ಮಾವೋವಾದಿಗಳು (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಒರಿಸ್ಸಾ: ಪಂಚಾಯಿತಿ ಅಧ್ಯಕ್ಷ ಸೇರಿದಂತೆ ಏಳು ಜನರನ್ನು ಅಪಹರಿಸಿದ ಮಾವೋವಾದಿಗಳು

ಮಾಜಿ ಪಂಚಾಯಿತಿ ಅಧ್ಯಕ್ಷನನ್ನು ಒಳಗೊಂಡಂತೆ ಮಾವೋವಾದಿಗಳು ಏಳು ಗ್ರಾಮಸ್ಥರನ್ನು ಮಲ್ಕಂಗಿರಿ ಜಿಲ್ಲೆಯ

ಭುವನೇಶ್ವರ್/ಮಲ್ಕಂಗಿರಿ: ಮಾಜಿ ಪಂಚಾಯಿತಿ ಅಧ್ಯಕ್ಷನನ್ನು ಒಳಗೊಂಡಂತೆ ಮಾವೋವಾದಿಗಳು ಏಳು ಗ್ರಾಮಸ್ಥರನ್ನು ಮಲ್ಕಂಗಿರಿ ಜಿಲ್ಲೆಯ ಕರ್ತನ್ಪಲ್ಲಿ ಗ್ರಾಮದಿಂದ ಸೋಮವಾರ ಅಪಹರಣ ಮಾಡಿರುವ ಘಟನೆ ನಡೆದಿದೆ. ಚತ್ತೀಸ್ ಘರ್ ನಲ್ಲಿ ತೀವ್ರಗೊಂಡಿರುವ ಮಾವೋವಾದಿಗಳ ದಾಳಿಯ ಹಿನ್ನಲೆಯಲ್ಲಿ ಒರಿಸ್ಸಾದ ನಕ್ಸಲ್ ಪೀಡಿತ ಗ್ರಾಮಗಳಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಿದ್ದರು ಈ ಘಟನೆ ನಡಿದಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.

೩ ಜನ ಮಹಿಳೆಯರೂ ಒಳಗೊಂಡ ಸಶಸ್ತ್ರಧಾರಿ ಬಂಡುಕೋರರು ಸೋಮವಾರ ಕರ್ತನ್ಪಲ್ಲಿ ಗ್ರಾಮವನ್ನು ಹೊಕ್ಕಿ ಗ್ರಾಮಸ್ಥರನ್ನು ಬೆದರಿಸಿ ಅಪಹರಿಸಿದ್ದಾರೆ.

ಈ ಬಂಡುಕೋರರು ಇನ್ನೂ ಯಾವುದೇ ಬೇಡಿಕೆಗಳನ್ನು ಇಟ್ಟಿಲ್ಲವಾದ್ದರಿಂದ ಈ ಅಪಹರಣದ ಕಾರಣ ಇನ್ನೂ ತಿಳಿದುಬಂದಿಲ್ಲ.

ಅಪಹರಣಗೊಂಡಿರುವವರು ಮಾಜಿ ಮತಿಲಿ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ತ್ರಿನಾಥ್ ಭೂಮಿಯಾ, ಮಂಗು ದುರುವಾ ಬರಹಾ, ಜಾಡುರಾಮ್ ಭೂಮಿಯಾ, ದಾಂಬು ಭೂಮಿಯಾ, ಸನ್ಯಾಸಿ ಭೂಮಿಯಾ, ಗಂಗಾ ಭೂಮಿಯಾ ಮತ್ತು ದಶರಥ್ ಭೂಮಿಯಾ.

ಅಪಹರಣಗೊಂಡ ಏಳು ಜನರಲ್ಲಿ ಕನಿಷ್ಟ ಮೂವರಿಗೆ ಮಾವೋವಾದಿಗಳ ಸಂಪರ್ಕ ಇತ್ತು ಎಂದು ಡಿಜಿಪಿ ಸಂಜೀವ್ ಮಾರಿಕ್ ತಿಳಿಸಿದ್ದಾರೆ. "ಅಪಹರಣಗೊಂಡ ಏಳು ಗ್ರಾಮಸ್ಥರಲ್ಲಿ ಕನಿಷ್ಠ ಮೂವರಿಗೆ ಮಾವೋವಾದಿಗಳ ಜೊತೆ ಸಂಪರ್ಕ ಇತ್ತು" ಎಂದು ಮಾರಿಕ್ ತಿಳಿಸಿದ್ದಾರೆ. ಶೋಧ ಕಾರ್ಯಾಚರಣೆ ಜಾರಿಯಲ್ಲಿದ್ದು, ಆರು ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ಪೊಲೀಸರು ಕಟೆಚ್ಚರ ಘೋಷಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಲಸೆ ವೀಸಾ ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಲಸೆ ನೀತಿ ಮತ್ತಷ್ಟು ಕಠಿಣ, ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌..!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!