arrest (representational image) 
ಪ್ರಧಾನ ಸುದ್ದಿ

ದಾಖಲೆ ಸೋರಿಕೆ : ನಿವೃತ್ತ ಪತ್ರಕರ್ತ ಶಂತನು ಬಂಧನ

ಗೌಪ್ಯ ಮಾಹಿತಿಯನ್ನೊಳಗೊಂಡ ಕೇಂದ್ರ ಸರ್ಕಾರದ ಮಹತ್ವದ ದಾಖಲೆಗಳನ್ನು ಕದ್ದು ರಹಸ್ಯವಾಗಿ ತೈಲ ಕಂಪೆನಿಗಳು ಹಾಗೂ ಸರ್ಕಾರೇತರ ...

ನವದೆಹಲಿ: ಗೌಪ್ಯ ಮಾಹಿತಿಯನ್ನೊಳಗೊಂಡ ಕೇಂದ್ರ ಸರ್ಕಾರದ ಮಹತ್ವದ ದಾಖಲೆಗಳನ್ನು ಕದ್ದು ರಹಸ್ಯವಾಗಿ ತೈಲ ಕಂಪೆನಿಗಳು  ಹಾಗೂ ಸರ್ಕಾರೇತರ ಸಲಹೆಗಾರರಿಗೆ ಒದಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ  ನಿವೃತ್ತ ಪತ್ರಕರ್ತ ಶಂತನು ಸೈಕಿಯಾ ಸೇರಿದಂತೆ ಬಂಧಿತರ ಸಂಖ್ಯೆ 7ಕ್ಕೇರಿದೆ. ದೆಹಲಿ ಪೊಲೀಸರು ಈ ಪ್ರಕರಣದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಒಬ್ಬ ಉದ್ಯೋಗಿ ಹಾಗೂ ತೈಲ ಖಾತೆ ಸಚಿವಾಲಯದ ಇಬ್ಬರು  ಸಿಬ್ಬಂದಿ ಸಹಿತ  ೫ ಮಂದಿಯನ್ನು ಗುರುವಾರ  ಬಂಧಿಸಿದ್ದರು. ಶಂತನು ಸೈಕಿಯಾ  ಸದ್ಯ ಎನರ್ಜಿ ಪೋರ್ಟಲ್ ಎಂಬ ಸಂಸ್ಥೆ ನಡೆಸುತ್ತಿದ್ದು, ಕಡತಗಳನ್ನು ಸಂಬಂಧಪಟ್ಟವರಿಗೆ ತಲುಪಿಸುತ್ತಿದ್ದನು ಎಂದು ಆರೋಪಿಸಲಾಗಿದೆ ಜೊತೆಗೆ ಪ್ರಯಾಸ್ ಜೈನ್  ಎಂಬವರನ್ನೂ ಬಂಧಿಸಲಾಗಿದೆ.

ದೇಶದ ಮಹತ್ವದ ದಾಖಲೆಗಳನ್ನು ಕದ್ದು ತೈಲ ಕಂಪೆನಿ ಹಾಗೂ ಖಾಸಗಿ ಸಲಹೆಗಾರರಿಗೆ ಮಾರಾಟ ಮಾಡಿ ಹಣಗಳಿಸುತ್ತಿದ್ದ  ಈ ದಂಧೆ ಕಳೆದ ಕೆಲವು ತಿಂಗಳಿನಿಮದ ನಡೆದಿತ್ತು. ಈ ವಿದ್ರೋಹದ ವ್ಯವಹಾರದಲ್ಲಿ ಸುಮಾರು 9 ತೈಲ ಕಂಪೆನಿಗಳು ಭಾಗಿಯಾಗಿರುವ ಬಗ್ಗೆ  ಮಾಹಿತಿಯಿದೆ. ಹಾಗೆಯೇ ಇನ್ನೂ ಅನೇಕರು ಈ ದಂಧೆಯಲ್ಲಿ ತೊಡಗಿಕೊಂಡಿರುವ ಬಗ್ಗೆಯೂ ಮಾಹಿತಿ ದೊರೆತಿದೆ.

ತನಿಖೆ ಮುಂದುವರಿದಂತೆ ಇನ್ನೂ ಸಾಕಷ್ಟು ಆರೋಪಿಗಳು ಬಂಧನಕ್ಕೊಳಗಾಗುವ ಸಾಧ್ಯತೆ ದಟ್ಟವಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.  ನಿನ್ನೆ ದೆಹಲಿಯಾದ್ಯಂತ ಹಲವು ಕಚೇರಿಗಳ ಮೇಲೆ ಏಕಕಾಲಕ್ಕೆ  ಪೊಲೀಸರು ದಾಳಿ  ನಡೆಸಿದ್ದರು.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

Street Dog attack: ಬೀದಿ ನಾಯಿ ಸಮಸ್ಯೆಗೆ ಉಪಾಯ ಕಂಡುಕೊಂಡ ಗದಗ ಜನತೆ, ಕಾಟದಿಂದ ಮುಕ್ತಿಗೆ ಬಣ್ಣ ನೀರಿನ ಪ್ರಯೋಗ..!

ನಮ್ಮವರು ಬೇರೆ ಧರ್ಮದವರ ಪ್ರಾರ್ಥನೆ ಸ್ಥಳಗಳಿಗೆ ಹೋಗುವುದಿಲ್ಲವೇ? ಯದುವೀರ್ ಬಿಜೆಪಿ ಜೊತೆ ಸೇರಿ ಇತಿಹಾಸ ಮರೆತಿದ್ದಾರೆ: DKS

SCROLL FOR NEXT