ರಾಮ್‌ಪಾಲ್‌ 
ಪ್ರಧಾನ ಸುದ್ದಿ

ದೇವಮಾನವರ ಆಶ್ರಮಗಳು 'ಭಯೋತ್ಪಾದನಾ' ಕೇಂದ್ರಗಳಾಗುತ್ತಿವೆ: ಬಿಜೆಪಿ

ರಾಮ್‌ಪಾಲ್‌ನಂತ ದೇವ ಮಾನವರಿಂದ ನಡೆಸಲ್ಪಡುವ ಆಶ್ರಮಗಳು ಭಕ್ತಿಯ ಹೆಸರಲ್ಲಿ ಭಯೋತ್ಪಾದನೆಯನ್ನು ಹುಟ್ಟಿಸುತ್ತವೆ...

ನವದೆಹಲಿ: ರಾಮ್‌ಪಾಲ್‌ನಂತ ದೇವ ಮಾನವರಿಂದ ನಡೆಸಲ್ಪಡುವ ಆಶ್ರಮಗಳು ಭಕ್ತಿಯ ಹೆಸರಲ್ಲಿ ಭಯೋತ್ಪಾದನೆಯನ್ನು ಹುಟ್ಟಿಸುತ್ತವೆ ಎಂದು ಬಿಜೆಪಿ ಹೇಳಿದೆ.

ಪಕ್ಷದ ಮುಖವಾಣಿ ಕಮಲ್ ಸಂದೇಶದಲ್ಲಿ, ಆಶ್ರಮಗಳು ಭಕ್ತಿಯ ಹೆಸರಲ್ಲಿ ಭಯೋತ್ಪಾದನೆ ಹುಟ್ಟಿಸಿ, ಭಯೋತ್ಪಾದನಾ ಕೇಂದ್ರಗಳಾಗಿ ಮಾರ್ಪಟ್ಟಿವೆ. ಇವುಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಬಿಜೆಪಿ ಹೇಳಿದೆ.

ರಾಮ್‌ಪಾಲ್‌ನಂತವರು ಒಂದೇ ದಿನದಲ್ಲಿ ಹುಟ್ಟಿಕೊಳ್ಳುವುದಿಲ್ಲ. ಇಂಥವರು ಸಮಾಜದಲ್ಲಿ ಮೂಢನಂಬಿಕೆಗಳನ್ನು ಪಸರಿಸಿ, ತಮ್ಮ ಜಾಲವನ್ನು ಬೆಳೆಸಿಕೊಂಡು ಹೋಗುತ್ತಾರೆ. ಆದ್ದರಿಂದ ಈ ಆಶ್ರಮಗಳು ಆರಂಭವಾಗುವ ಹೊತ್ತಿಗೇ ಅವುಗಳನ್ನು ನಿಷೇಧಕ್ಕೊಳಪಡಿಸಬೇಕು.

ಯಾರನ್ನು ನಾವು ಬಾಬಾ ಅಥವಾ ಸ್ವಾಮಿಗಳೆಂದು ಕರೆಯಬೇಕು ಎಂಬುದಕ್ಕೆ ಉತ್ತರವಾಗಿ ಬರೆದ ಬರಹವೊಂದರಲ್ಲಿ ಬಿಜೆಪಿ ಉಪಾಧ್ಯಕ್ಷ ಪ್ರಭಾತ್ ಜಾ, ಮೂಢನಂಬಿಕೆಯ ಮೂಲಕ ಜನರಿಗೆ ಮಂಕುಬೂದಿಯೆರಚುವುದನ್ನು ನೋಡಿದರೆ ನಾವಿನ್ನೂ ಕತ್ತಲ ಯುಗದಲ್ಲೇ ಇದ್ದೀವಿ ಎಂದು ಅನಿಸಿಬಿಡುತ್ತದೆ ಎಂದಿದ್ದಾರೆ.

ರಾಮ್‌ಪಾಲ್‌ನ್ನು ಬಂಧಿಸಿದ ಹರ್ಯಾಣ ಸರ್ಕಾರವನ್ನು ಶ್ಲಾಘಿಸಿದ ಬಿಜೆಪಿ, ಇಂಥಾ ದೇವಮಾನವರನ್ನು ಶಿಕ್ಷೆಗೊಳಪಡಿಸವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನನ್ನು ನೀಡಿದಂತಾಗಿದೆ ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಪಕ್ಷದ ಮೇಲೆ ನನಗೆ ನಂಬಿಕೆ ಇದೆ: ದುಡ್ಡು- ಬ್ಲಡ್ ನಿರಂತರ ಚಲನೆಯಲ್ಲಿ ಇರಬೇಕು; ಅಕ್ಕಪಕ್ಕದಲ್ಲಿ ಇರುವವರೇ ಮೋಸ ಮಾಡುತ್ತಾರೆ, ಎಚ್ಚರ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT