ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಬಾಪುನಗರದಲ್ಲಿ ಒಂಟೆ ಕಚ್ಚಿ ಓರ್ವನ ಸಾವು

ಒಂಟೆಯೊಂದು ತಲೆಯ ಮೇಲೆ ಕಚ್ಚಿದ್ದರ ಪರಿಣಾಮ ೪೫ ವರ್ಷದ ಮನುಷ್ಯನೊಬ್ಬ ಮೃತ ಪಟ್ಟ ಘಟನೆ...

ಅಹಮದಾಬಾದ್: ಒಂಟೆಯೊಂದು ತಲೆಯ ಮೇಲೆ ಕಚ್ಚಿದ್ದರ ಪರಿಣಾಮ ೪೫ ವರ್ಷದ ಮನುಷ್ಯನೊಬ್ಬ ಮೃತ ಪಟ್ಟ ಘಟನೆ ಸೋಮವಾರ ವರದಿಯಾಗಿದೆ.

ಒಂಟೆಯ ಮಾಲಿಕನನ್ನು ಹೆಚ್ಚಿನ ವಿಚಾರಣೆಗೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ನಗರದ ಬಾಪುನಗರ ಪ್ರದೇಶದ ಜಮುನಾನಗರ ಸ್ಲಂನಲ್ಲಿ ಗೋವಿಂದ ತ್ರಿವೇದಿ (೪೫) ನಡೆದು ಹೋಗುತ್ತಿದ್ದಾಗ ರಾತ್ರಿಯ ವೇಳೆಯಲ್ಲಿ ಕಟ್ಟಲಾಗಿದ್ದ ಒಂಟೆಯೊಂದು ಅವನ ತಲೆಗೆ ಕಚ್ಚಿದೆ. ಪ್ರಾಥಮಿಕ ಚಿಕೆತ್ಸೆಯ ಹೊರತಾಗಿಯೂ ಅವನು ಇಂದು ಪ್ರಾಣ ಬಿಟ್ಟಿದ್ದಾನೆ" ಎಂದು ಬಾಪುನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪಿ ಡಿ ಪರ್ಮಾರ್ ಹೇಳಿದ್ದಾರೆ. ಈ ಒಂಟೆಯ ಮಾಲೀಕ ಲಾಲ್ ಸಿಂಗ್ ಅವರನ್ನು ಬಂಧಿಸಿ ಒಂಟೆಗೆ ಯಾವುದಾದರೂ ಖಾಯಿಲೆಯಿತ್ತೋ? ಅಥವಾ ಈ ಹಿಂದೆ ಅದು ಇನ್ಯಾರನ್ನಾದರೂ ಕಚ್ಚಿತ್ತೋ ಎಂದು ಪ್ರಶ್ನಿಸಲಾಗುತ್ತಿದೆ ಎಂದು ಪರ್ಮಾರ್ ತಿಳಿಸಿದ್ದಾರೆ.

ಈ ಪ್ರಾಣಿಯ ಮಾಲಿಕನ ಬೇಜವಾಬ್ದಾರಿತನ ಏನಾದರು ತಿಳಿದು ಬಂದರೆ ಐಪಿಸಿ ಸೆಕ್ಷನ್ ೩೦೪ ರ ಪ್ರಕಾರ ಪ್ರಕರಣ ದಾಖಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಹೆಚ್ಚಿನ ವಿವರಗಳು ದೊರಕಲಿವೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT