ಮದ್ರಾಸ್ ಹೈಕೋರ್ಟ್ 
ಪ್ರಧಾನ ಸುದ್ದಿ

ದೇವಾಲಯಗಳಿಗೆ ಬೀಗ ಹಾಕಿ, ದೇವರುಗಳು ಶಾಂತಿಯಿಂದಿರಲಿ: ಹೈಕೋರ್ಟ್

ವಿರುಧುನಗರದಲ್ಲಿ ದೇವಾಲಾಯದ ಉತ್ಸವ ನಡೆಸಲು ನಿರಂತರವಾಗಿ ಎರಡು ಗ್ರಾಮಗಳು

ಮಧುರೈ: ವಿರುಧುನಗರದಲ್ಲಿ ದೇವಾಲಾಯದ ಉತ್ಸವ ನಡೆಸಲು ನಿರಂತರವಾಗಿ ಎರಡು  ಗ್ರಾಮಗಳು ನಡೆಸುತ್ತಿರುವ ಕಾದಾಟದ ಬಗ್ಗೆ ಅಸಮಧಾನ ತೋರಿರುವ ಮದ್ರಾಸ್ ಉಚ್ಛ ನ್ಯಾಯಾಲಯ (ಮಧುರೈ ಪೀಠ) ದೇವಾಲಯಗಳನ್ನು ಮುಚ್ಚಿಬಿಟ್ಟರೆ, ದೇವರನ್ನು ಪೂಜಿಸುವ ಕಿತ್ತಾಟದ ಜನರಿಂದ ದೇವರಿಗೆ ಮುಕ್ತಿ ದೊರಕಿ ನೆಮ್ಮದಿಯಿಂದ ಇರುತ್ತಾರೆ ಎಂದು ವ್ಯಂಗ್ಯವಾಗಿ ಹೇಳಿದೆ.

ತೀರ್ಪು ಬರೆದ ಮುಖ್ಯ ನ್ಯಾಯಾಧೀಶ ಸಂಜಯ್ ಕಿಶನ್ ಕೌಲ್, ಪಿ ಸೀನಿ ನೈಕ್ಕರ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ್ದಲ್ಲದೆ, 'ಧರ್ಮ ಎಂಬುದು ಜನಸಮುದಾಯಕ್ಕೆ ಓಪಿಯಂ' ಆಗಿದೆ, ಜನ ಸಮುದಾಯ ದೇವರನ್ನು ಪೂಜಿಸುವಾಗಲೂ ಕಾದಾಟ ನಿಲ್ಲಿಸುವುದಿಲ್ಲ ಎಂದಿದ್ದಾರೆ.

ಅರ್ಜಿದಾರ ಸಲ್ಲಿಸಿದ್ದ ಅರ್ಜಿಯಲ್ಲಿ, ವಿರುಧುನಗರದ ಮಲ್ಲಿಕಿನರುನಲ್ಲಿ ಈ ದೇವಾಲಯ ನಿರ್ಮಿಸಲಾಗಿತ್ತು. ಕ್ರಿಶ್ಣಪುರಮ್ ಮತ್ತು ಕೋವಿಲ್ ಪಟ್ಟಿಯ ಎರಡೂ ಗ್ರಾಮದ ಜನರು ಈ ದೇವರನ್ನು ಪೂಜಿಸುತ್ತಿದ್ದರು.

ಈ ಮಧ್ಯೆ ಮಹಿಮೈ ನಿಂದ  (ಪೂಜಾ ತೆರಿಗೆ) ವಿವಾದ ಎದ್ದಿತ್ತು ಆದರೆ ೧೯೭೪ ರಲ್ಲಿ ಇದು ಬಗೆಹರಿದಿತ್ತು. ಮತ್ತೆ ೨೦೧೦ ರಲ್ಲಿ ವಿವಾದ ಬುಗಿಲೆದ್ದು, ಎರಡು ಗ್ರಾಮಗಳಿಗೆ ಸಾಮಾನ್ಯವಾಗಿದ್ದ ದೇವಾಲಯವನ್ನು ಒಡೆದು, ಎರಡು ಹೊಸ ದೇವಾಲಾಯಗಳನ್ನು ಗ್ರಾಮಸ್ತರ ನೆರವಿಲ್ಲದೆ ಕಟ್ಟಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

SCROLL FOR NEXT