ಸುರೇಶ್ ಭಾಯಿ ಪಟೇಲ್ 
ಪ್ರಧಾನ ಸುದ್ದಿ

ಗುಜರಾತ್‌ನ ವ್ಯಕ್ತಿಗೆ ಅಮೆರಿಕದಲ್ಲಿ ಹಲ್ಲೆ ಪ್ರಕರಣ: ಕ್ಷಮೆಯಾಚಿಸಿದ ಅಲಬಾಮಾ ಗವರ್ನರ್

ಕೆಲವು ದಿನಗಳ ಹಿಂದೆ ಅಲಬಾಮಾದಲ್ಲಿ 57 ವರ್ಷ ಪ್ರಾಯದ ಗುಜರಾತ್ ಮೂಲದ ಸುರೇಶ್ ಭಾಯಿ ಪಟೇಲ್ ಎಂಬ ವ್ಯಕ್ತಿಯನ್ನು ಅನಾವಶ್ಯಕವಾಗಿ...

ಅಲಬಾಮಾ: ಕೆಲವು ದಿನಗಳ ಹಿಂದೆ ಅಲಬಾಮಾದಲ್ಲಿ  57 ವರ್ಷ ಪ್ರಾಯದ  ಗುಜರಾತ್ ಮೂಲದ ಸುರೇಶ್ ಭಾಯಿ ಪಟೇಲ್ ಎಂಬ ವ್ಯಕ್ತಿಯನ್ನು  ಅನಾವಶ್ಯಕವಾಗಿ ಹೊಡೆದು ಆಂಶಿಕ ಪಾರ್ಶ್ವವಾಯುವಿಗೆ ಗುರಿ ಮಾಡಿ ಗಂಭೀರ ಸ್ಥಿತಿಗೆ ತಳ್ಳಿರುವ ಘಟನೆಯ ಬಗ್ಗೆ ಅಲಬಾಮಾ ಗವರ್ನರ್ ರಾಬರ್ಟ್ ಬೆನ್‌ಟ್ಲೀ ವಿಶಾದ ವ್ಯಕ್ತ ಪಡಿಸಿ ಕ್ಷಮೆ ಕೋರಿದ್ದಾರೆ.
ಭಾರತದ ವಾಣಿಜ್ಯ ದೂತಾಧಿಕಾರಿ ಅಜಿತ್ ಕುಮಾರ್ ಅವರಿಗೆ ಬೆನ್‌ಟ್ಲೀ ಪತ್ರ ಬರೆದಿದ್ದು,  ಸುರೇಶ್ ಭಾಯಿ ಅವರಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.  ಬೆನ್‌ಟ್ಲೀ ನಿನ್ನೆ ಅಜಿತ್ ಕುಮಾರ್ ಅವರನ್ನು ಭೇಟಿ ಮಾಡಿದ್ದರು.
ಸುರೇಶ್ ಭಾಯಿ ಅವರ ಮೇಲೆ  ಮೆಡಿಸನ್ ಪೊಲೀಸ್ ಇಲಾಖೆಯವರು ಮಾಡಿದ ದೌರ್ಜನ್ಯವನ್ನು ಖಂಡಿಸುತ್ತೇನೆ. ಮಿ. ಪಟೇಲ್ ಅವರಿಗೆ ಗಂಭೀರ ಗಾಯಗಳಾಗಿವೆ. ಅವರಿಗೆ ನ್ಯಾಯ ಒದಗಿಸುತ್ತೇನೆ ಎಂಬ ಭರವಸೆಯನ್ನು ನಾನು ಭಾರತ ಸರ್ಕಾರಕ್ಕೆ ನೀಡುತ್ತೇನೆ ಎಂದಿದ್ದಾರೆ.
ಫೆ.6ರಂದು ಬೆಳಗ್ಗೆ ವಾಕಿಂಗ್‌ಗೆ ಹೋಗುತ್ತಿದ್ದ ವೇಳೆ ಪ್ರಶ್ನಿಸಲ್ಪಟ್ಟಿದ್ದ ಸುರೇಶ್‌ ಭಾಯಿ ಪಟೇಲ್‌ ಅವರು ಇಂಗ್ಲಿಷ್‌ ಗೊತ್ತಿಲ್ಲದ ಕಾರಣಕ್ಕೆ ಪೊಲೀಸರಿಗೆ ಸೂಕ್ತ ಉತ್ತರ ನೀಡಲಾಗದೆ ತಡಬಡಿಸಿದ್ದರು. ಆಗ ಅಲಬಾಮಾ ಪೊಲೀಸ್‌ ದಳದ ಇಬ್ಬರು ಪೊಲೀಸರು ಪಟೇಲ್‌ ಅವರನ್ನು ಅನಗತ್ಯವಾಗಿ ಹಿಗ್ಗಾಮುಗ್ಗಾ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದರು.

ಒಟ್ಟು ಪರಿಣಾಮವಾಗಿ ಸುರೇಶ್‌ಭಾಯಿ ಪಟೇಲ್‌ ಅವರು ಆಂಶಿಕವಾಗಿ ಪಾರ್ಶ್ವವಾಯುವಿಗೆ ಗುರಿಯಾಗಿದ್ದರು. ಪ್ರಕೃತ ಅವರು ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಅಳವಡಿಸಲ್ಪಟ್ಟ ಸ್ಥಿತಿಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT