ರೇಲ್ವೇ ಹಳಿ ಸ್ಫೋಟ (ಸಾಂದರ್ಭಿಕ ಚಿತ್ರ) 
ಪ್ರಧಾನ ಸುದ್ದಿ

ಮಾವೋವಾದಿಗಳಿಂದ ರೇಲ್ವೇ ಹಳಿ ಸ್ಫೋಟ

ಶನಿವಾರ ಬೆಳಗ್ಗೆ ಒಡಿಶಾದಲ್ಲಿ ಮಾವೋವಾದಿಗಳು ವಿಶಾಖಪಟ್ಟಣಂ- ರಾಯ್‌ಪುರ್ ರೇಲ್ವೇ ಹಳಿ ಸ್ಫೋಟಿಸಿದರ ಪರಿಣಾಮ...

ಒಡಿಶಾ: ಶನಿವಾರ ಬೆಳಗ್ಗೆ ಒಡಿಶಾದಲ್ಲಿ ಮಾವೋವಾದಿಗಳು ವಿಶಾಖಪಟ್ಟಣಂ- ರಾಯ್‌ಪುರ್ ನಡುವಿನ ರೇಲ್ವೇ ಹಳಿ ಸ್ಫೋಟಿಸಿದರ ಪರಿಣಾಮ ಓರ್ವ ವ್ಯಕ್ತಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ಇಲ್ಲಿವ ಮುನಿಗುಂಡ ರೇಲ್ವೇ ಸ್ಟೇಷನ್ ಸಮೀಪದಲ್ಲಿರುವ ಮುನಿಖೋಲ್ ಎಂಬಲ್ಲಿ ಕಡಿಮೆ ತೀವ್ರತೆಯಿರುವ ಸ್ಫೋಟಕ ಬಳಸಿ ಮಾವೋವಾದಿಗಳು ಸ್ಫೋಟ ನಡೆಸಿದ್ದಾರೆ ಎಂದು  ರಾಯ್‌ಗಡ ಎಸ್ಪಿ ಕೆ.ಸಿಬಾಸುಬ್ರಮಣಿ ಹೇಳಿದ್ದಾರೆ.

ಈ ಸ್ಫೋಟದಲ್ಲಿ ರೈಲ್ವೇ ಗ್ಯಾಂಗ್‌ಮೆನ್ ಹರಿ ಮಿರ್ದಾ ಅವರು ಗಾಯಗೊಂಡಿದ್ದಾರೆ ಎಂದು ರೈಲ್ವೇ ರಕ್ಷಣಾ ಪಡೆ ಅಧಿಕಾರಿಗಳು ಹೇಳಿದ್ದಾರೆ.

ಬಾಂಬ್ ನಿಗ್ರಹ ದಳ ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದು ಮಾವೋವಾದಿಗಳೇ ಈ ಕೃತ್ಯವೆಸಗಿದ್ದಾರೆಂದು ಶಂಕೆ ವ್ಯಕ್ತ ಪಡಿಸಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ರೈಲು ಸಂಚಾರಕ್ಕೆ ಅಡಚಣೆಯುಂಟಾಗಿದ್ದು ಕೆಸಿಂಗಾ, ಮುನಿಗುಂಡಾ ಮತ್ತು ರಾಯ್‌ಗಡ ರೈಲ್ವೇ ಸ್ಟೇಷನ್‌ನಲ್ಲಿ ಅರ್ಧ ಡಜನ್‌ನಷ್ಟು ರೈಲುಗಳನ್ನು ಸಂಚಾರ ಸ್ಥಗಿತಗೊಳಿಸಿ ನಿಲ್ಲಿಸಲಾಗಿದೆ.

ಭಾರತಕ್ಕೆ ಒಬಾಮಾ ಭೇಟಿ ನೀಡುವುದನ್ನು ವಿರೋಧಿಸಿ ಆ ಬಾಂಬ್ ಸ್ಫೋಟ ನಡೆಸಿದ್ದೇವೆ ಎಂದು ಹೇಳುವ ಬ್ಯಾನರ್ ಘಟನಾ ಸ್ಥಳದಲ್ಲಿ ಪತ್ತೆಯಾಗಿದ್ದು, ಸ್ಫೋಟದ ಹೊಣೆಯನ್ನು ಸಿಪಿಐ (ಮಾವೋವಾದಿ) ಸಂಘಟನೆ ಹೊತ್ತುಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT