ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

'ದೆವ್ವ ಬಡಿದಿದೆ' ಎಂದು ದೂರಿ ಮಹಿಳೆಯನ್ನು ಕೊಂದ ಗ್ರಾಮಸ್ಥರು

ಮಹಾರಾಷ್ಟ್ರದ ಪಾಲ್ಘಾರ್ ನಲ್ಲಿ ತನ್ನ ದೇಹದಲ್ಲಿ 'ಪ್ರೇತಾತ್ಮ' ಹೊಂದಿದ್ದಾಳೆ ಎಂದು ದೂರಿ ೪೦ ವರ್ಷದ ಮಹಿಳೆಯನ್ನು ಮೂರು ಜನ ಗ್ರಾಮಸ್ಥರು ಕೊಂದ ದುರ್ಘಟನೆ

ಪಾಲ್ಘಾರ್: ಮಹಾರಾಷ್ಟ್ರದ ಪಾಲ್ಘಾರ್ ನಲ್ಲಿ ತನ್ನ ದೇಹದಲ್ಲಿ 'ಪ್ರೇತಾತ್ಮ' ಹೊಂದಿದ್ದಾಳೆ ಎಂದು ದೂರಿ ೪೦ ವರ್ಷದ ಮಹಿಳೆಯನ್ನು ಮೂರು ಜನ ಗ್ರಾಮಸ್ಥರು ಕೊಂದ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮ್ಯಾನರ್ ನಗರದ ನೈನ್ ಗ್ರಾಮದ ನಿವಾಸಿ ಸವಿತಾ ನರೇಶ್ ಗೋಲಿಮ್ ಮತ್ತು ಆರೋಪಿಗಳಿಗೆ ಗ್ರಾಮದ ಪಿತ್ರಾರ್ಜಿತ ಆಸ್ತಿಯ ಬಗ್ಗೆ ವಿವಾದವಿತ್ತು ಎಂದು ಕೂಡ ತಿಳಿಯಲಾಗಿದೆ.

ಆರೋಪಿ ವ್ಯಕ್ತಿಗಳ ಹೆಸರುಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಆದರೆ ಆರೋಪಿಗಳು ಮಹಿಳೆಯ ದೇಹದಲ್ಲಿ ದೆವ್ವ ಹೊಕ್ಕಿದ್ದಾಗಿ ನಂಬಿದ್ದರು ಎಂದು ಮ್ಯಾನರ್ ಪೊಲೀಸ್ ಠಾಣೆಯ ಸಬ ಇನ್ಸ್ಪೆಕ್ಟರ್ ಆರ್ ಎ ಬೋರ್ ತಿಳಿಸಿದ್ದಾರೆ.

ನೆನ್ನೆ ಮಧ್ಯಾಹ್ನ ಮಹಿಳೆಯ ಮನೆ ಹೊಕ್ಕ ಮೂವರು ಪುರುಷರು ಮರದ ದಿಮ್ಮಿಯಿಂದ ಮಹಿಳೆಯ ಮೇಲೆ ದಾಳಿ ಮಾಡಿ ಅವಳನ್ನು ಸ್ಥಳದಲ್ಲೇ ಕೊಂದಿದ್ದಾರೆ ಎಂದು ಬೋರ್ ತಿಳಿಸಿದ್ದಾರೆ.

ನಂತರ ಈ ಮೂವರು, ಮಹಿಳೆಯ ದೇಹವನ್ನು ಮನೆಯ ಹತ್ತಿರದ ಸಗಣಿ ತಿಪ್ಪೆಗೆ ಎಸೆದಿದ್ದಾರೆ.

ಐಪಿಸಿ ೩೦೨ (ಕೊಲೆ), ೪೫೨ (ಅನಧಿಕೃತ ಪ್ರವೇಶ) ಕಾಯ್ದೆಗಳಡಿ ಈ ಮೂವರ ಮೇಲೆ ಪೊಲೀಸರು ಕೇಸು ದಾಖಲಿಸಿದ್ದು, ಈ ಮೂವರು ಆರೋಪಿಗಳಿಗೆ ಹುಡುಕಾಟ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT