ಸಿಂಧೂರತ್ನ ಸಬ್‌ಮರೀನ್ 
ಪ್ರಧಾನ ಸುದ್ದಿ

ಸಿಂಧೂರತ್ನ ದುರಂತ: 7 ನೌಕಾ ಅಧಿಕಾರಿಗಳು ತಪ್ಪಿತಸ್ಥರು

ಸಬ್‌ಮರೀನ್ ಐಎನ್‌ಎಸ್ ಸಿಂಧೂರತ್ನ ಅಗ್ನಿಗಾಹುತಿಯಾದ ಪ್ರಕರಣದಲ್ಲಿ ನೌಕಾದಳದ ಏಳು ಅಧಿಕಾರಿಗಳು ತಪ್ಪಿತಸ್ಥರೆಂದು...

ನವದೆಹಲಿ: ಸಬ್‌ಮರೀನ್ ಐಎನ್‌ಎಸ್ ಸಿಂಧೂರತ್ನ ಅಗ್ನಿಗಾಹುತಿಯಾದ ಪ್ರಕರಣದಲ್ಲಿ ನೌಕಾದಳದ ಏಳು ಅಧಿಕಾರಿಗಳು ತಪ್ಪಿತಸ್ಥರೆಂದು ಸಾಬೀತಾಗಿದೆ.

ಸಿಂಧೂರತ್ನ ಅಗ್ನಿ ಅವಘಡದಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ನೌಕಾದಳದ ಮುಖ್ಯಸ್ಥ ಅಡ್ಮಿರಲ್ ಡಿ.ಕೆ ಜೋಷಿ ರಾಜಿನಾಮೆ ನೀಡಬೇಕಾಗಿ ಬಂದಿತ್ತು.

ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವೆಸ್ಟರ್ನ್ ಕಮಾಂಡ್ ಪ್ರಧಾನ ಕಚೇರಿಗೆ ಆದೇಶಿಸಲಾಗಿದೆ ಎಂದು ರಾಜ್ಯಸಭೆಗೆ ಸಲ್ಲಿಸಿದ ಲಿಖಿತ ಉತ್ತರದಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.

ಐಎನ್‌ಎಸ್ ಸಿಂಧಝೂರತ್ನ ದುರಂತದ ತನಿಖೆ ನಡೆಸಿದ ತನಿಖಾ ತಂಡ ನೌಕಾದಳದ ಏಳು ಅಧಿಕಾರಿಗಳು ತಪ್ಪಿತಸ್ಥರು ಎಂದು ಸಾಬೀತಾಗಿರುವುದಾಗಿ ಪರಿಕ್ಕರ್ ಹೇಳಿದ್ದಾರೆ.
 
ಕಳೆದ ಫೆ.26ರಂದು ಮುಂಬೈನಲ್ಲಿ ತರಬೇತಿ ಮತ್ತು ನಿರೀಕ್ಷಣೆಗಾಗಿ ನಿಲ್ಲಿಸಿದ ಐಎನ್‌ಎಸ್ ಸಿಂಧೂರತ್ನ  ಅಗ್ನಿಗಾಹುತಿಯಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT