ಪೇಶಾವಾರ್ ದಾಳಿಯ ಒಂದು ದೃಷ್ಯ 
ಪ್ರಧಾನ ಸುದ್ದಿ

ಸಂಜೋತ ರೈಲು ಸ್ಫೋಟ ಪ್ರಕರಣದ ಬಗ್ಗೆ ಭಾರತ ಪ್ರಗತಿ ತೋರಿಸಬೇಕು: ಪಾಕಿಸ್ತಾನ

ಮುಂಬೈ ೨೬/೧೧ ಭಯೋತ್ಪಾದನಾ ದಾಳಿಯ ಪ್ರಮುಖ ಆರೋಪಿ ಜಾಕಿರ್ ರೆಹಮಾನ್ ಲಕ್ವಿ ಬಿಡುಗಡೆಯಾಗಿಲ್ಲ. ..

ಇಸ್ಲಮಾಬಾದ್: ಮುಂಬೈ ೨೬/೧೧ ಭಯೋತ್ಪಾದನಾ ದಾಳಿಯ ಪ್ರಮುಖ ಆರೋಪಿ ಜಾಕಿರ್ ರೆಹಮಾನ್ ಲಕ್ವಿ ಬಿಡುಗಡೆಯಾಗಿಲ್ಲ. ಅವರಿನ್ನೂ ಬಂಧನದಲ್ಲಿದ್ದಾರೆ.  ಆದರೆ ಸಂಜೋತ ರೈಲು ಸ್ಫೋಟ ಪ್ರಕರಣದ ಬಗೆಗಿನ ತನಿಖೆಯ ಪ್ರಗತಿಯನ್ನು ಭಾರತ ತೋರಿಸಬೇಕು ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಭದ್ರತಾ ಹಾಗೂ ವಿದೇಶಾಂಗ ಸಲಹೆಗಾರ ಸತ್ರಾಜ್ ಅಜೀಜ್ ಹೇಳಿದ್ದಾರೆ.

೨೦೦೭ ರಲ್ಲಿ ದೆಹಲಿ-ಲಾಹೋರ್ ಮಧ್ಯೆ ಸಂಚರಿಸುತ್ತಿದ್ದ ಸಂಜೋತ ರೈಲು ಸ್ಫೋಟದ ದುರ್ಘಟನೆಯಲ್ಲಿ ಸುಮೇರು ೭೦ ಜನ (ಹೆಚ್ಚಿನ ಸಂಖ್ಯೆ ಪಾಕಿಸ್ತಾನದವರು) ಮೃತಪಟ್ಟಿದ್ದರು.

ಪಾಕಿಸ್ತಾನ ಮತ್ತು ಆಪ್ಘಾನಿಸ್ತಾನದ ಗಡಿಯಲ್ಲಿ ಉಗ್ರರನ್ನು ಮಟ್ಟ ಹಾಕಲು ಎರಡೂ ದೇಶದ ಸೇನೆ ಜಂಟಿ ಕಾರ್ಯಾಚರಣೆ ನಡೆಸಲಿವೆ ಎಂದು ಕೂಡ ಆಜೀಜ್ ತಿಳಿಸಿದ್ದಾರೆ.

ಪಾಕಿಸ್ತಾನದ ಪೇಶಾವರದ ಸೇನಾ ಶಾಲೆಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ೧೩೨ ಮಕ್ಕಳು ಸೇರಿದಂತೆ ಸುಮಾರು ೧೪೦ ಜನ ಮೃತಪಟ್ಟ ಹಿನ್ನಲೆಯಲ್ಲಿ,  ಇದು "ಪಾಕಿಸ್ತಾನ ೯/೧೧" ಎಂದಿದ್ದ ಆಜೀಜ್, ಉಗ್ರಗಾಮಿಗಳನ್ನು ಹತ್ತಿಕ್ಕಲು ಆಪ್ಘಾನಿಸ್ತಾನದ ನಾಯಕತ್ವ ಪಾಕಿಸ್ತಾನ ಸೇನೆಗೆ ಸಂಪೂರ್ಣ ಬೆಂಬಲ ನೀಡಲು ಒಪ್ಪಿಗೆ ಕೊಟ್ಟಿದೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT