ಶಾಲೆಯ ಎದುರು ನಡೆದ ಪ್ರತಿಭಟನೆ 
ಪ್ರಧಾನ ಸುದ್ದಿ

ಶಾಲೆಯ ಪಾಯಿಖಾನೆ ಸ್ವಚ್ಛ ಮಾಡಲು ದಲಿತ ಮಕ್ಕಳ ಮೇಲೆ ಬಲಪ್ರಯೋಗ; ಪ್ರತಿಭಟನೆ

ಕಾಲಕ್ಕಾಡಿನ ಶಾಲೆಯೊಂದರಲ್ಲಿ ದಲಿತ ಮಕ್ಕಳಿಗೆ ಪಾಯಿಖಾನೆಯನ್ನು ಸ್ವಚ್ಛಗೊಳಿಸಲು ಅಧ್ಯಾಪಕರು ಬಲಪ್ರಯೋಗ ನಡೆಸಿರುವುದರ ವಿರುದ್ಧ ಪೋಷಕರು,

ತಿರುನೆಲ್ವೇಲಿ: ಕಾಲಕ್ಕಾಡಿನ ಶಾಲೆಯೊಂದರಲ್ಲಿ ದಲಿತ ಮಕ್ಕಳಿಗೆ ಪಾಯಿಖಾನೆಯನ್ನು ಸ್ವಚ್ಛಗೊಳಿಸಲು ಅಧ್ಯಾಪಕರು ಬಲಪ್ರಯೋಗ ನಡೆಸಿರುವುದರ ವಿರುದ್ಧ ಪೋಷಕರು, ಹಕ್ಕುಗಳ ಸಾಮಾಜಿಕ ಕಾರ್ಯಕರ್ತರು ಹಾಗೂ ರಾಜಕೀಯ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಕಾಲಕ್ಕಾಡೀನ ಬಳಿಯ ಕೀಲಾಪಥೈ ಪಂಡಿಥಂಕುರುಚಿಯ ಸರ್ಕಾರಿ ಸಹಾಯಧನದ ಶಾಲೆಯಲ್ಲಿ ಸುಮಾರು ೫೦೦ ಜನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ೬ರಿಂದ ೮ನೆ ತರಗತಿಯ ಶಾಲೆಯ ಮಕ್ಕಳಿಗೆ ಶಾಲಾ ಅವಧಿಯಾ ನಂತರ ಪಾಯಿಖಾನೆಗಳನ್ನು ಸ್ವಚ್ಚಗೊಳಿಸುವಂತೆ ಅಧ್ಯಾಪಕರು ಬಲಪ್ರಯೋಗ ಮಾಡಿದ್ದಾರೆ. ಸ್ವಚ್ಛ ಮಾಡದೆ ಹೋದರೆ ಶಿಕ್ಷೆ ನೀಡುವುದಾಗಿ ಹೆದರಿಸಿದ್ದಾರೆ. ಕಳೆದ ಇಪ್ಪತ್ತು ದಿನಗಳಿಂದ ಇದು ನಡೆಯುತ್ತಿದ್ದರೂ ಮಕ್ಕಳು ಇತ್ತೇಚಿಗಷ್ಟೆ ತಮ್ಮ ಪೋಷಕರಿಗೆ ಈ ವಿಷಯ ತಿಳಿಸಿದ್ದಾರೆ.

"ಇದು ನಾಲ್ಕು ವಾರಗಳಿಂದ ನಡೆಯುತ್ತಿದ್ದರೂ ನನ್ನ ಮಗ ಇಂದೆ ಇದರ ಬಗ್ಗೆ ಹೇಳಿದ್ದು" ಎಂದು ೮ನೆ ತರಗತಿಯ ವಿದ್ಯಾರ್ಥಿಯ ತಂದೆ ಹೇಳಿದ್ದಾರೆ. ಒಂದು ಮಗು ಶಾಲೆಗೆ ಹೋಗಲು ನಿರಾಕರಿಸಿದ ಮೇಲೆ, ಅವರ ಪೋಷಕರಿಗೆ ಕಾರಣ ತಿಳಿದಿದೆ. ಆಗ ಇತರ ಪೋಷಕರಿಗೂ ಇದರ ಬಗ್ಗೆ ತಿಳಿದುಬಂದಿದೆ. ನಂತರ ಪೋಷಕರು, ಹಕ್ಕುಗಳ ಸಾಮಾಜಿಕ ಕಾರ್ಯಕರ್ತರು ಹಾಗೂ ರಾಜಕೀಯ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಜಿಲ್ಲಾ ಶೈಕ್ಷಣಿಕ ಅಧಿಕಾರಿ ಚೇರನ್ ಮಹಾದೇವಿ ಶಾಲೆಗೇ ತೆರಳಿ ಪೋಷಕರ ಜೊತೆ ಸಂಧಾನ ನಡೆಸಿದ್ದಾರೆ. ಶಾಲೆಯ ವಕ್ತಾರ ಪೋಷಕರ ಕ್ಷಮೆ ಕೋರಿದ್ದು ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT