ಕಾಶ್ಮೀರಿ ಪ್ರತ್ಯೇಕವಾದಿ ಮುಖಂಡರು 
ಪ್ರಧಾನ ಸುದ್ದಿ

ಎರಡು ಗಂಟೆಗಳ ಗೃಹಬಂಧನದ ನಂತರ ಕಾಶ್ಮೀರಿ ಪ್ರತ್ಯೇಕವಾದಿಗಳ ಬಿಡುಗಡೆ

ಗೊಂದಲಮಯ ಘಟನೆಗಳಲ್ಲಿ, ರಾಷ್ಟ್ರೀಯ ಭದ್ರತಾ ಸಂಸ್ಥೆಗಳ(ಎನ್ ಎಸ್ ಎ) ಮಾತುಕತೆಗೂ ಮುಂಚಿತವಾಗಿ ಗೃಹಬಂಧನದಲ್ಲಿ ಇರಿಸಲಾಗಿದ್ದ ಇಬ್ಬರು ಕಾಶ್ಮೀರಿ ಪ್ರತ್ಯೇಕವಾದಿ ನಾಯಕರನ್ನು...

ಶ್ರೀನಗರ: ಗೊಂದಲಮಯ ಘಟನೆಗಳಲ್ಲಿ, ರಾಷ್ಟ್ರೀಯ ಭದ್ರತಾ ಸಂಸ್ಥೆಗಳ(ಎನ್ ಎಸ್ ಎ) ಮಾತುಕತೆಗೂ ಮುಂಚಿತವಾಗಿ ಗೃಹಬಂಧನದಲ್ಲಿ ಇರಿಸಲಾಗಿದ್ದ ಇಬ್ಬರು ಕಾಶ್ಮೀರಿ ಪ್ರತ್ಯೇಕವಾದಿ ನಾಯಕರನ್ನು ಎರಡು ಗಂಟೆಗಳ ನಂತರ ಜಮ್ಮು ಕಾಶ್ಮೀರ ಸರ್ಕಾರ ಬಿಡುಗಡೆ ಮಾಡಿದೆ.

ಆದರೆ ಮೊದಲಿನಂತೆಯೇ ಹುರಿಯತ್ ನಾಯಕ ಸಯ್ಯದ್ ಅಲಿ ಷಾ ಗಿಲಾನಿ ಅವರ ಗೃಹ ಬಂಧನ ಮುಂದುವರೆದಿದೆ. ವರದಿಗಳ ಪ್ರಕಾರ ಅವರ ಮನೆಯ ಹೊರಗಡೆ ಭದ್ರತೆಯನ್ನು ಹೆಚ್ಚಿಸಿದ್ದು ಅವರು ಸಾರ್ವಜನಿಕ ಹೇಳಿಕೆ ನೀಡದಂತೆ ನಿಷೇಧ ಹೇರಲಾಗಿದೆ.

ಪ್ರತ್ಯೇಕವಾದಿಗಳಾದ ಯಾಸಿನ್ ಮಲಿಕ್, ಸಯ್ಯದ್ ಅಲಿ ಷಾ ಗಿಲಾನಿ ಮತ್ತು ಮಿರ್ವೈಜ್ ಉಮರ್ ಫರೂಕ್ ಇವರುಗಳನ್ನು ಪಾಕಿಸ್ತಾನ ರಕ್ಷಣಾ ಸಲೆಹೆಗಾರ ಸತ್ರಜ್ ಅಜೀಜ್ ಅವರನ್ನು ಭಾನುವಾರ ಭೇಟಿ ಮಾಡಲು ಪಾಕಿಸ್ತಾನ ರಾಯಭಾರ ಕಚೇರಿ ಆಹ್ವಾನಿಸಿತ್ತು.

ಭಾರತದ ರಕ್ಷಣಾ ಸಲೆಹೆಗಾರ ಅಜಿತ್ ದೋವಲ್ ಜತೆ ಭಯೋತ್ಪಾದನೆಯ ಬಗ್ಗೆ ಚರ್ಚೆ ಮಾಡಲು ಸತ್ರಜ್ ಅಜೀಜ್ ಭಾರತಕ್ಕೆ ಬರುತ್ತಿದ್ದು, ಈಗ ಈ ಇಬ್ಬರು ಹುರಿಯತ್ ನಾಯಕರು ಭಾನುವಾರ ಅಜೀಜ್ ಅವರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.

ಈ ಮಾತುಕತೆಗಳನ್ನು ರದ್ದುಪಡಿಸಲು ಪಾಕಿಸ್ತಾನ ಮಾಡುತ್ತಿರುವ ತಂತ್ರ ಇದು ಎಂದು ಬಣ್ಣಿಸಲಾಗುತ್ತಿದ್ದು, ಆದರೆ ಎನ್ ಎಸ್ ಎ ಮಾತುಕತೆಗಳು ಜರುಗುವಂತೆ ಭಾರತ ದೃಢನಿಲುವು ಹೊಂದಿದೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಕಳೆದ ವರ್ಷದ ಆಗಸ್ಟ್ ನಲ್ಲಿ ಈ ಮಾತುಕತೆಗಳು ಮುರಿದುಬಿದ್ದಿದ್ದವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT