ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ 
ಪ್ರಧಾನ ಸುದ್ದಿ

ಎಂದಿಗೂ ಕೆಲಸ ಮಾಡಲು ಇಚ್ಛಿಸದವರು ಸರ್ಕಾರಿ ಕೆಲಸ ಅರಸುತ್ತಾರೆ: ವಸುಂಧರಾ ರಾಜೆ

ಸ್ವ ಉದ್ಯೋಗ ಮತ್ತು ಸಣ್ಣ ವ್ಯವಹಾರದತ್ತ ಮುಖ ಮಾಡಲು ಯುವಕರಿಗೆ ಕರೆ ಕೊಟ್ಟಿರುವ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಕೆಲಸ ಮಾಡಲು ಇಚ್ಛಿಸದವರಶ್ಟೇ

ಕೋಟಾ: ಸ್ವ ಉದ್ಯೋಗ ಮತ್ತು ಸಣ್ಣ ವ್ಯವಹಾರದತ್ತ ಮುಖ ಮಾಡಲು ಯುವಕರಿಗೆ ಕರೆ ಕೊಟ್ಟಿರುವ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಕೆಲಸ ಮಾಡಲು ಇಚ್ಛಿಸದವರಶ್ಟೇ ಸರ್ಕಾರಿ ಕೆಲಸಗಳನ್ನು ಹುಡುಕುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

"ಭಾರತದಲ್ಲಿ ಬಿಟ್ಟರೆ ವಿಶ್ವದಲ್ಲಿ ಇನ್ನೆಲ್ಲೂ ಸರ್ಕಾರಿ ಕೆಲಸಗಳಿಗೆ ಜನ ಹಪಾಹಪಿಸುವುದಿಲ್ಲ" ಎಂದಿರುವ ರಾಜೆ ಯುವಕರಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸೇರುವಂತೆ ಕರೆ ಕೊಟ್ಟಿದ್ದಾರೆ.

"ಯಾರಿಗೆ ಕೆಲಸ ಮಾಡಲು ಇಷ್ಟವಿಲ್ಲವೋ ಅವರಷ್ಟೇ ಸರ್ಕಾರಿ ಕೆಲಸಗಳನ್ನು ಹುಡುಕುತ್ತಾರೆ" ಎಂದು ಜಲವರ್ ನಲ್ಲಿ ಐ ಟಿ ಐ ವಿದ್ಯಾರ್ಥಿಗಳನ್ನುದ್ದೇಶಿಸಿ ವ್ಯಂಗ್ಯಭರಿತ ಮಾತುಗಳನ್ನಾಡಿದ್ದಾರೆ.

ಸ್ವ-ಉದ್ಯೋಗ ಮತ್ತು ಸಣ್ಣ ವ್ಯವಹಾರಗಳಿಂದ ತಮಗೂ ಕೆಲಸ ಸಿಗುವುದಲ್ಲದೆ ಮೂರು ನಾಲ್ಕು ಇತರರ ಜೀವನಕ್ಕೂ ಆಧಾರವಾಗುತ್ತದೆ ಎಂದು ಕೂಡ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT