ಸಲ್ಮಾನ್ ಖಾನ್ - ಕೃಷ್ಣಮೃಗ 
ಪ್ರಧಾನ ಸುದ್ದಿ

ಕೃಷ್ಣಮೃಗ ಗಣತಿಗೆ ಸಲ್ಮಾನ್ ಖಾನ್ ಗೆ ಆಹ್ವಾನ

ಗಂಜಾಮ್ ಜಿಲ್ಲೆಯ ಕೃಷ್ಣಮೃಗ ನಿರ್ವಹಣಾ ಸಮಿತಿ, ಭೆತ್ನಾಯ್ ನಲ್ಲಿ ನಡೆಯಲಿರುವ ಕೃಷ್ಣಮೃಗ ಗಣತಿಗೆ ಆಹ್ವಾನ

ಬರ್ಹಾಮಪುರ್: ಗಂಜಾಮ್ ಜಿಲ್ಲೆಯ ಕೃಷ್ಣಮೃಗ ನಿರ್ವಹಣಾ ಸಮಿತಿ, ಭೆತ್ನಾಯ್ ನಲ್ಲಿ ನಡೆಯಲಿರುವ ಕೃಷ್ಣಮೃಗ ಗಣತಿಗೆ ಆಹ್ವಾನ ನೀಡಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

೧೯೯೮ ರಲ್ಲಿ 'ಹಮ್ ಸಾಥ್ ಸಾಥ್ ಹೈ' ಚಲನಚಿತ್ರದ ಚಿತ್ರೀಕರಣದ ವೇಳೆ ಈ ಅಳಿವಿನಂಚಿನ ಪ್ರಾಣಿಯನ್ನು ಬೇಟೆಯಾಡಿದ ಆರೋಪವನ್ನು ೪೯ ವರ್ಷದ ನಟ ಸಲ್ಮಾನ್ ಖಾನ್ ಎದುರಿಸುತ್ತಿದ್ದಾರೆ.

ಸಮಿತಿಯ ಸಂಚಾಲಕ ಅಮೂಲ್ಯ ಉಪಾಧ್ಯಾಯ ಬರೆದಿರುವ ಈ ಪತ್ರದಲ್ಲಿ, ರಾಜಸ್ಥಾನದ ಬಿಶ್ನೋಯಿಸ್ ರೀತಿಯಲ್ಲೆ ಬೆಥ್ನಾಯ್ ನ ಗ್ರಾಮಸ್ಥರು ಕೃಷ್ಣಮೃಗದ ರಕ್ಷಣೆಯಲ್ಲಿ ತೊಡಗಿದ್ದಾರೆ. ಮಾರ್ಚ್ ೧ ರಂದು ಪ್ರಾದೇಶಿಕ ಅರಣ್ಯ ಅಧಿಕಾರಿಗಳ ಜೊತೆ ಸಮಿತಿ ಕೃಷ್ಣಮೃಗಗಳ ಎಣಿಕೆ ಮಾಡಲಿದ್ದು, ಈ ಗಣತಿಯನ್ನು ಮತ್ತು ಬೆಥ್ನಾಯ್ ಜನರ ಮತ್ತು ಪ್ರಾಣಿಗಳ ಸಹ ಜೀವನವನ್ನು ವೀಕ್ಷಿಸಲು ಖಾನ್ ಅವರು ಬರಬೇಕು ಎಂದು ಸಮಿತಿಯ ಸದಸ್ಯರು ಬಯಸಿದ್ದಾರೆ ಎಂದು ತಿಳಿಸಿದ್ದಾರೆ.

ಪತ್ರದ ಕೊನೆಗೆ, ಖಾನ್ ಅವರು ಬಂಧೂಕಿನ ಬದಲು ಕ್ಯಾಮರಾ ತರುವಂತೆ ಉಪಾಧ್ಯಾಯ ಸೂಚಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT