ಪ್ರಧಾನ ಸುದ್ದಿ

ಕೃಷ್ಣಮೃಗ ಗಣತಿಗೆ ಸಲ್ಮಾನ್ ಖಾನ್ ಗೆ ಆಹ್ವಾನ

Guruprasad Narayana

ಬರ್ಹಾಮಪುರ್: ಗಂಜಾಮ್ ಜಿಲ್ಲೆಯ ಕೃಷ್ಣಮೃಗ ನಿರ್ವಹಣಾ ಸಮಿತಿ, ಭೆತ್ನಾಯ್ ನಲ್ಲಿ ನಡೆಯಲಿರುವ ಕೃಷ್ಣಮೃಗ ಗಣತಿಗೆ ಆಹ್ವಾನ ನೀಡಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

೧೯೯೮ ರಲ್ಲಿ 'ಹಮ್ ಸಾಥ್ ಸಾಥ್ ಹೈ' ಚಲನಚಿತ್ರದ ಚಿತ್ರೀಕರಣದ ವೇಳೆ ಈ ಅಳಿವಿನಂಚಿನ ಪ್ರಾಣಿಯನ್ನು ಬೇಟೆಯಾಡಿದ ಆರೋಪವನ್ನು ೪೯ ವರ್ಷದ ನಟ ಸಲ್ಮಾನ್ ಖಾನ್ ಎದುರಿಸುತ್ತಿದ್ದಾರೆ.

ಸಮಿತಿಯ ಸಂಚಾಲಕ ಅಮೂಲ್ಯ ಉಪಾಧ್ಯಾಯ ಬರೆದಿರುವ ಈ ಪತ್ರದಲ್ಲಿ, ರಾಜಸ್ಥಾನದ ಬಿಶ್ನೋಯಿಸ್ ರೀತಿಯಲ್ಲೆ ಬೆಥ್ನಾಯ್ ನ ಗ್ರಾಮಸ್ಥರು ಕೃಷ್ಣಮೃಗದ ರಕ್ಷಣೆಯಲ್ಲಿ ತೊಡಗಿದ್ದಾರೆ. ಮಾರ್ಚ್ ೧ ರಂದು ಪ್ರಾದೇಶಿಕ ಅರಣ್ಯ ಅಧಿಕಾರಿಗಳ ಜೊತೆ ಸಮಿತಿ ಕೃಷ್ಣಮೃಗಗಳ ಎಣಿಕೆ ಮಾಡಲಿದ್ದು, ಈ ಗಣತಿಯನ್ನು ಮತ್ತು ಬೆಥ್ನಾಯ್ ಜನರ ಮತ್ತು ಪ್ರಾಣಿಗಳ ಸಹ ಜೀವನವನ್ನು ವೀಕ್ಷಿಸಲು ಖಾನ್ ಅವರು ಬರಬೇಕು ಎಂದು ಸಮಿತಿಯ ಸದಸ್ಯರು ಬಯಸಿದ್ದಾರೆ ಎಂದು ತಿಳಿಸಿದ್ದಾರೆ.

ಪತ್ರದ ಕೊನೆಗೆ, ಖಾನ್ ಅವರು ಬಂಧೂಕಿನ ಬದಲು ಕ್ಯಾಮರಾ ತರುವಂತೆ ಉಪಾಧ್ಯಾಯ ಸೂಚಿಸಿದ್ದಾರೆ.

SCROLL FOR NEXT