ದಿವಂತತ ಐ ಎ ಎಸ್ ಅಧಿಕಾರಿ ಡಿ ಕೆ ರವಿ 
ಪ್ರಧಾನ ಸುದ್ದಿ

ಡಿ ಕೆ ರವಿ ಸಂದೇಶಗಳು ಬಹಿರಂಗವಾಗಿದ್ದು ಹೇಗೆ?: ಕರ್ನಾಟಕ ಹೈಕೋರ್ಟ್

ದಿವಂತತ ಐ ಎ ಎಸ್ ಅಧಿಕಾರಿ ಡಿ ಕೆ ರವಿ ಮತ್ತು ಮತ್ತೊಬ್ಬ ಐ ಎ ಎಸ್ ಮಹಿಳಾ ಅಧಿಕಾರಿಯ ನಡುವಿನ ಸಂದೇಶಗಳು ಮಾಧ್ಯಮಕ್ಕೆ ಬಹಿರಂಗವಾದದ್ದು ಹೇಗೆ

ಬೆಂಗಳೂರು: ದಿವಂಗತ ಐ ಎ ಎಸ್ ಅಧಿಕಾರಿ ಡಿ ಕೆ ರವಿ ಮತ್ತು ಮತ್ತೊಬ್ಬ ಐ ಎ ಎಸ್ ಮಹಿಳಾ ಅಧಿಕಾರಿಯ ನಡುವಿನ ಸಂದೇಶಗಳು ಮಾಧ್ಯಮಕ್ಕೆ ಬಹಿರಂಗವಾದದ್ದು ಹೇಗೆ ಎಂದು ಕರ್ನಾಟಕ ಹೈಕೋರ್ಟ್ ನ ನ್ಯಾಯಧೀಶ ಎಸ್ ಅಬ್ದುಲ್ ನಜೀರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ರವಿ ಅವರ ಅಸಹಜ ಸಾವಿನ ಕುರಿತು ಸಿಐಡಿ ತನಿಖೆಯ ಮದ್ಯಂತರ ವರದಿಯ ಮೇಲಿರುವ ನಿಷೇಧವನ್ನು ತೆರವುಗೊಳಿಸುವಂತೆ ರಾಜ್ಯಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿದ್ದಾಗ ನ್ಯಾಯಾಧೀಶರು ಈ ಪ್ರಶ್ನೆ ಕೇಳಿದ್ದಾರೆ. ಮಹಿಳಾ ಐ ಎ ಎಸ್ ಅಧಿಕಾರಿಯ ಪತಿಯ ಕೋರಿಕೆಯಂತೆ ಸಿಐಡಿ ವರದಿಯನ್ನು ಬಹಿರಂಗಗೊಳಿಸದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.

"ಮೊಬೈಲ್ ಫೋನ್ ಮತ್ತು ಇತರ ದಾಖಲೆಗಳು ನಿಮ್ಮ ಸುಪರ್ಧಿಯಲ್ಲಿವೆ. ಮಧ್ಯಂತರ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಇಡಲಾಗಿದೆ. ನಾನು ಆಕಸ್ಮಿಕವಾಗಿ ಟಿವಿ ನೋಡುವಾಗ ಎಸ್ ಎಂ ಎಸ್ ಮತ್ತು ವಾಟ್ಸ್ ಆಪ್ ಸಂದೇಶಗಳನ್ನು ಪ್ರಾದೇಶಿಕ ಸುದ್ದಿ ವಾಹಿನಿಗಳು ಅಕ್ಷರಶಃ ತೋರಿಸುತ್ತಿದ್ದರು. ನಿಮ್ಮ ಸುಪರ್ಧಿಯಲ್ಲಿದ್ದ ಸಂದೇಶಗಳು ಮಾಧ್ಯಮಗಳಿಗೆ ಸೋರಿಕೆಯಾಗಿದ್ದು ಹೇಗೆ" ಎಂದು ನ್ಯಾಯಧೀಶ ಸರ್ಕಾರಿ ವಕೀಲ ಎಸ್ ಪೊನ್ನಣ್ಣ ಅವರನ್ನು ಕೇಳಿದ್ದಾರೆ.

ಈ ಸಂದೇಶಗಳ ಸೋರಿಕೆಗೆ ಸರ್ಕಾರವಾಗಲೀ ಸಿಐಡಿ ಆಗಲೀ ಕಾರಣವಲ್ಲ. ಯಾರೋ ಮೂರನೆ ವ್ಯಕ್ತಿ ಈ ಸಂದೇಶಗಳನ್ನು ಮಾಧ್ಯಮಕ್ಕೆ ನೀಡಿದ್ದಾರೆ. ಸರ್ಕಾರದ ವಿರುದ್ಧ ಅಪಪ್ರಚಾರ ನಡೆಯುತ್ತಿರುವುದರಿಂದ ಈ ಮಧ್ಯಂತರ ತನಿಖಾ ವರದಿಯನ್ನು ಬಹಿರಂಗಗೊಳಿಸಬೇಕಿದೆ ಎಂದು ಪೊನ್ನಣ್ಣ ವಾದಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

Udaipur: ನಿಜಕ್ಕೂ ಅಚ್ಚರಿ, 55ನೇ ವಯಸ್ಸಿನಲ್ಲಿ 17ನೇ ಮಗುವಿಗೆ ತಾಯಿಯಾದ ಮಹಿಳೆ!

SCROLL FOR NEXT