ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೇಕರ್ 
ಪ್ರಧಾನ ಸುದ್ದಿ

ನೌಕರರ ಕಿಡೀಗೇಡಿತನಕ್ಕೆ ಫ್ಯಾಬ್ ಇಂಡಿಯಾವನ್ನು ದೂಷಿಸಲಾಗುವುದಿಲ್ಲ: ಗೋವಾ ಮುಖ್ಯಮಂತ್ರಿ

ಗೋವಾದ ಟ್ರಯಲ್ ರೂಮ್ ಪ್ರಕರಣದಲ್ಲಿ ಫ್ಯಾಬ್ ಇಂಡಿಯಾದ ರಕ್ಷಣೆಗೆ ಬಂದಿರುವ ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೇಕರ್ ಅವರು

ಪಣಜಿ: ಗೋವಾದ ಟ್ರಯಲ್ ರೂಮ್ ಪ್ರಕರಣದಲ್ಲಿ ಫ್ಯಾಬ್ ಇಂಡಿಯಾದ ರಕ್ಷಣೆಗೆ ಬಂದಿರುವ ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೇಕರ್ ಅವರು ನೌಕರರು ಮಾಡಿದ ಕಿಡೀಗೇಡಿತನಕ್ಕೆ ಫ್ಯಾಬ್ ಇಂಡಿಯಾ ಸಂಸ್ಥೆಯನ್ನು ದೂಷಿಸಲಾಗುವುದಿಲ್ಲ ಎಂದು ಸೋಮವಾರ ತಿಳಿಸಿದ್ದಾರೆ. ಕಳೆದ ವಾರ ಫ್ಯಾಬ್ ಇಂಡಿಯಾ ಬಟ್ಟೆ ಅಂಗಡಿಯೊಂದರಲ್ಲಿ ಟ್ರಯಲ್ ರೂಮ್ ಕಡೆ ತಿರುಗಿಸಿದ್ದ ಸಿಸಿಟಿವಿ ಒಂದನ್ನು ಪತ್ತೆ ಹಚ್ಚಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಗೋವಾ ಪೊಲೀಸರಿಗೆ ದೂರು ನೀಡಿದ್ದರು.

"ಫ್ಯಾಬ್ ಇಂಡಿಯಾ ಗೌರವಯುತ ಸಂಸ್ಥೆ. ಇದು ಸಂಸ್ಥೆಯ ತಪ್ಪಲ್ಲ ಬಹುಷಃ ಆ ಅಂಗಡಿಯ ಸಿಬ್ಬಂದಿಯ ಚೇಷ್ಟೆ ಇರಬಹುದು ಎಂದು ನನ್ನ ವೈಯಕ್ತಿಕ ನಂಬಿಕೆ. ಯಾರೋ ಕೆಲವು ಹೆಣ್ಣುಬಾಕರು ಮಾಡಿರುವ ಕೆಲಸ ಅದು" ಎಂದು ಪರ್ಸೇಕರ್ ವರದಿಗಾರರಿಗೆ ತಿಳಿಸಿದ್ದಾರೆ.

ಈ ಪ್ರಕರಣದಲ್ಲ ಗಣ್ಯವ್ಯಕ್ತಿಯೊಬ್ಬರಿಗೆ ತೊಂದರೆ ಆಗಿರುವುದರಿಂದ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಇದು ಎಲ್ಲರಿಗೂ ಪಾಠವಾಗಲಿದ್ದು, ಇಂತಹ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಇದು ಪ್ರತ್ಯೇಕ ಘಟನೆ ಎಂದಿರುವ ಅವರು ಮಹಿಳೆಯರಿಗೆ ಗೋವಾ ಸುರಕ್ಷಿತ ಪ್ರವಾಸಿ ತಾಣ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT