ನೇಪಾಳದಿಂದ ಭಾರತೀಯರನ್ನು ರಕ್ಷಿಸುತ್ತಿರುವ ಐ ಎ ಎಫ್ ಅಧಿಕಾರಿಗಳು 
ಪ್ರಧಾನ ಸುದ್ದಿ

ಭೂಕಂಪನ ತತ್ತರ ನೇಪಾಳದಿಂದ ೪೩ ಸಾವಿರ ಭಾರತೀಯರ ರಕ್ಷಣೆ

ಭೂಕಂಪನದಿಂದ ತತ್ತರಿಸಿರುವ ನೇಪಾಳದಲ್ಲಿ ಸಿಲುಕಿದ್ದ ಸುಮಾರು ೪೩ ಸಾವಿರ ಭಾರತೀಯರನ್ನು ರಸ್ತೆ ಮಾರ್ಗವಾಗಿ ರಕ್ಷಿಸಿ ಕರೆತರಲಾಗಿದೆ

ನವದೆಹಲಿ: ಭೂಕಂಪನದಿಂದ ತತ್ತರಿಸಿರುವ ನೇಪಾಳದಲ್ಲಿ ಸಿಲುಕಿದ್ದ ಸುಮಾರು ೪೩ ಸಾವಿರ ಭಾರತೀಯರನ್ನು ರಸ್ತೆ ಮಾರ್ಗವಾಗಿ ರಕ್ಷಿಸಿ ಕರೆತರಲಾಗಿದೆ ಎಂದು ಸಶಸ್ತ್ರ ಸೀಮಾ ಬಲ್ ನ ಎ ಡಿ ಜಿ ಸೋಮೇಶ್ ಗೋಯಲ್ ತಿಳಿಸಿದ್ದಾರೆ.

ಭಾರತೀಯರು, ವಿದೇಶಿಯರು ಹಾಗೂ ಗಾಯಗೊಂಡವರನ್ನು ಹೊತ್ತ ಒಟ್ಟು ೬೮೫ ವಾಹನಗಳು ಬಂದು ತಲುಪಿದ್ದು, ಸೇನಾ ಪಡೆ ಸ್ಥಾಪಿಸಿರುವ ಶಿಬಿರದಲ್ಲಿ ಗಾಯಗೊಂಡವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಈ ದೊಡ್ಡ ಕಾರ್ಯಾಚರಣೆಯಲ್ಲಿ ೩೪೧ ಜನ ವಿದೇಶಿಯರಿಗೆ ತಾತ್ಕಾಲಿಕ ವೀಸಾ ನೀಡಿ ರಕ್ಷಿಸಲಾಗಿದೆ. "ಪರಿಹಾರ ಸಾಮಗ್ರಿಗಳನ್ನು ಹೊತ್ತ ೬೭ ಟ್ರಕ್ಕುಗಳನ್ನು ಭೂಕಂಪನ ಪೀಡಿತ ನೇಪಾಳ ಪ್ರದೇಶಗಳಿಗೆ ಬುಧವಾರ ಕಳುಹಿಸಲಾಗಿದೆ. ಇಲ್ಲಿಯವರಗೂ ೪೩೫೭೫ ಜನರನ್ನು ರಕ್ಷಿಸಲಾಗಿದೆ. ಸುಮಾರು ೨೦೦೦ ಜನಕ್ಕೆ ವೈದ್ಯಕೀಯ ಚಿಕಿತ್ಸೆ ಅಗತ್ಯವಿತ್ತು ಮತ್ತು ಗಾಯಗೊಂಡ ೨೭ ಜನರನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ" ಎಂದು ಗೋಯಲ್ ತಿಳಿಸಿದ್ದಾರೆ.

೧೬ ಎನ್ ಡಿ ಆರ್ ಎಫ್ ತಂಡಗಳು, ೧೮ ಸ್ನಿಫ್ಫರ್ ನಾಯಿಗಳೊಂದಿಗೆ ಬುಧವಾರ ೩೦ ದೇಹಗಳನ್ನು ಪತ್ತೆ ಹಚ್ಚಿದೆ. ಇಲ್ಲಿಯವರೆಗೂ ೧೧೫ ಮೃತದೇಹಗಳನ್ನು ದೇಹಗಳನ್ನು ಪತ್ತೆಹಚ್ಚಿದೆ.

ಈ ಮಧ್ಯೆ ಭಾರತೀಯ ರಕ್ಷಣಾ ದಳಗಳಿಂದ ೧೦೫೨ ಜನ ನೇಪಾಳಿಗಳನ್ನು ರಕ್ಷಿಸಿ ಸೇನಾ ಆಸ್ಪತ್ರೆಗಳಿಗೆ ಸೇರಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿಗೆ ತಿಳಿಸಲಾಗಿದೆ. ೧೯ ವಿದೇಶಿ ಪರ್ವತಾರೋಹಿಗಳನ್ನು ಒಳಗೊಂಡಂತೆ ೧೫೨ ಪ್ರವಾಸಿಗರನ್ನು ರಕ್ಷಿಸಲಾಗಿದೆ.

ವಿಮಾನದ ಮೂಲಕ ಒಟ್ಟು ೯೫೦೯ ಜನರನ್ನು ರಕ್ಷಿಸಲಾಗಿದ್ದು, ೭೮೫ ವಿದೇಶಿಯರಿಗೆ ಟ್ರಾನ್ಸಿಟ್ ವೀಸಾ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?