ಲೋಕಸಭಾ ಸ್ಪೀಕರ್ ಸುಮಿತ್ರ ಮಹಾಜನ್ 
ಪ್ರಧಾನ ಸುದ್ದಿ

'ಗೋಡ್ಸೆ' ಇನ್ನುಮುಂದೆ ಅಸಂಸದೀಯ ಪದವಲ್ಲ

'ಗೋಡ್ಸೆ' ಪದ ಇನ್ನುಮುಂದೆ ಅಸಂಸದೀಯ ಪದವಾಗಿರುವುದಿಲ್ಲ ಎಂದು ಲೋಕಸಭಾ ಸ್ಪೀಕರ್ ಸುಮಿತ್ರ ಮಹಾಜನ್ ತೀರ್ಪು

ನವದೆಹಲಿ: 'ಗೋಡ್ಸೆ' ಪದ ಇನ್ನುಮುಂದೆ ಅಸಂಸದೀಯ ಪದವಾಗಿರುವುದಿಲ್ಲ ಎಂದು ಲೋಕಸಭಾ ಸ್ಪೀಕರ್ ಸುಮಿತ್ರ ಮಹಾಜನ್ ತೀರ್ಪು ನೀಡಿದ್ದಾರೆ. ನಾಥುರಾಮ್ ಗೋಡ್ಸೆ ಅರ್ಥದಲ್ಲಿ ಬಳಸಿದಾಗಷ್ಟೆ ಈ ಪದ ಅಸಂಸದೀಯವಾಗಲಿದೆ ಎಂದಿದ್ದಾರೆ.

'ಗೋಡ್ಸೆ' ಪದವನ್ನು ಅಸಂಸದೀಯ ಪದಗಳ ಪಟ್ಟಿಯಿಂದ ತೆಗೆದುಹಾಕಬೇಕು ಎಂದು ಧ್ವನಿ ಎತ್ತಿದ್ದ ನಾಸಿಕ್ ನ ಶಿವಸೇನಾ ಲೋಕಸಭಾ ಸದಸ್ಯ ಹೇಮಂತ್ ತುಕಾರಾಂ ಗೋಡ್ಸೆ ಅವರಿಗೆ ಗುರುವಾರದ ಈ ಆದೇಶ ನಿರಾಳ ತಂದಿದೆ.

ಈ ಹಿಂದೆ ಸಂಸತ್ತಿನ ಎರಡೂ ಮನೆಗಳಿಗೆ ಪತ್ರ ಬರೆದಿದ್ದ ಅವರು ಲೋಕಸಭಾ ಸದಸ್ಯನ ಕೊನೆಯ ಹೆಸರು ಅಸಂಸದೀಯ ಹೇಗಾಗುತ್ತದೆ ಎಂದು ಪ್ರಶ್ನಿಸಿದ್ದರು.

ನನ್ನ ಕೊನೆಯ ಹೆಸರು ಗೋಡ್ಸೆ ಎಂದಿರುವುದು ನನ್ನ ತಪ್ಪಲ್ಲ ಹಾಗು ನನ್ನ ಪೂರ್ವಜರ ಮನೆತನದ ಹೆಸರನ್ನು ನಾನು ಬದಲಾಯಿಸಿಕೊಳ್ಳುವುದಿಲ್ಲ ಎಂದಿದ್ದ ಅವರು ಗೋಡ್ಸೆ ಪದವನ್ನು ಅಸಂಸದೀಯ ಪದಗಳ ಪಟ್ಟಿಯಿಂದ ತೆಗೆದುಹಾಕಲು ಮನವಿ ಮಾಡಿದ್ದರು.

ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ೧೯೪೮ ರಲ್ಲಿ ನಾಥುರಾಮ್ ಗೋಡ್ಸೆ ಗುಂಡು ಹೊಡೆದು ಕೊಂಡಿದ್ದ. ೧೯೫೬ರಿಂದ ಗೋಡ್ಸೆ ಪದದ ಬಳಕೆಯನ್ನು ಅಸಂಸದೀಯ ಎಂದು ಪರಿಗಣಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!