ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ 
ಪ್ರಧಾನ ಸುದ್ದಿ

ಕಾಂಗ್ರೆಸ್ ಅಬ್ಬರವನ್ನು ಬುಡಮೇಲು ಮಾಡಿದ ಮೋದಿ ಪ್ರವಾಸ

ಗುಲಾಬಿ ಹೂಗಳು, ಭಾಷಣಗಳು ಮತ್ತು ಕೊನೆಯ ದಿನದ ಸಂಕಲ್ಪ. ಘಾನ ದೇಶದ ಮಾಜಿ ಪ್ರಧಾನಿ...

ನವದೆಹಲಿ: ಗುಲಾಬಿ ಹೂಗಳು, ಭಾಷಣಗಳು ಮತ್ತು ಕೊನೆಯ ದಿನದ ಸಂಕಲ್ಪ. ಘಾನ ದೇಶದ ಮಾಜಿ  ಪ್ರಧಾನಿ ಜಾನ್ ಕುಫೋರ್ ಓದಿದ ಭಾಷಣ ಸಮಾವೇಶದ ಕೊನೆಯ ಘಳಿಗೆಗೆ ಜಾಗತಿಕ ಮೆರುಗು ತಂದಿತ್ತು.

ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರ್ ಲಾಲ್ ನೆಹರು ಅವರ ೧೨೫ ಜನ್ಮ ಶತಾಬ್ಧಿ ಆಚರಣೆಯ ಅಂಗವಾಗಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಎರಡು ದಿನದ ಸಮಾವೇಶದಲ್ಲಿ ಅಗತ್ಯವಾದ ಎಲ್ಲ ಪರಿಕರಗಳು ಇದ್ದವು. ಆದರೆ ಈಡಿಯಟ್ ಡಬ್ಬ (ಟಿ ವಿ) ಈ ಸಮಾವೇಶವನ್ನು ಕಡೆಗಣಿಸಿತು. ಬದಲಾಗಿ ಆಸ್ಟ್ರೇಲಿಯಾಗೆ ಹೋಗಿದ್ದ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿ ಹೆಜ್ಜೆಯನ್ನೂ ಅದು ಪ್ರಸಾರ ಮಾಡುತ್ತಿತ್ತು.

ಟಿ ವಿ ಮಾಧ್ಯಮಗಳ ಕಥೆ ಮೊದಲ ಪ್ರಧಾನಿಯಿಂದ ಇಂದಿನ ಪ್ರಧಾನಿಗೆ ಬದಲಾಗಿದ್ದಾರೆ, ಕಾಂಗ್ರೆಸ್ ಇನ್ನೂ ದಂತಕಥೆಗೇ ಅಂಟಿಕೊಂಡಿತ್ತು!

ಸಮಾವೇಶದ ಎರಡನೆ ದಿನವಾದ ಮಂಗಳವಾರ, ಸಮಾಜವಾದಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್ ಮಾತ್ರ ಇಂದಿನ ದಿನದ ರಾಜಕೀಯಕ್ಕೆ ಕೊಂಡಿ ಬೆಸೆದದ್ದು. ಕಾಂಗ್ರೆಸ್ ನ ಹಿರಿಯ ನಾಯಕರಾದ, ಮಾಜಿ ಕೇಂದ್ರ ಸಂಪುಟ ಸಚಿವರೂ ಆದ  ಪಿ ಚಿದಂಬರಂ, ಸುಶೀಲ್ ಕುಮಾರ್ ಶಿಂಧೆ, ಕಪಿಲ್ ಸಿಬಲ್, ಕಮಲ್ ನಾಥ್ ಮತ್ತು ಶಶಿ ತರೂರ್ ಸಮಾವೇಶದಲ್ಲಿ ಗೈರು ಹಾಜರಿದ್ದುದು ಎದ್ದು ಕಾಣುತ್ತಿತ್ತು.

ಎನ್ ಡಿ ಎ ಹೊರತಾದ ನಾಯಕರು ನೆಹರು ಮತ್ತು ನೆಹರೂವಿನ ಭಾರತವನ್ನು ಸಮರ್ಥಿಸಿಕೊಳ್ಳಲು ಉತ್ತಮ ವೇದಿಕೆಯಾಗಿದ್ದ ಸಮಾವೇಶದ ಮೊದಲ ದಿನವನ್ನು ಲೋಹಿಯಾವಾದಿಗಳಾದ ಮುಲಾಯಂ ಸಿಂಗ್ ಯಾದವ್ ಮತ್ತು ಲಾಲು ಪ್ರಸಾದ್ ಯಾದವ್ ಕೂಡ ತಪ್ಪಿಸಿಕೊಂಡರು.

ಎರಡು ದಿನದ ಸಮಾವೇಶದ ನಂತರ ತಳೆದ ಸಂಕಲ್ಪದಲ್ಲಿ ಇಂದಿನ ರಾಜಕೀಯಕ್ಕೆ ಮತ್ತು ಪಕ್ಷಕ್ಕೆ ನೆಹರು ಪ್ರಸ್ತುತತೆಯ ಬಗ್ಗೆಯೇ ಹೆಚ್ಚು ಉಲ್ಲೇಖವಿತ್ತು.

ವಿಶ್ವ ಇಂದು ಸಮುದಾಯಗಳನ್ನು ಒಡೆಯುವ ರಾಜಕೀಯವನ್ನು ದೂರ ಇಡಬೇಕಾಗಿದೆ ಎಂಬ ಘೋಷಣೆ ಸಾರಿತು. ತಮ್ಮ ೨ ದಶಕದ ಆರ್ಥಿಕ ಸುಧಾರಣೆಗಳನ್ನು ಬದಿಗಿಟ್ಟ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ನೆಹರು ಅವರ ಸಮಾಜವಾದವನ್ನು ಹಾಡಿ ಹೊಗಳಿ ಅದು ಬರೀ ಅರ್ಥಶಾಸ್ತ್ರವಲ್ಲ ಜೀವನ ನಡೆಸುವ ಬಗೆ ಎಂದುರು.

ಕರ್ಜಾಯ್, ಕುಫೋರ್, ನೈಜೀರಿಯಾದ ಜನರಲ್ ಒಬಾಸಂಜೋ, ನೇಪಾಳದ ಮಾಜಿ ಪ್ರಧಾನಿ ಮಾಧವ ಕೆ ನೇಪಾಳ್, ಭೂತಾನಿನ ರಾಣಿ ದೋರ್ಜ್ಗಿ ವಾಗ್ಮೋ ವಾಂಗ್ ಚುಕ್ ಸಮಾವೇಶದಲ್ಲಿ ಹಾಜರಿದ್ದ ಜಾಗತಿಕ ನಾಯಕರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT