ಆಂಧ್ರ ಪೊಲೀಸರ ಎನ್ಕೌಂಟರ್ ವಿರುದ್ಧ ಪ್ರತಿಭಟನೆ 
ಪ್ರಧಾನ ಸುದ್ದಿ

ರಕ್ತಚಂದನ ಕಳ್ಳಸಾಗಾಣಿಕೆಯ ಸೂತ್ರದಾರರು ಟಿಡಿಪಿ ಪಕ್ಷದ ಆಪ್ತರು: ಪಿಎಂಕೆ ಆರೋಪ

ರಕ್ತಚಂದನ ಮರ ಕಳ್ಳಸಾಗಾಣಿಕೆಯ ಪ್ರಮುಖ ವ್ಯಕ್ತಿಗಳನ್ನು ರಕ್ಷಿಸಲು ತೆಲುಗು ದೇಶಂ ಪಕ್ಷ(ಟಿಡಿಪಿ), ಮರ ಕಡಿಯುವವರನ್ನು ಎನ್ಕೌಂಟರಿನಲ್ಲಿ

ಚೆನ್ನೈ: ರಕ್ತಚಂದನ ಮರ ಕಳ್ಳಸಾಗಾಣಿಕೆಯ ಪ್ರಮುಖ ವ್ಯಕ್ತಿಗಳನ್ನು ರಕ್ಷಿಸಲು ತೆಲುಗು ದೇಶಂ ಪಕ್ಷ(ಟಿಡಿಪಿ), ಮರ ಕಡಿಯುವವರನ್ನು ಎನ್ಕೌಂಟರಿನಲ್ಲಿ ಕೊಲ್ಲಲು ಆಂಧ್ರ ಪೊಲೀಸರಿಗೆ ಉತ್ತೇಜನ ನೀಡಿದೆ ಎಂದು ಪಟ್ಟಾಲಿ ಮಕ್ಕಳ ಕಾಟ್ಚಿ(ಪಿಎಂಕೆ) ಪಕ್ಷದ ಕಾನೂನು ಕಾರ್ಯದರ್ಶಿ ಭಾನುವಾರ ಆರೋಪಿಸಿದ್ದಾರೆ.

ರಕ್ತಚಂದನ ಕಳ್ಳಸಾಗಾಣಿಕೆಯಲ್ಲಿ ಸಂಬಂಧ ಇರುವ 'ಬುಲೆಟ್ ಸುರೇಶ ಇತ್ತೀಚೆಗೆ ಟಿಡಿಪಿ ಪಕ್ಷ ಸೇರಿದ್ದಾನೆ ಎಂದು ಪಿಎಂಕೆ ಲೋಕಸಭಾ ಸದಸ್ಯ ಬಾಲು ಆರೋಪಿಸಿದ್ದಾರೆ.

ಆಂಧ್ರ ಪೊಲೀಸರು ಇತ್ತೀಚಿಗೆ ನಡೆದ ಶೇಷಾಚಲಂ ಎನ್ಕೌಂಟರಿನಲ್ಲಿ ೨೦ ಜನ ಮರ ಕಡಿಯುವವರನ್ನು ಕೊಂದು ಹಾಕಿದ್ದರು. ಇದು ಹಲವಾರು ಪ್ರತಿಭಟನೆಗಳಿಗೆ ಎಡೆ ಮಾಡಿಕೊಟ್ಟದ್ದಲ್ಲದೆ ಇದು ನಕಲಿ ಎಂಕೌಂಟರ್ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಆರೋಪಿಸಿತ್ತು ಹಾಗೂ ಹೈದರಾಬಾದ್ ಹೈಕೋರ್ಟ್ ಪೊಲೀಸರ ವಿರುದ್ಧ ಕೇಸು ದಾಖಲಿಸುವಂತೆ ಸೂಚನೆ ನೀಡಿತ್ತು.

ಈ ಪ್ರಕರಣದಲ್ಲಿ ಹಲವಾರು ರಾಜಕಾರಣಿಗಳು ಮತ್ತು ಪೊಲೀಸರು ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವ ಬಾಲು, ಸಿಬಿಐ ತನಿಖೆಗೆ ಆಗ್ರಹಿಸಿ ಹೈದರಾಬಾದ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ