ಮದ್ರಾಸ್ ಹೈಕೋರ್ಟ್ 
ಪ್ರಧಾನ ಸುದ್ದಿ

ದೇವಾಲಯಗಳಿಗೆ ಬೀಗ ಹಾಕಿ, ದೇವರುಗಳು ಶಾಂತಿಯಿಂದಿರಲಿ: ಹೈಕೋರ್ಟ್

ವಿರುಧುನಗರದಲ್ಲಿ ದೇವಾಲಾಯದ ಉತ್ಸವ ನಡೆಸಲು ನಿರಂತರವಾಗಿ ಎರಡು ಗ್ರಾಮಗಳು

ಮಧುರೈ: ವಿರುಧುನಗರದಲ್ಲಿ ದೇವಾಲಾಯದ ಉತ್ಸವ ನಡೆಸಲು ನಿರಂತರವಾಗಿ ಎರಡು  ಗ್ರಾಮಗಳು ನಡೆಸುತ್ತಿರುವ ಕಾದಾಟದ ಬಗ್ಗೆ ಅಸಮಧಾನ ತೋರಿರುವ ಮದ್ರಾಸ್ ಉಚ್ಛ ನ್ಯಾಯಾಲಯ (ಮಧುರೈ ಪೀಠ) ದೇವಾಲಯಗಳನ್ನು ಮುಚ್ಚಿಬಿಟ್ಟರೆ, ದೇವರನ್ನು ಪೂಜಿಸುವ ಕಿತ್ತಾಟದ ಜನರಿಂದ ದೇವರಿಗೆ ಮುಕ್ತಿ ದೊರಕಿ ನೆಮ್ಮದಿಯಿಂದ ಇರುತ್ತಾರೆ ಎಂದು ವ್ಯಂಗ್ಯವಾಗಿ ಹೇಳಿದೆ.

ತೀರ್ಪು ಬರೆದ ಮುಖ್ಯ ನ್ಯಾಯಾಧೀಶ ಸಂಜಯ್ ಕಿಶನ್ ಕೌಲ್, ಪಿ ಸೀನಿ ನೈಕ್ಕರ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ್ದಲ್ಲದೆ, 'ಧರ್ಮ ಎಂಬುದು ಜನಸಮುದಾಯಕ್ಕೆ ಓಪಿಯಂ' ಆಗಿದೆ, ಜನ ಸಮುದಾಯ ದೇವರನ್ನು ಪೂಜಿಸುವಾಗಲೂ ಕಾದಾಟ ನಿಲ್ಲಿಸುವುದಿಲ್ಲ ಎಂದಿದ್ದಾರೆ.

ಅರ್ಜಿದಾರ ಸಲ್ಲಿಸಿದ್ದ ಅರ್ಜಿಯಲ್ಲಿ, ವಿರುಧುನಗರದ ಮಲ್ಲಿಕಿನರುನಲ್ಲಿ ಈ ದೇವಾಲಯ ನಿರ್ಮಿಸಲಾಗಿತ್ತು. ಕ್ರಿಶ್ಣಪುರಮ್ ಮತ್ತು ಕೋವಿಲ್ ಪಟ್ಟಿಯ ಎರಡೂ ಗ್ರಾಮದ ಜನರು ಈ ದೇವರನ್ನು ಪೂಜಿಸುತ್ತಿದ್ದರು.

ಈ ಮಧ್ಯೆ ಮಹಿಮೈ ನಿಂದ  (ಪೂಜಾ ತೆರಿಗೆ) ವಿವಾದ ಎದ್ದಿತ್ತು ಆದರೆ ೧೯೭೪ ರಲ್ಲಿ ಇದು ಬಗೆಹರಿದಿತ್ತು. ಮತ್ತೆ ೨೦೧೦ ರಲ್ಲಿ ವಿವಾದ ಬುಗಿಲೆದ್ದು, ಎರಡು ಗ್ರಾಮಗಳಿಗೆ ಸಾಮಾನ್ಯವಾಗಿದ್ದ ದೇವಾಲಯವನ್ನು ಒಡೆದು, ಎರಡು ಹೊಸ ದೇವಾಲಾಯಗಳನ್ನು ಗ್ರಾಮಸ್ತರ ನೆರವಿಲ್ಲದೆ ಕಟ್ಟಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT