ರಾಮ್‌ಪಾಲ್‌ 
ಪ್ರಧಾನ ಸುದ್ದಿ

ದೇವಮಾನವರ ಆಶ್ರಮಗಳು 'ಭಯೋತ್ಪಾದನಾ' ಕೇಂದ್ರಗಳಾಗುತ್ತಿವೆ: ಬಿಜೆಪಿ

ರಾಮ್‌ಪಾಲ್‌ನಂತ ದೇವ ಮಾನವರಿಂದ ನಡೆಸಲ್ಪಡುವ ಆಶ್ರಮಗಳು ಭಕ್ತಿಯ ಹೆಸರಲ್ಲಿ ಭಯೋತ್ಪಾದನೆಯನ್ನು ಹುಟ್ಟಿಸುತ್ತವೆ...

ನವದೆಹಲಿ: ರಾಮ್‌ಪಾಲ್‌ನಂತ ದೇವ ಮಾನವರಿಂದ ನಡೆಸಲ್ಪಡುವ ಆಶ್ರಮಗಳು ಭಕ್ತಿಯ ಹೆಸರಲ್ಲಿ ಭಯೋತ್ಪಾದನೆಯನ್ನು ಹುಟ್ಟಿಸುತ್ತವೆ ಎಂದು ಬಿಜೆಪಿ ಹೇಳಿದೆ.

ಪಕ್ಷದ ಮುಖವಾಣಿ ಕಮಲ್ ಸಂದೇಶದಲ್ಲಿ, ಆಶ್ರಮಗಳು ಭಕ್ತಿಯ ಹೆಸರಲ್ಲಿ ಭಯೋತ್ಪಾದನೆ ಹುಟ್ಟಿಸಿ, ಭಯೋತ್ಪಾದನಾ ಕೇಂದ್ರಗಳಾಗಿ ಮಾರ್ಪಟ್ಟಿವೆ. ಇವುಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಬಿಜೆಪಿ ಹೇಳಿದೆ.

ರಾಮ್‌ಪಾಲ್‌ನಂತವರು ಒಂದೇ ದಿನದಲ್ಲಿ ಹುಟ್ಟಿಕೊಳ್ಳುವುದಿಲ್ಲ. ಇಂಥವರು ಸಮಾಜದಲ್ಲಿ ಮೂಢನಂಬಿಕೆಗಳನ್ನು ಪಸರಿಸಿ, ತಮ್ಮ ಜಾಲವನ್ನು ಬೆಳೆಸಿಕೊಂಡು ಹೋಗುತ್ತಾರೆ. ಆದ್ದರಿಂದ ಈ ಆಶ್ರಮಗಳು ಆರಂಭವಾಗುವ ಹೊತ್ತಿಗೇ ಅವುಗಳನ್ನು ನಿಷೇಧಕ್ಕೊಳಪಡಿಸಬೇಕು.

ಯಾರನ್ನು ನಾವು ಬಾಬಾ ಅಥವಾ ಸ್ವಾಮಿಗಳೆಂದು ಕರೆಯಬೇಕು ಎಂಬುದಕ್ಕೆ ಉತ್ತರವಾಗಿ ಬರೆದ ಬರಹವೊಂದರಲ್ಲಿ ಬಿಜೆಪಿ ಉಪಾಧ್ಯಕ್ಷ ಪ್ರಭಾತ್ ಜಾ, ಮೂಢನಂಬಿಕೆಯ ಮೂಲಕ ಜನರಿಗೆ ಮಂಕುಬೂದಿಯೆರಚುವುದನ್ನು ನೋಡಿದರೆ ನಾವಿನ್ನೂ ಕತ್ತಲ ಯುಗದಲ್ಲೇ ಇದ್ದೀವಿ ಎಂದು ಅನಿಸಿಬಿಡುತ್ತದೆ ಎಂದಿದ್ದಾರೆ.

ರಾಮ್‌ಪಾಲ್‌ನ್ನು ಬಂಧಿಸಿದ ಹರ್ಯಾಣ ಸರ್ಕಾರವನ್ನು ಶ್ಲಾಘಿಸಿದ ಬಿಜೆಪಿ, ಇಂಥಾ ದೇವಮಾನವರನ್ನು ಶಿಕ್ಷೆಗೊಳಪಡಿಸವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನನ್ನು ನೀಡಿದಂತಾಗಿದೆ ಎಂದು ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!