ಆಗ್ರಾದಲ್ಲಿ ನಡೆದ ಮರು ಮತಾಂತರದ ಚಿತ್ರ 
ಪ್ರಧಾನ ಸುದ್ದಿ

ಮರುಮತಾಂತರ ತಪ್ಪಲ್ಲ:ಶಿವಸೇನೆ

ಅನ್ಯಧರ್ಮಗಳಿಂದ ಹಿಂದೂ ಧರ್ಮಕ್ಕೆ ಮರು ಮತಾಂತರ ಮಾಡುವುದರಲ್ಲಿ ಏನೂ ತಪ್ಪಿಲ್ಲ ಎಂದಿರುವ ಶಿವಸೇನೆ "ಹಿಂದೂಗಳನ್ನು...

ಮುಂಬೈ: ಅನ್ಯಧರ್ಮಗಳಿಂದ ಹಿಂದೂ ಧರ್ಮಕ್ಕೆ ಮರು ಮತಾಂತರ ಮಾಡುವುದರಲ್ಲಿ ಏನೂ ತಪ್ಪಿಲ್ಲ ಎಂದಿರುವ ಶಿವಸೇನೆ "ಹಿಂದೂಗಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುವಾಗ ಮೌನವಾಗಿದ್ದದ್ದೇಕೆ" ಎಂದು ಟೀಕಿಸಿದೆ.

"ನೆನ್ನೆಯವರೆಗೂ ಹಿಂದೂಗಳನ್ನು ಮುಸ್ಲಿಮರನ್ನಾಗಿ ಮತಾಂತರ ಮಾಡಲಾಗುತ್ತಿತ್ತು. ಆಗ ಅದನ್ನು ಯಾರೂ ಬಲಾತ್ಕಾರದ ಮತಾಂತರ ಎನ್ನಲಿಲ್ಲ. ಈಗ ಗಂಗಾ ಹಿಂದಕ್ಕೆ ಹರಿಯಲು ಪ್ರಾರಂಭಿಸಿದೆ, ಈಗ ಹುಸಿ ಜಾತ್ಯಾತೀತವಾದಿಗಳು ಮತಾಂತರ ತಪ್ಪು ಎನ್ನುತ್ತಿದ್ದಾರೆ" ಎಂದು ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಅಭಿಪ್ರಾಯ ಮಂಡಿಸಿದೆ.

"ಮೊಘಲರ ಆಳ್ವಿಕೆಯಲ್ಲಿ ಬಲಾತ್ಕಾರದಿಂದ ಮುಸ್ಲಿಂ ಧರ್ಮಕ್ಕೆ ಮತಾತಂತರಗೊಂಡ ಹಿಂದೂಗಳ ಬಗ್ಗೆ ಹಾಗೂ ಬ್ರಿಟಿಷ್ ಮತ್ತು ಪೋರ್ಚುಗೀಸ್ ಆಳ್ವಿಕೆಯಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂದ ಹಿಂದೂಗಳ ಬಗ್ಗೆ ಈ ಜಾತ್ಯಾತೀತವಾದಿಗಳು ಏನೆನ್ನುತ್ತಾರೆ?" ಎಂದು ಸೇನಾ ಪ್ರಶ್ನಿಸಿದೆ.

"ಬಿಜೆಪಿ ಪಕ್ಷದ ಹಲವಾರು ಜನ ಈ ಮರು ಮತಾಂತರದ ಬಗ್ಗೆ ಒಪ್ಪಿಗೆ ಸೂಚಿಸಿದ್ದಾರೆ, ಆದರೆ ಮಹಾರಾಷ್ಟ್ರ ಮತ್ತು ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿರುವುದರಿಂದ ಉಭಯ ಸಂಕಟಕ್ಕೆ ಬಿದ್ದಿದ್ದಾರೆ" ಎಂದಿದೆ

ಅಯೋಧ್ಯೆದಲ್ಲಿ ಶೀಘ್ರವಾಗಿ ರಾಮ ದೇವಸ್ಥಾನವನ್ನು ಕಟ್ಟಬೇಕು ಎನ್ನುವ ಉತ್ತರ ಪ್ರದೇಶದ ರಾಜ್ಯಪಾಲ ರಾಮ ನಾಯಕ ಅವರ ಆಶಯಕ್ಕೂ ಶಿವಸೇನೆಯ ಸಹಮತವಿದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!