ಡೆನ್ಮಾರ್ಕ್ ದಾಳಿಯ ಒಂದು ದೃಶ್ಯ 
ಪ್ರಧಾನ ಸುದ್ದಿ

ಕೋಪನ್ ಹೇಗನ್ ಗುಂಡಿನ ದಾಳಿ, ೨ ಸಾವು, ೫ ಮಂದಿಗೆ ಗಾಯ

ಪ್ರವಾದಿ ಮಹಮದ್ ಅವರನ್ನು ಚಿತ್ರಿಸಿದ್ದ ಕಲಾವಿದ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನಡೆದ ಗುಂಡಿನ ದಾಳಿ ಮತ್ತು ಕೆಲವೇ ಘಂಟೆಗಳ ನಂತರ

ಕೋಪನ್ ಹೇಗನ್: ಪ್ರವಾದಿ ಮಹಮದ್  ಅವರನ್ನು ಚಿತ್ರಿಸಿದ್ದ ಕಲಾವಿದ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನಡೆದ ಗುಂಡಿನ ದಾಳಿ ಮತ್ತು ಕೆಲವೇ ಘಂಟೆಗಳ ನಂತರ ನಡೆದ ಯಾಹೂದ್ಯರ ಪೂಜ್ಯಮಂದಿರದ ಮೇಲೆ ನಡೆದಿರುವ ಮತ್ತೊಂದು ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಐದು ಜನ ಪೊಲೀಸರು ಗಾಯಗೊಂಡಿದ್ದಾರೆ. ಪ್ಯಾರಿಸ್ ನ ಚಾರ್ಲಿ ಹೆಬ್ಡೋ ಮೇಲೆ ನಡೆದ ದಾಳಿಯ ನಂತರ ಕೆಲವೇ ದಿನಗಳಲ್ಲಿ ನಡೆದಿರುವ ಈ ದಾಳಿ ಕೋಪನ್ ಹೇಗನ್ ನಲ್ಲಿ ಭಯಭೀತಿ ಸೃಷ್ಟಿಸಿದೆ.

ಶನಿವಾರ ಸಂಜೆ ಈ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಯಹೂದ್ಯರ ದೇವಾಲಯದ ಮೇಲೆ ನಡೆದಿರುವ ದಾಳಿಗಳಿಗೆ ಸಂಬಂಧ ಇದೆಯೇ ಎಂದು ತಿಳಿದು ಬಂದಿಲ್ಲ ಎನ್ನುತ್ತಾರೆ ಪೊಲೀಸರು. ಎರಡೂ ದಾಳಿಗಳಲ್ಲಿ ದಾಳಿ ಮಾಡಿದವ ತಪ್ಪಿಸಿಕೊಂಡಿದ್ದಾನೆ.

ಈ ಭಯೋತ್ಪಾದಕ ದಾಳಿಯನ್ನು ಯೂರೋಪಿನ ಹಲವು ಮುಖಂಡರು ಖಂಡಿಸಿದ್ದಾರೆ. ಡೆನ್ಮಾರ್ಕ್ ಇಡೀ ಕಟ್ಟೆಚ್ಚರಿಕೆ ಘೋಷಿಸಿದ್ದು, ಭಯೋತ್ಪಾದಕರ ಶೋಧನೆ ನಡೆಯುತ್ತಿದೆ. "ಇದು ರಾಜಕೀಯ ದಾಳಿ ಆದುದರಿಂದ ಭಯೋತ್ಪಾದನೆ" ಎಂದಿದ್ದಾರೆ ಡೆನ್ಮಾರ್ಕ್ ಪ್ರಧಾನಿ ಹೆಲ್ಲೆ ಥಾರ್ನಿಂಗ್ ಸ್ಮಿಡ್ತ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT