ಬಿಜೆಪಿ ಮುಖಂಡ ನಟ ಶತ್ರುಘನ್ ಸಿನ್ಹ 
ಪ್ರಧಾನ ಸುದ್ದಿ

ಕಾಂಗ್ರೆಸ್ ಸಂಸದರ ಅಮಾನತು: ಅಸಮಧಾನ ವ್ಯಕ್ತಪಡಿಸಿದ ಶತ್ರುಘನ್ ಸಿನ್ಹ

೨೫ ಜನ ಕಾಂಗ್ರೆಸ್ ಸಂಸದರನ್ನು ಲೋಕಸಭಾ ಸ್ಪೀಕರ್ ಸುಮಿತ್ರ ಮಹಾಜನ್ ಅಮಾನತು ಮಾಡಿರುವುದರ ಬಗ್ಗೆ ಅಸಮಧಾನ ಇದೆ ಎಂದು ಬಿಜೆಪಿ ಮುಖಂಡನಾಗಿರುವ

ನವದೆಹಲಿ: ೨೫ ಜನ ಕಾಂಗ್ರೆಸ್ ಸಂಸದರನ್ನು ಲೋಕಸಭಾ ಸ್ಪೀಕರ್ ಸುಮಿತ್ರ ಮಹಾಜನ್ ಅಮಾನತು ಮಾಡಿರುವುದರ ಬಗ್ಗೆ ಅಸಮಧಾನ ಇದೆ ಎಂದು ಬಿಜೆಪಿ ಮುಖಂಡನಾಗಿರುವ ನಟ ಶತ್ರುಘನ್ ಸಿನ್ಹ ಹೇಳಿದ್ದಾರೆ.

"ಲೋಕಸಭೆಯ ಕಲಾಪದಲ್ಲಿ ಇರದ ಒಬ್ಬರನ್ನು ಸೇರಿದಂತೆ ಕಾಂಗ್ರೆಸ್ಸಿನ ೨೫ ಸಂಸದರನ್ನು ಅಮಾನತು ಮಾಡಿರುವ ಬೆಳವಣಿಗೆಯಿಂದ ಅಸಮಾಧಾನವಾಗಿದೆ" ಎಂದು ಸಿನ್ಹ ಟ್ವೀಟ್ ಮಾಡಿದ್ದಾರೆ.

"ಈಗ ಅಥವಾ ಮುಂದೆ ಒಳ್ಳೆಯ ಚಿಂತನೆ ಉಳಿಯಬೇಕು" ಎಂದು ಕೂಡ ಅವರು ಹೇಳಿದ್ದಾರೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ರಾಜೀನಾಮೆ ಕೋರಿ ಕಾಂಗ್ರೆಸ್ ಪಕ್ಷ ಸಂಸತ್ ಕಲಾಪಗಳಿಗೆ ಅಡ್ಡಿಪಡಿಸಿತ್ತು. ಇದನ್ನು ಸರ್ಕಾರ ತಿರಸ್ಕರಿಸಿತ್ತು.

"ಬೇಕಂತಲೇ ಸದನದ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ" ಎಂದು ದೂರಿ ಸೋಮವಾರ ಐದು ದಿನಗಳವರೆಗೆ ೨೫ ಕಾಂಗ್ರೆಸ್ ಸಂಸದರನ್ನು ಸ್ಪೀಕರ್ ಅಮಾನತುಗೊಳಿಸಿದ್ದರು. ಕಾಂಗ್ರೆಸ್ ಈ ಅಮಾನತಿನ ವಿರುದ್ಧ ಇತರ ಪಕ್ಷಗಳೊಂದಿಗೆ ಸಂಸತ್ ಆವರಣದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

SCROLL FOR NEXT