ಪ್ರಧಾನ ಸುದ್ದಿ

ಶೀನಾ ಕೊಲೆ ಪ್ರಕರಣ: ಇಂದ್ರಾಣಿ, ಇತರೆ ಇಬ್ಬರ ವಿಚಾರಣೆಗೆ ಅನುಮತಿ ಕೇಳಿದೆ ಸಿಬಿಐ

Lingaraj Badiger

ಮುಂಬೈ: ದಿನಕ್ಕೊಂದು ತಿರುವು ಪಡೆಯುತ್ತಿರುವ ಶೀನಾ ಬೋರಾ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾದ ಇಂದ್ರಾಣಿ ಮುಖರ್ಜಿ ಹಾಗೂ ಇತರೆ ಇಬ್ಬರು ಆರೋಪಿಗಳ ವಿಚಾರಣೆಗೆ ಅನುಮತಿ ನೀಡುವಂತೆ ಸಿಬಿಐ ಕೋರ್ಟ್‌ಗೆ ಮನವಿ ಮಾಡಿದೆ.

'ಆರೋಪಿಗಳಾದ ಇಂದ್ರಾಣಿ ಮುಖರ್ಜಿ, ಆಕೆಯ ಮಾಜಿ ಪತಿ ಸಂಜೀವ್ ಖನ್ನ ಹಾಗೂ ಚಾಲಕ ಶ್ಯಾಮ್ ರೈ ವಿಚಾರಣೆ ಅನುಮತಿ ನೀಡುವಂತೆ ನಾವು ಕೋರ್ಟ್ ಮನವಿ ಮಾಡಿದ್ದೇವೆ' ಎಂದು ಸಿಬಿಐ ವಿಶೇಷ ಅಭಿಯೋಜಕಿ ಕವಿತಾ ಪಾಟೀಲ್ ಅವರು ತಿಳಿಸಿದ್ದಾರೆ.

ವಿಶೇಷ ನ್ಯಾಯಾಧೀಶ ಎಚ್.ಎಸ್. ಮಹಾಜನ್ ಅವರು ಸಿಬಿಐ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಈ ಮಧ್ಯೆ ಈ ಮೂವರು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೇಷನ್ಸ್ ಕೋರ್ಟ್ ಡಿಸೆಂಬರ್ 17ರವರೆಗೆ ವಿಸ್ತರಿಸಿದೆ.

SCROLL FOR NEXT