾಗಿದ್ದರೇ ಹೊರತು ಯಾರೊಬ್ಬರೂ ಈ ಯವತಿಯರ ಸಹಾಯಕ್ಕೆ ಬರಲಿಲ್ಲ. ಈ ವೇಳೆ ಬಸ್‌ನಲ್ಲಿದ್ದ ಸಹ ಪ್ರಯಾಣಿಕರೊಬ್ಬರು ಯುವತಿಯರು ಯುವಕರಿಗೆ ಥಳಿಸುತ್ತಿರುವ ದೃಶ್ಯವನ್ನು ರೆಕಾರ್ಡ್ ಮಾಡಿದ್ದರು.

ಈ ಘಟನೆ ಬೆಳಕಿಗೆ ಬಂದ ನಂತರ ಕುಲ್‌ದೀಪ್, ಮೋಹಿತ್ ಮತ್ತು ದೀಪಕ್‌ನ್ನು ಬಂಧಿಸಲಾಗಿತ್ತು.

ಈ ಹಿಂದೆಯೂ ವ್ಯಕ್ತಿಯೊಬ್ಬನಿಗೆ ಥಳಿಸಿದ್ದರು: ರೋತಕ್‌ನ ಪೂಜಾ ಮತ್ತು ಆರತಿ ಸಹೋದರಿಯರು ಪಾರ್ಕ್‌ನಲ್ಲಿ ಚುಡಾಯಿಸಿದ ವ್ಯಕ್ತಿಯೊಬ್ಬನಿಗೆ ಥಳಿಸುವ ವೀಡಿಯೋ ಮಂಗಳವಾರ ಬಹಿರಂಗವಾಗಿತ್ತು. ಈ ವಿಡಿಯೋ ಒಂದು ತಿಂಗಳ ಹಳೆಯದ್ದಾಗಿದ್ದು ಎಂದು ಹೇಳಿರುವ ಪೂಜಾ, ಆ ವೀಡಿಯೋವನ್ನು ಬಹಿರಂಗ ಪಡಿಸಿರುವ ವ್ಯಕ್ತಿಯ ವಿರುದ್ಧ ತಾನು ದೂರು ನೀಡುವುದಾಗಿ ಹೇಳಿದ್ದಾಳೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT