ಲೋಕಸಭಾ ಸ್ಪೀಕರ್ ಸುಮಿತ್ರ ಮಹಾಜನ್ 
ಪ್ರಧಾನ ಸುದ್ದಿ

'ಗೋಡ್ಸೆ' ಇನ್ನುಮುಂದೆ ಅಸಂಸದೀಯ ಪದವಲ್ಲ

'ಗೋಡ್ಸೆ' ಪದ ಇನ್ನುಮುಂದೆ ಅಸಂಸದೀಯ ಪದವಾಗಿರುವುದಿಲ್ಲ ಎಂದು ಲೋಕಸಭಾ ಸ್ಪೀಕರ್ ಸುಮಿತ್ರ ಮಹಾಜನ್ ತೀರ್ಪು

ನವದೆಹಲಿ: 'ಗೋಡ್ಸೆ' ಪದ ಇನ್ನುಮುಂದೆ ಅಸಂಸದೀಯ ಪದವಾಗಿರುವುದಿಲ್ಲ ಎಂದು ಲೋಕಸಭಾ ಸ್ಪೀಕರ್ ಸುಮಿತ್ರ ಮಹಾಜನ್ ತೀರ್ಪು ನೀಡಿದ್ದಾರೆ. ನಾಥುರಾಮ್ ಗೋಡ್ಸೆ ಅರ್ಥದಲ್ಲಿ ಬಳಸಿದಾಗಷ್ಟೆ ಈ ಪದ ಅಸಂಸದೀಯವಾಗಲಿದೆ ಎಂದಿದ್ದಾರೆ.

'ಗೋಡ್ಸೆ' ಪದವನ್ನು ಅಸಂಸದೀಯ ಪದಗಳ ಪಟ್ಟಿಯಿಂದ ತೆಗೆದುಹಾಕಬೇಕು ಎಂದು ಧ್ವನಿ ಎತ್ತಿದ್ದ ನಾಸಿಕ್ ನ ಶಿವಸೇನಾ ಲೋಕಸಭಾ ಸದಸ್ಯ ಹೇಮಂತ್ ತುಕಾರಾಂ ಗೋಡ್ಸೆ ಅವರಿಗೆ ಗುರುವಾರದ ಈ ಆದೇಶ ನಿರಾಳ ತಂದಿದೆ.

ಈ ಹಿಂದೆ ಸಂಸತ್ತಿನ ಎರಡೂ ಮನೆಗಳಿಗೆ ಪತ್ರ ಬರೆದಿದ್ದ ಅವರು ಲೋಕಸಭಾ ಸದಸ್ಯನ ಕೊನೆಯ ಹೆಸರು ಅಸಂಸದೀಯ ಹೇಗಾಗುತ್ತದೆ ಎಂದು ಪ್ರಶ್ನಿಸಿದ್ದರು.

ನನ್ನ ಕೊನೆಯ ಹೆಸರು ಗೋಡ್ಸೆ ಎಂದಿರುವುದು ನನ್ನ ತಪ್ಪಲ್ಲ ಹಾಗು ನನ್ನ ಪೂರ್ವಜರ ಮನೆತನದ ಹೆಸರನ್ನು ನಾನು ಬದಲಾಯಿಸಿಕೊಳ್ಳುವುದಿಲ್ಲ ಎಂದಿದ್ದ ಅವರು ಗೋಡ್ಸೆ ಪದವನ್ನು ಅಸಂಸದೀಯ ಪದಗಳ ಪಟ್ಟಿಯಿಂದ ತೆಗೆದುಹಾಕಲು ಮನವಿ ಮಾಡಿದ್ದರು.

ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ೧೯೪೮ ರಲ್ಲಿ ನಾಥುರಾಮ್ ಗೋಡ್ಸೆ ಗುಂಡು ಹೊಡೆದು ಕೊಂಡಿದ್ದ. ೧೯೫೬ರಿಂದ ಗೋಡ್ಸೆ ಪದದ ಬಳಕೆಯನ್ನು ಅಸಂಸದೀಯ ಎಂದು ಪರಿಗಣಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT