ಬ್ಯಾಂಕಾಕ್ ಸ್ಫೋಟದ ಶಂಕಿತನ ರೇಖಾ ಚಿತ್ರ 
ಪ್ರಧಾನ ಸುದ್ದಿ

ಬ್ಯಾಂಕಾಕ್ ಸ್ಫೋಟ; ಶಂಕಿತನ ಬಂಧನ

೨೦ ಜನರನ್ನು ಬಲಿ ತೆಗೆದುಕೊಂಡ ಬ್ಯಾಂಕಾಕ್ ನಲ್ಲಿ ಹಿಂದು ದೇವಾಲಯದ ಬಳಿ ನಡೆದ ಬಾಂಬ್ ಸ್ಫೋಟಕ್ಕೆ ಕಾರಣ ಎಂದು ಶಂಕಿಸಲಾದ ಟರ್ಕಿ ಮೂಲದ ವ್ಯಕ್ತಿಯನ್ನು

ಬ್ಯಾಂಕಾಕ್: ೨೦ ಜನರನ್ನು ಬಲಿ ತೆಗೆದುಕೊಂಡ ಬ್ಯಾಂಕಾಕ್ ನಲ್ಲಿ ಹಿಂದು ದೇವಾಲಯದ ಬಳಿ ನಡೆದ ಬಾಂಬ್ ಸ್ಫೋಟಕ್ಕೆ ಕಾರಣ ಎಂದು ಶಂಕಿಸಲಾದ ಟರ್ಕಿ ಮೂಲದ ವ್ಯಕ್ತಿಯನ್ನು ಉತ್ತರ ಬ್ಯಾಂಕಾಕಿನಲ್ಲಿ ಬಂಧಿಸಲಾಗಿದೆ.

ಬ್ಯಾಂಕಾಕ್ ನ ನಾಂಗ್ಚಾಕ್ ಜಿಲ್ಲೆಯ ಪೂನ್-ಆನಂದ್ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿ ಶಂಕಿತನನ್ನು ಬಂಧಿಸಲಾಗಿದೆ. ಬೃಹತ್ ಮೊತ್ತದ ಸ್ಫೋಟಕ ಸಾಮಗ್ರಿಗಳನ್ನು ಅವನಿದ್ದ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ನೇಶನ್ ಆನ್ಲೈನ್ ವರದಿ ಮಾಡಿದೆ.

ವಸತಿ ಸಮುಚ್ಚಯವನ್ನು ೧೦೦ ಕ್ಕೂ ಹೆಚ್ಚು ಪೊಲೀಸರು ಸುತ್ತುವರೆದ ನಂತರ ಅವನನ್ನು ಬಂಧಿಸಲಾಗಿದೆ. ವಸತಿ ಸಂಮುಚ್ಚಯದ ನಾಲ್ಕನೇ ಅಂತಸ್ತಿನಲ್ಲಿ ರೂಮ್ ನಂ ೪೧೨ ಮತ್ತು ೪೧೪ ರಲ್ಲಿ ಈ ಶಂಕಿತ ಬಾಡಿಗೆಗಿದ್ದ ಎಂದು ತಿಳಿದುಬಂದಿದೆ.

ಆಗಸ್ಟ್ ೧೭ ರಂದು ಏರ್ವಾನ್ ದೇವಾಲಯದ ಬಳಿ ನಡೆದ ಈ ಸ್ಫೋಟದಲ್ಲಿ ೨೦ ಜನ ಮೃತಪಟ್ಟು ೧೦೦ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ದೇವಾಲಯದ ಬೆಂಚಿನಡಿ ಒಂದು ಬ್ಯಾಗ್ ಬಿಟ್ಟು ಶಂಕಿತ ತೆರಳುತ್ತಿದ್ದುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT