ನೇಪಾಳದಿಂದ ಭಾರತೀಯರನ್ನು ರಕ್ಷಿಸುತ್ತಿರುವ ಐ ಎ ಎಫ್ ಅಧಿಕಾರಿಗಳು 
ಪ್ರಧಾನ ಸುದ್ದಿ

ಭೂಕಂಪನ ತತ್ತರ ನೇಪಾಳದಿಂದ ೪೩ ಸಾವಿರ ಭಾರತೀಯರ ರಕ್ಷಣೆ

ಭೂಕಂಪನದಿಂದ ತತ್ತರಿಸಿರುವ ನೇಪಾಳದಲ್ಲಿ ಸಿಲುಕಿದ್ದ ಸುಮಾರು ೪೩ ಸಾವಿರ ಭಾರತೀಯರನ್ನು ರಸ್ತೆ ಮಾರ್ಗವಾಗಿ ರಕ್ಷಿಸಿ ಕರೆತರಲಾಗಿದೆ

ನವದೆಹಲಿ: ಭೂಕಂಪನದಿಂದ ತತ್ತರಿಸಿರುವ ನೇಪಾಳದಲ್ಲಿ ಸಿಲುಕಿದ್ದ ಸುಮಾರು ೪೩ ಸಾವಿರ ಭಾರತೀಯರನ್ನು ರಸ್ತೆ ಮಾರ್ಗವಾಗಿ ರಕ್ಷಿಸಿ ಕರೆತರಲಾಗಿದೆ ಎಂದು ಸಶಸ್ತ್ರ ಸೀಮಾ ಬಲ್ ನ ಎ ಡಿ ಜಿ ಸೋಮೇಶ್ ಗೋಯಲ್ ತಿಳಿಸಿದ್ದಾರೆ.

ಭಾರತೀಯರು, ವಿದೇಶಿಯರು ಹಾಗೂ ಗಾಯಗೊಂಡವರನ್ನು ಹೊತ್ತ ಒಟ್ಟು ೬೮೫ ವಾಹನಗಳು ಬಂದು ತಲುಪಿದ್ದು, ಸೇನಾ ಪಡೆ ಸ್ಥಾಪಿಸಿರುವ ಶಿಬಿರದಲ್ಲಿ ಗಾಯಗೊಂಡವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಈ ದೊಡ್ಡ ಕಾರ್ಯಾಚರಣೆಯಲ್ಲಿ ೩೪೧ ಜನ ವಿದೇಶಿಯರಿಗೆ ತಾತ್ಕಾಲಿಕ ವೀಸಾ ನೀಡಿ ರಕ್ಷಿಸಲಾಗಿದೆ. "ಪರಿಹಾರ ಸಾಮಗ್ರಿಗಳನ್ನು ಹೊತ್ತ ೬೭ ಟ್ರಕ್ಕುಗಳನ್ನು ಭೂಕಂಪನ ಪೀಡಿತ ನೇಪಾಳ ಪ್ರದೇಶಗಳಿಗೆ ಬುಧವಾರ ಕಳುಹಿಸಲಾಗಿದೆ. ಇಲ್ಲಿಯವರಗೂ ೪೩೫೭೫ ಜನರನ್ನು ರಕ್ಷಿಸಲಾಗಿದೆ. ಸುಮಾರು ೨೦೦೦ ಜನಕ್ಕೆ ವೈದ್ಯಕೀಯ ಚಿಕಿತ್ಸೆ ಅಗತ್ಯವಿತ್ತು ಮತ್ತು ಗಾಯಗೊಂಡ ೨೭ ಜನರನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ" ಎಂದು ಗೋಯಲ್ ತಿಳಿಸಿದ್ದಾರೆ.

೧೬ ಎನ್ ಡಿ ಆರ್ ಎಫ್ ತಂಡಗಳು, ೧೮ ಸ್ನಿಫ್ಫರ್ ನಾಯಿಗಳೊಂದಿಗೆ ಬುಧವಾರ ೩೦ ದೇಹಗಳನ್ನು ಪತ್ತೆ ಹಚ್ಚಿದೆ. ಇಲ್ಲಿಯವರೆಗೂ ೧೧೫ ಮೃತದೇಹಗಳನ್ನು ದೇಹಗಳನ್ನು ಪತ್ತೆಹಚ್ಚಿದೆ.

ಈ ಮಧ್ಯೆ ಭಾರತೀಯ ರಕ್ಷಣಾ ದಳಗಳಿಂದ ೧೦೫೨ ಜನ ನೇಪಾಳಿಗಳನ್ನು ರಕ್ಷಿಸಿ ಸೇನಾ ಆಸ್ಪತ್ರೆಗಳಿಗೆ ಸೇರಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿಗೆ ತಿಳಿಸಲಾಗಿದೆ. ೧೯ ವಿದೇಶಿ ಪರ್ವತಾರೋಹಿಗಳನ್ನು ಒಳಗೊಂಡಂತೆ ೧೫೨ ಪ್ರವಾಸಿಗರನ್ನು ರಕ್ಷಿಸಲಾಗಿದೆ.

ವಿಮಾನದ ಮೂಲಕ ಒಟ್ಟು ೯೫೦೯ ಜನರನ್ನು ರಕ್ಷಿಸಲಾಗಿದ್ದು, ೭೮೫ ವಿದೇಶಿಯರಿಗೆ ಟ್ರಾನ್ಸಿಟ್ ವೀಸಾ ನೀಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

SCROLL FOR NEXT